ಯಡಿಯೂರಪ್ಪ ಭೇಟಿ ನೀಡಿದ ದೇವಸ್ಥಾನಗಳ ಪಟ್ಟಿ

ಕರ್ನಾಟಕ ಕೇರಳ ಆಂಧ್ರಪ್ರದೇಶ ಮತ್ತು ಇತರ ಅನೇಕ ರಾಜ್ಯಗಳಲ್ಲಿರುವ ದೇವಾಲಯಗಳು ಯಡ್ಡಿಗೆ ಎದುರಾಗಿದ್ದ ಸಮಸ್ಯೆಗಳನ್ನು ಗುಡ್ಡೆ ಹಾಕಿ ಬಿಸಾಕಿದವವು ಎಂಬೋಣವೆ. ಅಧಿಕಾರಕ್ಕೆ ಬಂದ ನಂತರ ಯಡಿಯೂರಪ್ಪ ಏನಿಲ್ಲವೆಂದರೂ 56 ದೇವಸ್ಥಾನಗಳಿಗೆ ಭೇಟಿ ನೀಡಿರಬೇಕು. ಈ ಸಂಖ್ಯೆಯಲ್ಲಿ 20 ದೇವರುಗಳು ಮನೆ ದೇವರು ಇದ್ದ ಹಾಗೆ. ಕುರ್ಚಿಗೆ ಗಂಡಾಂತರ ಬಂದಾಗೆಲ್ಲ ದೇವರ ಮೊರೆ ಹೋಗಿ ಅಪಾಯದಿಂದ ಉಪಾಯವಾಗಿ ಪಾರಾಗಿದ್ದಾರೆ ನಮ್ಮ ಮಾನ್ಯ ಮುಖ್ಯಮಂತ್ರಿ.
ಅಧಿಕಾರಕ್ಕೆ ಬಂದ ನಂತರ 30 ತಿಂಗಳಲ್ಲಿ ಇವರು ಭೇಟಿ ನೀಡಿದ ದೇವಸ್ಥಾನಗಳ ಸಂಕ್ಷಿಪ್ತ ಪಟ್ಟಿ ಕೆಳಕಂಡಂತಿದೆ. ದೇವಸ್ಥಾನಕ್ಕೆ ಭೇಟಿ ಮಾಡುವುದಲ್ಲದೇ ಕನಿಷ್ಠ 1 ಕೋಟಿಯಿಂದ 10 ಕೋಟಿ ರುಪಾಯಿವರೆಗೂ ದೇವಸ್ಥಾನಕ್ಕೆ ಕಾಸನ್ನು ಕಾಣಿಕೆ ಅಥವಾ ದಕ್ಷಿಣೆಯಾಗಿ ನೀಡಿದ್ದಾರೆ. ಇದಲ್ಲದೆ, ಜಾತಿ ಬೇಧ ಎಣಿಸದೆ ಎಲ್ಲ ಜಾತಿ ವರ್ಗಳ ದೇವಸ್ಥಾನಕ್ಕೆ ಶಿರ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಬನ್ನಿ, ಕೆಲವು ದೇವಸ್ಥಾನಗಳಿಗೆ ನಾವೂ ಭೇಟಿ ಕೊಡೋಣ. ನಮ್ಮ ಸಮಸ್ಯೆಗಳೂ ಪಾರಾಗಲಿ. ಅದಕ್ಕೇನಂತೆ!
* ಪುಟ್ಟಪರ್ತಿ ಸಾಯಿಬಾಬಾ ದೇವಸ್ಥಾನ
* ಮಂತ್ರಾಲಯ
* ರಾಘವೇಂದ್ರ ಸ್ವಾಮಿ ಮಠ, ನವದೆಹಲಿ
* ಗಾಳಿ ಆಂಜನೇಯ ದೇವಸ್ಥಾನ, ಬೆಂಗಳೂರು
* ಗವಿಗಂಗಾಧರೇಶ್ವರ ದೇವಸ್ಥಾನ, ಬೆಂಗಳೂರು
* ವೈಷ್ಣೋ ದೇವಿ, ಜಮ್ಮು ಕಾಶ್ಮೀರ
* ಕಣ್ಣೂರಿನ ರಾಜರಾಜೇಶ್ವರಿ ದೇವಸ್ಥಾನ
* ಕಡಲೂರಿನ ಹಯಗ್ರೀವ ದೇವಸ್ಥಾನ
* ಶ್ರೀಕಾಳಹಸ್ತಿ, ಆಂಧ್ರಪ್ರದೇಶ
* ತಿರುಪತಿ ವೆಂಕಟೇಶ್ವರ, ತಿರುಮಲ
* ಶಿರಡಿ ಸಾಯಿಬಾಬಾ, ಮಹಾರಾಷ್ಟ್ರ
* ಕುಕ್ಕೆ ಸುಬ್ರಮಣ್ಯ, ದಕ್ಷಿಣ ಕನ್ನಡ
* ಹಲಸೂರು ಸೋಮೇಶ್ವರ ದೇವಸ್ಥಾನ, ಬೆಂಗಳೂರು
* ಬಸವನಗುಡಿ ದೊಡ್ಡಗಣೇಶ ದೇವಸ್ಥಾನ
* ತುಮಕೂರು ಸಿದ್ಧಗಂಗಾ ಮಠ
* ಹುಬ್ಬಳ್ಳಿ ಮೂರುಸಾವಿರ ಮಠ
* ಹುಬ್ಬಳ್ಳಿ ಸಿದ್ದಾರೂಢ ಮಠ
* ಮೈಸೂರು ಚಾಮುಂಡೇಶ್ವರಿ
* ವಿದ್ಯಾಪೀಠದ ಶ್ರೀ ಕೃಷ್ಣ ಮಠ, ಬೆಂಗಳೂರು
* ಬಸವನಗುಡಿ ಶ್ರೀ ರಾಘವೇಂದ್ರ ಮಠ
* ಉಡುಪಿ ಶ್ರೀಕೃಷ್ಣ ಮಠ
* ಕಾಡುಮಲ್ಲೇಶ್ವರ ದೇವಸ್ಥಾನ, ಮಲ್ಲೇಶ್ವರಂ
* ಬಾಳೆಹೊನ್ನೂರಿನ ರಂಭಾಪುರಿ ಮಠ
* ಸರ್ಕಲ್ ಮಾರಮ್ಮ, ಯಶವಂತಪುರ
* ಗದಗಿನ ತೋಂಟದಾರ್ಯ ಮಠ
* ವೀರೇಶ್ವರ ಆಶ್ರಮ ಗದಗ
* ಸಾಯಿಬಾಬಾ ಮಂದಿರ, ತ್ಯಾಗರಾಜ ನಗರ
ಪಟ್ಟಿ ಮಾಡುವಾಗ ನಾವು ಕೆಲವು ದೇಗುಲಗಳ ಹೆಸರುಗಳನ್ನು ಮರೆತಿರಬಹುದು. ನಿಮಗೆ ಗೊತ್ತಿದ್ದರೆ ಸೇರಿಸಿ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications