ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕದ ಮಾನ ಹರಾಜು : ಎಸ್ಸೆಂ ಕೃಷ್ಣ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಅಂದರೆ ದೇಶದಲ್ಲಿ ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಹೊಂದಿರುವ ರಾಜ್ಯವಾಗಿತ್ತು. ಆದರೆ, ಬಿಜೆಪಿ ಅಧಿಕಾರಿಕ್ಕೆ ಬಂದ ನಂತರ ಡಿನೋಟಿಫಿಕೇಷನ್ ಮತ್ತು ಗಣಿ ಲೂಟಿ ಹಾಗೂ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನ ಗಳಿಸುವ ಮೂಲಕ ಕರ್ನಾಟಕದ ಮರ್ಯಾದೆಯನ್ನು ಹರಾಜಿಗಿಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇದೀಗ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಮುಖ್ಯಮಂತ್ರಿಯಿಂದ ಆರಂಭವಾಗಿರುವ ಲಂಚತನ ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಾಗಿದೆ. ಈ ಎಲ್ಲ ಸಾಧನೆಗೆ ಬಿಜೆಪಿ ಸರಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ ಎಂದು ಕೃಷ್ಣ ಕಿಡಿಕಾರಿದರು. ನನ್ನ ಅವಧಿಯಲ್ಲಿ ನಡೆದಿರುವ ಡಿನೋಟಿಫಿಕೇಷನ್ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ವಹಿಸಿದರೆ ಅದನ್ನು ಸ್ವಾಗತಿಸುವುದಾಗಿ ಕೃಷ್ಣ ಸ್ಪಷ್ಟಪಡಿಸಿದರು.
Comments
ಬಿಜೆಪಿ ಯಡಿಯೂರಪ್ಪ ಮೈಸೂರು ಡಿನೋಟಿಫಿಕೇಷನ್ ಎಚ್ ಡಿ ಕುಮಾರಸ್ವಾಮಿ bjp government yediyurappa denotification mysore
English summary
Karnatakas pride and self esteem put to dust, laments external affairs minister S M Krishna in Mysore. He decried the shameless, ruthless land looting by politicians in Karnatka. SMK also challenged BSY to investigate land de-notification deals, if ever has taken place during his tenure ( 1999-2004 ) as the Chief Minister of Karnataka.
Story first published: Saturday, November 20, 2010, 17:01 [IST]