ಯಡಿಯೂರಪ್ಪ ಭೇಟಿ ನೀಡಿದ ದೇವಸ್ಥಾನಗಳ ಪಟ್ಟಿ

ಕರ್ನಾಟಕ ಕೇರಳ ಆಂಧ್ರಪ್ರದೇಶ ಮತ್ತು ಇತರ ಅನೇಕ ರಾಜ್ಯಗಳಲ್ಲಿರುವ ದೇವಾಲಯಗಳು ಯಡ್ಡಿಗೆ ಎದುರಾಗಿದ್ದ ಸಮಸ್ಯೆಗಳನ್ನು ಗುಡ್ಡೆ ಹಾಕಿ ಬಿಸಾಕಿದವವು ಎಂಬೋಣವೆ. ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಏನಿಲ್ಲವೆಂದರೂ 56 ದೇವಸ್ಥಾನಗಳಿಗೆ ಭೇಟಿ ನೀಡಿರಬೇಕು. ಈ ಸಂಖ್ಯೆಯಲ್ಲಿ 20 ದೇವರುಗಳು ಮನೆ ದೇವರು ಇದ್ದ ಹಾಗೆ. ಕುರ್ಚಿಗೆ ಗಂಡಾಂತರ ಬಂದಾಗೆಲ್ಲ ದೇವರ ಮೊರೆ ಹೋಗಿ ಅಪಾಯದಿಂದ ಉಪಾಯವಾಗಿ ಪಾರಾಗಿದ್ದಾರೆ ನಮ್ಮ ಮಾನ್ಯ ಮುಖ್ಯಮಂತ್ರಿ.
ಅಧಿಕಾರಕ್ಕೆ ಬಂದ ನಂತರ 30 ತಿಂಗಳಲ್ಲಿ ಇವರು ಭೇಟಿ ನೀಡಿದ ದೇವಸ್ಥಾನಗಳ ಸಂಕ್ಷಿಪ್ತ ಪಟ್ಟಿ ಕೆಳಕಂಡಂತಿದೆ. ದೇವಸ್ಥಾನಕ್ಕೆ ಭೇಟಿ ಮಾಡುವುದಲ್ಲದೇ ಕನಿಷ್ಠ 1 ಕೋಟಿಯಿಂದ 10 ಕೋಟಿ ರುಪಾಯಿವರೆಗೂ ದೇವಸ್ಥಾನಕ್ಕೆ ಕಾಸನ್ನು ಕಾಣಿಕೆ ಅಥವಾ ದಕ್ಷಿಣೆಯಾಗಿ ನೀಡಿದ್ದಾರೆ. ಇದಲ್ಲದೆ, ಜಾತಿ ಬೇಧ ಎಣಿಸದೆ ಎಲ್ಲ ಜಾತಿ ವರ್ಗಳ ದೇವಸ್ಥಾನಕ್ಕೆ ಶಿರ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಬನ್ನಿ, ಕೆಲವು ದೇವಸ್ಥಾನಗಳಿಗೆ ನಾವೂ ಭೇಟಿ ಕೊಡೋಣ. ನಮ್ಮ ಸಮಸ್ಯೆಗಳೂ ಪಾರಾಗಲಿ. ಅದಕ್ಕೇನಂತೆ!
* ಪುಟ್ಟಪರ್ತಿ ಸಾಯಿಬಾಬಾ ದೇವಸ್ಥಾನ
* ಮಂತ್ರಾಲಯ
* ರಾಘವೇಂದ್ರ ಸ್ವಾಮಿ ಮಠ, ನವದೆಹಲಿ
* ಗಾಳಿ ಆಂಜನೇಯ ದೇವಸ್ಥಾನ, ಬೆಂಗಳೂರು
* ಗವಿಗಂಗಾಧರೇಶ್ವರ ದೇವಸ್ಥಾನ, ಬೆಂಗಳೂರು
* ವೈಷ್ಣೋ ದೇವಿ, ಜಮ್ಮು ಕಾಶ್ಮೀರ
* ಕಣ್ಣೂರಿನ ರಾಜರಾಜೇಶ್ವರಿ ದೇವಸ್ಥಾನ
* ಕಡಲೂರಿನ ಹಯಗ್ರೀವ ದೇವಸ್ಥಾನ
* ಶ್ರೀಕಾಳಹಸ್ತಿ, ಆಂಧ್ರಪ್ರದೇಶ
* ತಿರುಪತಿ ವೆಂಕಟೇಶ್ವರ, ತಿರುಮಲ
* ಶಿರಡಿ ಸಾಯಿಬಾಬಾ, ಮಹಾರಾಷ್ಟ್ರ
* ಕುಕ್ಕೆ ಸುಬ್ರಮಣ್ಯ, ದಕ್ಷಿಣ ಕನ್ನಡ
* ಹಲಸೂರು ಸೋಮೇಶ್ವರ ದೇವಸ್ಥಾನ, ಬೆಂಗಳೂರು
* ಬಸವನಗುಡಿ ದೊಡ್ಡಗಣೇಶ ದೇವಸ್ಥಾನ
* ತುಮಕೂರು ಸಿದ್ಧಗಂಗಾ ಮಠ
* ಹುಬ್ಬಳ್ಳಿ ಮೂರುಸಾವಿರ ಮಠ
* ಹುಬ್ಬಳ್ಳಿ ಸಿದ್ದಾರೂಢ ಮಠ
* ಮೈಸೂರು ಚಾಮುಂಡೇಶ್ವರಿ
* ವಿದ್ಯಾಪೀಠದ ಶ್ರೀ ಕೃಷ್ಣ ಮಠ, ಬೆಂಗಳೂರು
* ಬಸವನಗುಡಿ ಶ್ರೀ ರಾಘವೇಂದ್ರ ಮಠ
* ಉಡುಪಿ ಶ್ರೀಕೃಷ್ಣ ಮಠ
* ಕಾಡುಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರಂ
* ಬಾಳೆಹೊನ್ನೂರಿನ ರಂಭಾಪುರಿ ಮಠ
* ಸರ್ಕಲ್ ಮಾರಮ್ಮ, ಯಶವಂತಪುರ
* ಗದಗಿನ ತೋಂಟದಾರ್ಯ ಮಠ
* ವೀರೇಶ್ವರ ಆಶ್ರಮ ಗದಗ
* ಸಾಯಿಬಾಬಾ ಮಂದಿರ, ತ್ಯಾಗರಾಜ ನಗರ
ಪಟ್ಟಿ ಮಾಡುವಾಗ ನಾವು ಕೆಲವು ದೇಗುಲಗಳ ಹೆಸರುಗಳನ್ನು ಮರೆತಿರಬಹುದು. ನಿಮಗೆ ಗೊತ್ತಿದ್ದರೆ ಸೇರಿಸಿ.












Click it and Unblock the Notifications