ಕೆಐಎಡಿಬಿಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ: ನಿರಾಣಿ

ಉದ್ಯಮಕ್ಕೆ ಮಾತ್ರ ಭೂಮಿ: ಕೆಐಎಡಿಬಿಯಿಂದ ಭೂಮಿ ಪಡೆದಿರುವ ಉದ್ಯಮಿಗಳು ಎರಡು ವರ್ಷದಲ್ಲಿ ಉದ್ಯಮ ಸ್ಥಾಪಿಸದಿದ್ದರೆ ಭೂಮಿ ವಾಪಾಸ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಂಗಳೂರು ಸುತ್ತಮುತ್ತ ಕೆಐಎಡಿಬಿಯಿಂದ ಜಮೀನು ಪಡೆದು ಉದ್ಯಮ ಸ್ಥಾಪಿಸದ ಉದ್ಯಮಿಗಳಿಂದ ಈಗಾಗಳೇ ಸುಮಾರು 480 ಎಕರೆ ಭೂಮಿಯನ್ನು ಹಿಂಪಡೆಯಲಾಗಿದೆ ಎಂದು ನಿರಾಣಿ ಹೇಳಿದರು.
"ಜಮೀನು ಹಂಚಿಕೆಯಲ್ಲಿ ತಪ್ಪುಗಳಾಗಿವೆ ನಿಜ. ಅದು ಮುಗಿದು ಹೋದ ಘಟನೆ. ಕೆಐಎಡಿಬಿಯಿಂದ ಮುಂದೆ ಅಂತಹ ತಪ್ಪುಗಳು ಆಗದ ರೀತಿಯಲ್ಲಿ ಭೂಮಿ ಹಂಚಿಕೆ ಮಾಡಲಾಗುವುದು. ಕೆಐಎಡಿಬಿಯನ್ನು ಮುಚ್ಚುವುದಿಲ್ಲ ಎಂದು ಮತ್ತೊಮ್ಮೆ ಹೇಳಿದರು. ಇನ್ನು ಮುಂದೆ ಉದ್ಯಮ ಆರಂಭಿಸುವವರಿಗೆ ಮಾತ್ರ ಆದ್ಯತೆ ಮೇರೆಗೆ ಜಮೀನು ನೀಡಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು.












Click it and Unblock the Notifications