ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರದ ಭದ್ರತೆಗೆ ರೇಣುಕಾ ಆಶ್ಲೇಷ ಬಲಿ ಪೂಜೆ
ತನ್ನ ಒಳಿತಿಗಾಗಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪರವಾಗಿ ತಾವು ಈ ಪೂಜಾ ಕೈಂಕರ್ಯವನ್ನು ಕೈಗೊಂಡಿರುವುದಾಗಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ. ಶುಭ್ರವಸ್ತ್ರಧಾರಿಯಾಗಿದ್ದ ಅವರು ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಈ ವಿಶೇಷ ಪೂಜೆಯಲ್ಲಿ ತಲ್ಲೀನರಾಗಿದ್ದರು.
ಶುಕ್ರವಾರ ರಾತ್ರಿ 1ಗಂಟೆಗೆ ಸಚಿವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಇಂದು ಬೆಳಗ್ಗೆ ಅವರು ತುಲಾಭಾರವನ್ನು ಮಾಡಿಸಲಿದ್ದಾರೆ. ಉತ್ತಮ ಆಡಳಿತವನ್ನು ಬಿಜೆಪಿ ಸರ್ಕಾರ ನೀಡಬೇಕು. ಸರ್ಕಾರಕ್ಕೆ ಯಾವುದೇ ಆಪತ್ತು ಬಾರದಿರಲಿ ಎಂಬ ಉದ್ದೇಶದಿಂದ ಈ ಪೂಜೆ ಮಾಡಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಪರವಾಗಿ ಪೂಜೆ ಮಾಡಿಸಲು ಇವರಿಗೆ ಮುಖ್ಯಮಂತ್ರಿಗಳೇ ಆದೇಶಿಸಿದರೋ ಅಥವಾ ಸ್ವತಃ ಅವರೇ ಪೂಜೆಗೆ ಮುಂದಾದರೋ ಎಂಬುದನ್ನು ರೇಣುಕಾಚಾರ್ಯ ಬಹಿರಂಗ ಪಡಿಸಲಿಲ್ಲ. ಒಟ್ಟಿನಲ್ಲಿ ಈ ಹಿಂದೆ ಸರ್ಕಾರದ ಭದ್ರತೆಗೆ ಮುಳುವಾಗಿದ್ದನ್ನು ಸ್ಮರಿಸಬಹುದು.
Comments
English summary
Karnataka excise minister Renukacharya performs Ashlesha Bali Pooja in Kukke Subramanya temple on Saturdya 27, 2010. He arrived to Kukke on Fridya night at 1 pm. He performs this special pooja for sake of Yeddyurappa and BJP govt safeguard.
Story first published: Saturday, November 27, 2010, 10:44 [IST]