ಕಾಂಗ್ರೆಸ್ಸನ್ನು ಭೂತದಂತೆ ಬೆಂಬತ್ತಿರುವ ವಿಕಿಲೀಕ್ಸ್

ಮುಸ್ಲಿಂ ಭಯೋತ್ಪಾದಕರಿಗಿಂತ ಹಿಂದೂ ಉಗ್ರವಾದಿಗಳೇ ಅಪಾಯಕಾರಿ ಎಂದಿದ್ದ ರಾಹುಲ್ ಗಾಂಧಿ ಈಗ ಆ ಹೇಳಿಕೆಯನ್ನೂ ಸಮರ್ಥಿಸಿಕೊಂಡು ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ರಾಹುಲ್ ಅಪ್ರಬುದ್ಧ, ತಿಳಿಗೇಡಿ ಎಂಬೆಲ್ಲ ವಿಶೇಷಣಗಳ ಬಾಣವನ್ನು ಹಿಂದೂ ನಾಯಕರು ರಾಹುಲ್ ಮೇಲೆ ಬಿಡುತ್ತಿದ್ದಾರೆ. ದೇಶದಲ್ಲಿ ಬೆರಳೆಣಿಕೆಯಷ್ಟು ಹಿಂದೂ ಉಗ್ರವಾದಿಗಳು ಇರಬಹುದು. ಆದರೆ, ಅವರನ್ನು ಲಷ್ಕರ್-ಇ-ತೊಯ್ಬಾಗೆ ಹೋಲಿಸುತ್ತಿರುವುದು ನಾಚಿಕೆಗೇಡು ಎಂದು ಶಿವಸೇನೆ ಕೆಂಡಕಾರಿದೆ. [ಓದಿರಿ : ಹಿಂದೂ ಉಗ್ರವಾದ ಹೇಳಿಕೆಗೆ ರಾಹುಲ್ ಸಮರ್ಥನೆ]
ರಾಹುಲ್ ನಂತರ ಸೋನಿಯಾ ಗಾಂಧಿ ಮತ್ತು ಪಿ. ಚಿದಂಬರಂ ಅವರ ಕುರಿತಂತೆಯೂ ವಿಕಿಸೋರಿಕೆಗಳು ಹೊರಬೀಳುತ್ತಿರುವುದು ಕಾಂಗ್ರೆಸ್ಸಿಗೆ ಭಾರೀ ತಲೆನೋವು ತಂದಿದೆ. ಭಾರತ ಮತ್ತು ಅಮೆರಿಕಾ ನಡುವಿನ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳನ್ನು ನಿಯಂತ್ರಿಸುವಲ್ಲಿ ಸೋನಿಯಾ ಸಂಪೂರ್ಣ ವಿಫಲರಾಗಿದ್ದರು ಎಂದು ಅಮೆರಿಕಾದ ದೂತಾವಾಸ ಸೋನಿಯಾರನ್ನು ತರಾಟೆಗೆ ತೆಗೆದುಕೊಂಡಿತ್ತು ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ದಕ್ಕಿದ ಅವಕಾಶಗಳನ್ನು ತಪ್ಪಿಸಿಕೊಳ್ಳುವುದರಲ್ಲಿ ಸೋನಿಯಾ ಸಿದ್ಧಹಸ್ತರು ಎಂದು ಲೇವಡಿ ಅಮೆರಿಕಾ ದೂತಾವಾಸ ಲೇವಡಿ ಮಾಡಿದ್ದನ್ನು ಪ್ರಸ್ತಾಪಿಸಿರುವ ವಿಕಿಲೀಕ್ಸ್, ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೇ ಅನುಕೂಲವಾಗುತ್ತದೆಂದು ತಿಳಿದಿದ್ದರೂ ಬಲಿಷ್ಠ ನಾಯಕತ್ವ ತೋರುವಲ್ಲಿ ಸೋನಿಯಾ ಸೋತಿದ್ದಾರೆ ಎಂದು ಪ್ರಸ್ತುತ ಜಕಾರ್ತಾದಲ್ಲಿರುವ ಅಮೆರಿಕಾದ ರಾಜಕಾರಣಿ ಟೆಡ್ ಓಸಿಯಸ್ ಹೇಳಿದ್ದಾರೆ ವೆಬ್ ಸೈಟ್ ಪ್ರಸ್ತಾಪಿಸಿದೆ.
ಪಿ. ಚಿದಂಬರಂ ಅವರನ್ನೂ ಬಿಡದ ವಿಕಿಲೀಕ್ಸ್, 2008ರ ನವೆಂಬರ್ 26ರಂದು ಆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಡೆವಿಡ್ ಕೋಲ್ಮನ್ ಹೆಡ್ಲಿಗೆ ಸಂಬಂಧಿಸಿದಂತೆ ಅಮೆರಿಕಾದೊಂದಿಗೆ ನೇರವಾಗಿ ಮಾಹಿತಿಗಳನ್ನು ಕೇಳಿದ್ದರು. ಆ ದಾಳಿಯಲ್ಲಿ ಹೆಡ್ಲಿ ಒಬ್ಬರೇ ಭಾಗಿಯಾಗಿರಲಿಕ್ಕಿಲ್ಲ ಎಂಬ ಸಂಶಯವನ್ನು ಅವರು ವ್ಯಕ್ತಪಡಿಸಿದ್ದರೆಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ. ಅಮೆರಿಕಾದ ತನಿಖೆಯ ಬಗ್ಗೆ ಭಾರತ ಸರಕಾರ ತೃಪ್ತಿ ವ್ಯಕ್ತಪಡಿಸಿದ್ದರೂ ಚಿದಂಬರಂ ಈ ಮಾಹಿತಿಯನ್ನು ಕೇಳಿದ್ದರು ಎಂದು ತನ್ನ ಭ್ರಷ್ಟಾಚಾರ ಬಯಲುಮಾಡುವ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications