ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ದೆಲಚೆರುವು ಸೂರಿಯ ಹತ್ಯೆಗೆ ಯತ್ನ

By Prasad
|
Google Oneindia Kannada News

Maddelacheruvu Suri
ಹೈದರಾಬಾದ್, ಜ. 03 : ಕಳೆದ ತಿಂಗಳಷ್ಟೇ ಬೆಂಗಳೂರಿನಲ್ಲಿ 50 ವಾಹನಗಳಲ್ಲಿ ಬೆಂಬಲಿಗರೊಂದಿಗೆ 'ರಕ್ತ ಚರಿತ್ರ' ಸಿನೆಮಾ ನೋಡಿದ್ದ ಮದ್ದೆಲಚೆರುವು ಸೂರಿಯ ಮೇಲೆ ಸಿನಿಮೀಯ ರೀತಿಯಲ್ಲಿ ಇಂದು ಮಧ್ಯಾಹ್ನ ಭೀಕರ ಗುಂಡಿನ ದಾಳಿ ಮಾಡಲಾಗಿದೆ.

ಬೈಕಿನ ಮೇಲೆ ಬಂದ ಇಬ್ಬರು ಅಪರಿಚಿತರು ಹೈದಾರಾಬಾದಿನ ಜ್ಯೂಬಿಲಿ ಹಿಲ್ಸ್ ನಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಸೂರಿಯ ಮೇಲೆ ಗುಂಡಿನ ಸುರಿಮಳೆ ಸುರಿಸಿದ್ದಾರೆ. ಸೂರಿಯ ಎದೆ ಮತ್ತು ಹೊಟ್ಟೆಯೊಳಗೆ ಗುಂಡುಗಳು ಹೊಕ್ಕಿದ್ದು, ಸೂರಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿರುವ ಸೂರಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಪರಾಧಿ ಹಿನ್ನೆಲೆಯಿರುವ ಮದ್ದೆಲಚೆರುವು ಸೂರಿಯ ಮೇಲೆ ಮತ್ತೊಬ್ಬ ರೌಡಿ ರಾಜಕಾರಣಿ ಪೆರಿಟಾಲ ರವಿಯನ್ನು ಹತ್ಯೆಗೈದಿರುವ ಆರೋಪವಿದೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿರುವ ರಕ್ತ ಚರಿತ್ರ ಮದ್ದೆಲಚೆರುವು ಸೂರಿ ಮತ್ತು ತೆಲುಗು ದೇಶಂ ಪಕ್ಷದ ಪೆರಿಟಾಲ ರವಿಯ ದ್ವೇಷದ ಕಥೆಯನ್ನೊಳಗೊಂಡಿದೆ. ಈ ಚಿತ್ರವನ್ನು ದಂಡುದಾಳಿಯೊಂದಿಗೆ ಬೆಂಗಳೂರಿನಲ್ಲಿ ನೋಡಿದ್ದ, ಕಥೆಯ ಬಗ್ಗೆ ತುಸು ಅಸಮಾಧಾನ ವ್ಯಕ್ತಪಡಿಸಿದ್ದರು.

ಸೂರಿಯ ಮೇಲೆ ಹತ್ಯಾದಾಳಿ ನಡೆದದ್ದು ತಿಳಿಯುತ್ತಿದ್ದಂತೆಯೇ ಅನಂತಪುರಂನಲ್ಲಿ ಸೂರಿಯ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.

English summary
Murder attempt on Maddelacheruvu Suri at Jubilee hills in Hyderabad by unknown persons. Maddelacheruvu Suri's condition is critical and he has been admitted to Apollo hospital. Rakta Charitra, movie by Ram Gopal Varma, story revolves around Maddelacheruvu Suri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X