ದೆಹಲಿ ಅಂಗಳದಲ್ಲಿ ಮುಖ್ಯಮಂತ್ರಿ v/s ರಾಜ್ಯಪಾಲ

yeddyurappa
ಬೆಂಗಳೂರು ಜ 24 : ಇಂದಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಡುವಿಲ್ಲದ ಕೆಲಸ. ತಮಗೆ ಈ ಪರಿಸ್ಥಿತಿ ನಿರ್ಮಾಣ ಮಾಡಿದ ರಾಜ್ಯಪಾಲರ ವಿರುದ್ದ ಕಾನೂನು ಸಮರಕ್ಕೆ ಅಣಿಯಾಗಿದ್ದಾರೆ. ಅಲ್ಲದೆ ಇಂದು 11 .45 ಕ್ಕೆ ದೆಹಲಿಯಲ್ಲಿ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ರಾಜ್ಯಪಾಲರ ನಡತೆ ವಿರುದ್ದ ದೂರು ನೀಡಲಿದ್ದಾರೆ. ಇತ್ತ ವಕೀಲ ಸಿರಾಜಿನ್ ಭಾಷಾ ಹಾಗೂ ಕೆ.ಎನ್ ಬಾಲರಾಜ್ ಅವರು ಹೈಕೋರ್ಟ್ ನಲ್ಲಿ ಕೇವಿಯೆಟ್ ಅರ್ಜಿ ಸಲ್ಲಿಸಿ, ಬೆಂಗಳೂರಿನ ಲೋಕಾಯುಕ್ತರ ವಿಶೇಷ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಎರಡು ದಾವೆಗಳು ಇಂದು ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.

ಅಲ್ಲದೆ ಕರ್ನಾಟಕ ಬಂದ್ ಕರೆ ನೀಡಿ ನಾಡಿನ ಜನತೆಗೆ ತೊಂದರೆ ಕೊಟ್ಟ ಬಿಜೆಪಿ ನೇತೃತ್ವದ ಕರ್ನಾಟಕದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರತಿವಾದಿಯನ್ನಾಗಿಸಿ ವಕೀಲ ಬೋಪಣ್ಣ ನೀಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಕೂಡಾ ಇಂದು ವಿಚಾರಣೆಗೆ ಬರಲಿದೆ.

ರಾಜ್ಯಪಾಲರ ವಿರುದ್ಧ ಮೊಕದ್ದಮೆ: ಈಗಾಗಲೇ ದೆಹಲಿಯಲ್ಲಿರುವ ಸಿಎಂ ಮತ್ತು ಈಶ್ವರಪ್ಪ ಜೇಟ್ಲಿ ನಾಯಕತ್ವದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಲಿದ್ದಾರೆ. ಇತ್ತ ಬಿಜೆಪಿ ನಾಯಕರು ರಾಷ್ಟ್ರಪತಿ ಭವನದ ಬಾಗಿಲು ತಟ್ಟುತ್ತಿದ್ದರೆ ಇತ್ತ ರಾಜ್ಯಪಾಲರ ನಡುವಳಿಕೆ ವಿರುದ್ದ ಸಿಎಂ ಪರವಾಗಿ ವಕೀಲರು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ. ಗವರ್ನರ್ ವಿರುದ್ದ ಕಾನೂನು ಸಮರಕ್ಕೆ ಖ್ಯಾತ ವಕೀಲರಾದ ರಾಮ್ ಜೇಠ್ಮಲಾನಿ ಮತ್ತು ಸೋಲಿ ಸೊರಾಬ್ಜಿ ಅವರ ಸಲಹೆಯನ್ನು ಸಿಎಂ ಪಡೆದು ಕೊಂಡಿದ್ದಾರೆ. [ಯಡಿಯೂರಪ್ಪ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+