ವಿಶ್ವ ಕನ್ನಡ ಸಮ್ಮೇಳನಕ್ಕೆ ಬೆಳಗಾವಿ ಸಜ್ಜು

ಇನ್ನೆರಡು ತಿಂಗಳ ಅವಧಿಯಲ್ಲಿ ಈ ರಾಜ್ಯದಲ್ಲಿ "ಅಂಥದೇನೂ" ಸಂಭವಿಸದಿದ್ದರೆ ಸಮ್ಮೇಳನ ನಡೆದೇ ತೀರುತ್ತದೆ ಎಂದು ಕನ್ನಡ ಸಾಹಿತ್ಯ ಜಾತ್ರೆಯ ಅಭಿಮಾನಿಗಳು ಆಶಿಸಬಹುದಾಗಿದೆ. ನೈಸರ್ಗಿಕ ಪ್ರಕೋಪ, ಮಾನವ ನಿರ್ಮಿತ ಅವಘಡಗಳು ಮತ್ತು ರಾಜಕೀಯ ದೊಂಬರಾಟಗಳು ಸಂಭವಿಸದಿದ್ದರೆ ಈ ಬಾರಿ ಬೆಳಗಾವಿ ಸಮ್ಮೇಳನ ನಡೆಯುವುದು ಗ್ಯಾರಂಟಿ. ನಮ್ಮ ಈ ಅನಿಸಿಕೆಯನ್ನು ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಸಂಸ್ಕೃತಿ ಸಚಿವಾಲಯ, ಯಡಿಯೂರಪ್ಪ ಮತ್ತು ಗೋವಿಂದ ಕಾರಜೋಳ ಒಪ್ಪೇ ಒಪ್ಪುತ್ತಾರೆಂದು ಭಾವಿಸುತ್ತೇವೆ.
ಅಂದಹಾಗೆ ಈ ಸಮ್ಮೇಳನಕ್ಕೆ 30 ಕೋಟಿ ರೂ ತೆಗೆದಿಡಲಾಗಿದೆ. ಈ ವಿಷ್ಯವನ್ನು ಗೋವಿಂದ ಕಾರಜೋಳರು ಮಾಧ್ಯಮ ಪ್ರತಿನಿಧಿಗಳಿಗೆ ಮುಂದೆ ಬಿಚ್ಚಿಟ್ಟಿದ್ದಾರೆ. ಮುಂದೆ, ಮತ್ತದೇ ಪತ್ರಿಕಾಗೋಷ್ಠಿಯ ಒಣ ಕಥೆಗಳು... [ಬೆಳಗಾವಿ ಸಮ್ಮೇಳನ ಲೇಖನಗಳು]












Click it and Unblock the Notifications