ವೀರಾಜಪೇಟೆಯಲ್ಲಿ ಚಿರತೆ ಚರ್ಮ ವಶ

Cheetah skin seized 4 held, Virajpet
ವೀರಾಜಪೇಟೆ, ಡಿ.19: ಕೊಡಗಿನಲ್ಲಿ ವನ್ಯ ಪ್ರಾಣಿಗಳ ಹಾಗೂ ಅವುಗಳ ಚರ್ಮ ಮಾರಾಟ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಈ ದಂಧೆಯಲ್ಲಿ ನಿರತರಾದವರು ತಮ್ಮದೇ ಕೋಡ್ ವರ್ಡ್‌ಗಳನ್ನು ಬಳಸುತ್ತಿರುವ ಬಗ್ಗೆ ದಟ್ಸ್ ಕನ್ನಡ ಇತ್ತೀಚೆಗೆ ವರದಿಯೊಂದನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಚಿರತೆಯೊಂದನ್ನು ಹತ್ಯೆಗೈದು ಅದರ ಚರ್ಮವನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಜಾಲವನ್ನು ಭೇದಿಸಿರುವ ಆನೆಚೌಕೂರು ಅರಣ್ಯ ಪ್ರದೇಶ ಇಲಾಖೆ ಅಧಿಕಾರಿಗಳು ಚರ್ಮ ಸಹಿತ ನಾಲ್ವರನ್ನು ಬಂಧಿಸಿದೆ.

ಆದರೆ ಈ ದಂಧೆಯ ಪ್ರಮುಖ ಆರೋಪಿ ನಾಪತ್ತೆಯಾಗಿರುವುದು ಜಾಲದ ಹಿಂದಿನ ರಹಸ್ಯ ಚಟುವಟಿಕೆಯನ್ನು ಭೇದಿಸಲು ತೊಂದರೆಯಾಗಿದೆ. ಇದೀಗ ಚಿರತೆ ಚರ್ಮ ಸಹಿತ ಸಿಕ್ಕಿಬಿದ್ದವರು ವೀರಾಜಪೇಟೆಯ ನಿವಾಸಿಗಳಾದ ಖಾಲಿದ್, ಮಾಯೀಂ, ಹಸನ್, ಸುಬೇರ್ ಎಂಬುವರಾಗಿದ್ದು, ಇವರು ವೀರಾಜಪೇಟೆಯಲ್ಲಿ ಚಿರತೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಈ ಕುರಿತು ಆನೆಚೌಕೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ರವೀಂದ್ರಕುಮಾರ್‌ರವರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ಚರ್ಮ ಖರೀದಿಸುವ ವ್ಯಾಪಾರಿಗಳ ಸೋಗಿನಲ್ಲಿ ಸಿಬ್ಬಂದಿಗಳೊಂದಿಗೆ ತೆರಳಿ ಮಾಲು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಆಲಿ ಎಂಬಾತ ತಲೆ ಮರೆಸಿಕೊಂಡಿದ್ದು, ಆತನೇ ಈ ದಂಧೆಯ ಪ್ರಮುಖನೆಂದು ಹೇಳಲಾಗಿದೆ. ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ನಮಗೆ ಆಲಿ ಎಂಬಾತ ಚರ್ಮವನ್ನು ನೀಡಿದ್ದಾಗಿ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದೀಗ ತಲೆಮರೆಸಿಕೊಂಡಿರುವ ಆರೋಪಿ ಆಲಿ ಪತ್ತೆಗೆ ಕ್ರಮಕೈಗೊಂಡಿದ್ದು, ಆತ ಸೆರೆಸಿಕ್ಕಿದ್ದೇ ಆದಲ್ಲಿ ದಂಧೆಯ ಹಿಂದಿನ ರಹಸ್ಯ ಬಯಲಾಗುವ ಸಾಧ್ಯತೆಯಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+