ದೇವೇಗೌಡ ಕುಟುಂಬದ ವಿರುದ್ಧ ಸಿಎಂ ವಾಗ್ದಾಳಿ

ಅಧಿವೇಶನ ಕಲಾಪ ಆರಂಭಗೊಂಡ ಕೂಡಲೇ ನಿಲುವಳಿ ಮಂಡನೆಗೆ ಸಭಾಧ್ಯಕ್ಷರ ರೂಲಿಂಗ್ ಪುನರ್ ಪರಿಶೀಲಿಸಲು ಆಗ್ರಹಿಸಿ ಪ್ರತಿಪಕ್ಷಗಳು ಧರಣಿ ಮುಂದುವರಿಸಿದವು. ಈ ಸಂದರ್ಭದಲ್ಲಿ ರೇವಣ್ಣ ಮಾಡಿದ ಆರೋಪದಿಂದ ಕೆಂಡಾಮಂಡಲವಾದ ಯಡಿಯೂರಪ್ಪ, ಕೆಎಂಎಫ್ ನಲ್ಲಿ 40ರಿಂದ 50 ಕೋಟಿ ರುಪಾಯಿಗಳಷ್ಟು ಅವ್ಯವಹಾರ ನಡೆದಿದೆ. ಎಸ್ ಎಂ ಕೃಷ್ಣ ಅವರಿಗೆ ಕೈಕೊಟ್ಟ ಅಪ್ಪ-ಮಕ್ಕಳಿಂದ ಬುದ್ಧಿ ಕಲಿಯುವ ಅವಶ್ಯಕತೆ ನನಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎರಡೇ ಪಕ್ಷಗಳು ಇರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದು, ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರೇವಣ್ಣ ಮಾಡಿದ ಟೀಕೆಗೆ ಯಡಿಯೂರಪ್ಪ ಈ ಪರಿ ಹರಿಹಾಯ್ದರು.(ಯಡಿಯೂರಪ್ಪ)












Click it and Unblock the Notifications