ಕುಟುಂಬ ಸಮೇತರಾಗಿ ಎಚ್ಡಿಕೆ ವಿಶ್ವಪರ್ಯಟನ

ಕ್ರಾಂತಿ ಮಾಡಲು ಹೊರಟಿದ್ದ ತೆನೆಹೊತ್ತ ಮಹಿಳೆಯ ನೇತಾರರೇ ದೇಶದಿಂದ ನಾಪತ್ತೆಯಾಗಿದ್ದಾರೆ. ಸಂಕ್ರಾಂತಿಯ ನಂತರ ಕರ್ನಾಟಕ ರಾಜಕೀಯದಲ್ಲಿ ಹೊಸಶಕೆ ಆರಂಭವಾಗಲಿದೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ಗೊತ್ತಿಲ್ಲದ ಯಡಿಯೂರಪ್ಪ ಅವರ ಸರಕಾರ ಕೆಳಗಿಳಿಯಲಿದೆ. ಅವರು ಮಾಡಿದ್ದ ಇನ್ನಷ್ಟು ಹಗರಣಗಳು ದಾಖಲೆ ಸಮೇತ ಬಯಲಾಗಲಿವೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಎಲ್ಲಿದ್ದೀರಾ?
ಸಂಕ್ರಾಂತಿ ಸಮಯದಲ್ಲಿ ಸುಗ್ಗಿಯ ಹುಗ್ಗಿಯಿರಲಿ ಎಳ್ಳುಬೆಲ್ಲ ಕೂಡ ಬೀರದೆ ನಾಪತ್ತೆಯಾಗಿದ್ದಾರೆ ಎಂದು ತೆನೆಹೊತ್ತ ಮಹಿಳೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಹಾಗಿದ್ರೆ, ರಾಜಕೀಯ ಬದಲಾವಣೆಯ ಹರಿಕಾರ ಕುಮಾರಸ್ವಾಮಿ ಅವರು ಸದ್ಯಕ್ಕೆ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಯಾರೊಂದಿಗಿದ್ದಾರೆ?
ನಂಬಲರ್ಹ ಮಾಹಿತಿಯ ಪ್ರಕಾರ, ಶ್ರೀಮಾನ್ ಕುಮಾರಸ್ವಾಮಿಯವರು ತಮ್ಮ 'ಶ್ರೀಮತಿ'ಯವರೊಂದಿಗೆ 'ಕುಟುಂಬ' ಸಮೇತರಾಗಿ ಹಾಯಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಸಂಕ್ರಾಂತಿಯಂದೇ ಬೆಂಗಳೂರಿನಿಂದ ಚುಮುಚುಮು ಚಳಿಯಲ್ಲಿ ವಿಮಾನವೇರಿದ ಸ್ವಾಮಿಯವರು ನೇರವಾಗಿ ಲಂಡನ್ ತಲುಪಿದ್ದಾರೆ. ಇನ್ ಫ್ಯಾಕ್ಟ್, ಹಂತಕರ ಮಚ್ಚಿಗೆ ಬಲಿಯಾದ ದಿವಾನ್ ಅಲಿ ಪರವಾಗಿ ಕುಮಾರಸ್ವಾಮಿ ಶೋಕ ಸಂದೇಶ ಕಳಿಸಿದ್ದೇ ಲಂಡನ್ ನಿಂದ.
ಅಲ್ಲಿಂದ ಅವರು ಸದ್ಯಕ್ಕೆ ದುಬೈನ ಮರಳುಗಾಡಿನಲ್ಲಿ ರಾಜಕೀಯ ಜಂಜಾಟಗಳನ್ನೆಲ್ಲ ಮರೆತು ಸಂಸಾರ ಸುಖದಲ್ಲಿ ತೇಲಾಡುತ್ತಿದ್ದಾರೆ ಎಂಬ ಮಾತು ಕೂಡ ವಿಧಾನಸೌಧದ ಗೋಡೆಯಿಂದ ಪ್ರತಿಧ್ವನಿಸಿದೆ. ಜನೆವರಿ 21ರ ಸುಮಾರಿಗೆ ಅವರು ಬೆಂಗಳೂರಿಗೆ ಮರಳಲಿದ್ದಾರೆ ಎಂದು ನಂಬಲರ್ಹ ಮಾಹಿತಿಯಿಂದ ತಿಳಿದುಬಂದಿದೆ. ಫೆಬ್ರವರಿ 10ರಂದು ರಥಸಪ್ತಮಿಯಂದು ಸೂರ್ಯ ತನ್ನ ಪಥವನ್ನು ಬದಲಿಸಲಿದ್ದಾನೆ. ಕರ್ನಾಟಕ ರಾಜಕೀಯ ದಿಕ್ಕೂ ಬದಲಾಗಲಿದೆಯೆ? ಎನಿ ವಿಚ್ ವೇ, ಹ್ಯಾಪಿ ಹಾಲಿಡೇಸ್ ಕುಮಾರಸ್ವಾಮಿ ಎಂಡ್ ಫ್ಯಾಮಿಲಿ. [ಕುಮಾರಸ್ವಾಮಿ]
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications