ಸರ್ಕಾರದ ಭದ್ರತೆಗೆ ರೇಣುಕಾ ಆಶ್ಲೇಷ ಬಲಿ ಪೂಜೆ

ತನ್ನ ಒಳಿತಿಗಾಗಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪರವಾಗಿ ತಾವು ಈ ಪೂಜಾ ಕೈಂಕರ್ಯವನ್ನು ಕೈಗೊಂಡಿರುವುದಾಗಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ. ಶುಭ್ರವಸ್ತ್ರಧಾರಿಯಾಗಿದ್ದ ಅವರು ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಈ ವಿಶೇಷ ಪೂಜೆಯಲ್ಲಿ ತಲ್ಲೀನರಾಗಿದ್ದರು.
ಶುಕ್ರವಾರ ರಾತ್ರಿ 1ಗಂಟೆಗೆ ಸಚಿವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಇಂದು ಬೆಳಗ್ಗೆ ಅವರು ತುಲಾಭಾರವನ್ನು ಮಾಡಿಸಲಿದ್ದಾರೆ. ಉತ್ತಮ ಆಡಳಿತವನ್ನು ಬಿಜೆಪಿ ಸರ್ಕಾರ ನೀಡಬೇಕು. ಸರ್ಕಾರಕ್ಕೆ ಯಾವುದೇ ಆಪತ್ತು ಬಾರದಿರಲಿ ಎಂಬ ಉದ್ದೇಶದಿಂದ ಈ ಪೂಜೆ ಮಾಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಪರವಾಗಿ ಪೂಜೆ ಮಾಡಿಸಲು ಇವರಿಗೆ ಮುಖ್ಯಮಂತ್ರಿಗಳೇ ಆದೇಶಿಸಿದರೋ ಅಥವಾ ಸ್ವತಃ ಅವರೇ ಪೂಜೆಗೆ ಮುಂದಾದರೋ ಎಂಬುದನ್ನು ರೇಣುಕಾಚಾರ್ಯ ಬಹಿರಂಗ ಪಡಿಸಲಿಲ್ಲ. ಒಟ್ಟಿನಲ್ಲಿ ಈ ಹಿಂದೆ ಸರ್ಕಾರದ ಭದ್ರತೆಗೆ ಮುಳುವಾಗಿದ್ದನ್ನು ಸ್ಮರಿಸಬಹುದು.












Click it and Unblock the Notifications