ತೆಲಂಗಾಣ ವಿಷಯದಲ್ಲಿ ರಾಜಿ ಇಲ್ಲ : ಕೆಸಿಆರ್

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಮಾತು ಕೊಟ್ಟಿದೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ಒತ್ತಡಕ್ಕೆ ಮಣಿದು ಮಾತು ಬದಲಿಸುವುದು ಸರಿಯಲ್ಲ. ನಾವು ಇಷ್ಟಕ್ಕೆ ಬಿಡುವುದಿಲ್ಲ. ಪ್ರತ್ಯೇಕ ರಾಜ್ಯವಾಗಲೇಬೇಕು ಎನ್ನುವುದು ನಮ್ಮ ಏಕೈಕ ಬೇಡಿಕೆ. ಹೈದರಾಬಾದ್ ರಾಜ್ಯದ ರಾಜಧಾನಿಯಾಗಬೇಕು. ಕೇಂದ್ರ ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಚಳವಳಿ ಆರಂಭಿಸಲಾಗುವುದು ಎಂದರು.
ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವುದು ನಮ್ಮ ಮೂಲಭೂತ ಬೇಡಿಕೆ. ಸುಮಾರು 60 ವರ್ಷಗಳಿಂದ ತೆಲಂಗಾಣ ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಿ ಎಂದು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸರಕಾರಗಳು ಮನವಿಯನ್ನು ನಿರ್ಲಕ್ಷಿಸುತ್ತಲೇ ಬಂದವು. ಹೀಗಾಗಿ ಪ್ರತ್ಯೇಕ ತೆಲಂಗಾಣದ ಕೂಗು ಗಟ್ಟಿಯಾಯಿತು ಎಂದು ಕರೀಂನಗರ ಜಿಲ್ಲೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.(ಆಂಧ್ರಪ್ರದೇಶ)












Click it and Unblock the Notifications