ದೆಹಲಿ ಅಂಗಳದಲ್ಲಿ ಮುಖ್ಯಮಂತ್ರಿ v/s ರಾಜ್ಯಪಾಲ

ಅಲ್ಲದೆ ಕರ್ನಾಟಕ ಬಂದ್ ಕರೆ ನೀಡಿ ನಾಡಿನ ಜನತೆಗೆ ತೊಂದರೆ ಕೊಟ್ಟ ಬಿಜೆಪಿ ನೇತೃತ್ವದ ಕರ್ನಾಟಕದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರತಿವಾದಿಯನ್ನಾಗಿಸಿ ವಕೀಲ ಬೋಪಣ್ಣ ನೀಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಕೂಡಾ ಇಂದು ವಿಚಾರಣೆಗೆ ಬರಲಿದೆ.
ರಾಜ್ಯಪಾಲರ ವಿರುದ್ಧ ಮೊಕದ್ದಮೆ: ಈಗಾಗಲೇ ದೆಹಲಿಯಲ್ಲಿರುವ ಸಿಎಂ ಮತ್ತು ಈಶ್ವರಪ್ಪ ಜೇಟ್ಲಿ ನಾಯಕತ್ವದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಲಿದ್ದಾರೆ. ಇತ್ತ ಬಿಜೆಪಿ ನಾಯಕರು ರಾಷ್ಟ್ರಪತಿ ಭವನದ ಬಾಗಿಲು ತಟ್ಟುತ್ತಿದ್ದರೆ ಇತ್ತ ರಾಜ್ಯಪಾಲರ ನಡುವಳಿಕೆ ವಿರುದ್ದ ಸಿಎಂ ಪರವಾಗಿ ವಕೀಲರು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ. ಗವರ್ನರ್ ವಿರುದ್ದ ಕಾನೂನು ಸಮರಕ್ಕೆ ಖ್ಯಾತ ವಕೀಲರಾದ ರಾಮ್ ಜೇಠ್ಮಲಾನಿ ಮತ್ತು ಸೋಲಿ ಸೊರಾಬ್ಜಿ ಅವರ ಸಲಹೆಯನ್ನು ಸಿಎಂ ಪಡೆದು ಕೊಂಡಿದ್ದಾರೆ. [ಯಡಿಯೂರಪ್ಪ]












Click it and Unblock the Notifications