ರತನ್ ಟಾಟಾ ಅವರೇ, ಏನ್ ಸ್ವಾಮಿ ಇದೂ?

ರೇಡಿಯಾ ಟೇಪ್ ವಿವಾದದಲ್ಲಿ ಸಿಲುಕಿರುವ ರತನ್ ಟಾಟಾ ಅವರು 2ಜಿ ತರಂಗಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗೆ ಪ್ರತಿಯಾಗಿ ರಾಜೀವ್ ಚಂದ್ರಶೇಖರ್ ಅವರು ತಮ್ಮ ಅಸಮಾಧಾನವನ್ನು ಈ ಪತ್ರದ ಮುಖಾಂತರ ಹರಿಯಬಿಟ್ಟಿದ್ದಾರೆ.
2ಜಿ ತರಂಗಗುಚ್ಛ ಹಗರಣದಲ್ಲಿ ಟಾಟಾ ಕಂಪನಿಯೇ ಫಲಾನುಭವಿಯಾಗಿದ್ದು, ಟೆಲಿಕಾಂ ಸಚಿವರೊಬ್ಬರು ತಮಗೆ 15 ಕೋಟಿ ರು. ಲಂಚ ಕೇಳಿದ್ದರೆಂದು ರತನ್ ಟಾಟಾ ಅನೇಕ ದಿನಗಳ ನಂತರ ಪ್ರಸ್ತಾಪಿಸಿರುವುದು ಅನೇಕರ ಹುಬ್ಬು ಏರುವಂತೆ ಮಾಡಿದೆ ಮತ್ತು ನಂಬಿಕಾರ್ಹವಾಗಿದ್ದ ಭಾರತದ ಅತಿದೊಡ್ಡ ಕಂಪನಿಯ ನಂಬುಗೆಗೆ ಪೆಟ್ಟು ತಂದಿದೆ ಎಂದು ಟೆಲಿಕಾಂ ಉದ್ಯೋಗಿಯೂ ಆಗಿರುವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ವಿಸ್ತೃತವಾಗಿ ಬರೆದಿರುವ ಅವರು, 2ಜಿ ತರಂಗಗುಚ್ಛದ ಡೀಲ್ ಪಡೆಯಲು ಭಾರೀ ಲಾಬಿ ನಡೆಸಿದ ಟಾಟಾ ಸಮೂಹದಿಂದ ಭಾರತದ ಬೊಕ್ಕಸಕ್ಕೆ ಸುಮಾರು 19074.8 ಕೋಟಿ ರು.ಯಷ್ಟು ನಷ್ಟವಾಗಿದೆ. ಈ ಹಗರಣದಲ್ಲಿ ಸಾಕಷ್ಟು ಗೋಲ್ ಮಾಲ್ ನಡೆದಿದ್ದರೂ ಟಾಟಾ ಸಮೂಹ ಅದರ ಲಾಭ ಪಡೆಯಲು ಮುಂದಾಯಿತು ಎಂದು ಆರೋಪಿಸಿದ್ದಾರೆ.
ಖ್ಯಾತಿಯ ಉತ್ತುಂಗಕ್ಕೇರಿರುವ ಅತ್ಯುತ್ಕೃಷ್ಟ ಕಂಪನಿಯಾಗಿರುವ ಟಾಟಾ ಸಮೂಹ ಲಾಬಿ ನಡೆಸಲು ಮೂರನೇ ವ್ಯಕ್ತಿಯ ಸಹಾಯ ಪಡೆದದ್ದೇಕೆ ಎಂದು ರಾಜೀವ್ ಅವರು ರತನ್ ಟಾಟಾ ರೇಡಿಯಾ ಜೊತೆ ನಡೆಸಿದ ಮಾತುಕತೆ ಕುರಿತು ಪ್ರಸ್ತಾಪಿಸಿದ್ದಾರೆ. ನಂಬಿಕಾರ್ಹತೆಗೆ ಧಕ್ಕೆ ತರಲು ಇಷ್ಟು ಸಾಕು ಎಂದು ರಾಜೀವ್ ಚಂದ್ರಶೇಖರ್ ಹರಿಹಾಯ್ದಿದ್ದಾರೆ.
ರತನ್ ಟಾಟಾ ಅಂಥವರು ಬದಲಾವಣೆಯ ಹರಿಕಾರರಾಗುವ ಬದಲು, ಮೂಕ ಪ್ರೇಕ್ಷಕರಂತೆ ವರ್ತಿಸಿ ಇಂಥ ಹಗರಣಗಳಿಗೆ ಮೇವು ಹಾಕಿದ್ದು ಮನಸ್ಸಿಗೆ ನೋವು ಉಂಟು ಮಾಡಿದೆ. ದೇಶದಲ್ಲಿ ಅತ್ಯುತ್ತಮ ಬ್ರಾಂಡ್ ಮೌಲ್ಯವಿರುವ ಮತ್ತು ಭಾರತದ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಏರಿಸಿರುವ ಟಾಟಾ ಸಮೂಹದ ಬಗ್ಗೆ ಮತ್ತು ಅದಕ್ಕಾಗಿ ದುಡಿದಿರುವ ರತನ್ ಟಾಟಾ ಅವರ ಬಗ್ಗೆ ಅಪಾರವಾದ ಗೌರವವಿದ್ದುದರಿಂದ ಈ ಪತ್ರ ಬರೆದಿರುವುದಾಗಿ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications