Get Updates
Get notified of breaking news, exclusive insights, and must-see stories!

ನಿಗಮ ಮಂಡಳಿ ನೇಮಕ ವಲಸೆ ಶಾಸಕರಿಗೂ ಸ್ಥಾನ

Minister Vishveshwar Hegade Kageri
ಬೆಂಗಳೂರು, ನ.19: ಗುರುವಾರ ನಡೆದ ಮಹತ್ತರ ಬೆಳವಣಿಗೆಯೊಂದರಲ್ಲಿ 29 ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. "ಆಪರೇಶನ್ ಕಮಲ" ಮೂಲಕ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಮೂವರು ಮಾಜಿ ಶಾಸಕರಿಗೂ ಅಧ್ಯಕ್ಷ ಸ್ಥಾನ ನೀಡಿ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿಯ ಏಳು ಮಂದಿ ಶಾಸಕರಿಗೆ ನಿಗಮ/ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಇನ್ನುಳಿದಂತೆ 19 ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ವಿವಿಧ ನಿಗಮ/ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಪಟ್ಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗಾರರಿಗೆ ತಿಳಿಸಿದರು.

ನಿಗಮ/ಮಂಡಳಿಗಳ ಅಧ್ಯಕ್ಷರ ಪಟ್ಟಿ ಹೀಗಿದೆ:
'ಆಪರೇಷನ್ ಕಮಲ" ಮೂಲಕ ಬಿಜೆಪಿಗೆ ಬಂದವರು:
* ಎಂ.ನಾರಾಯಣ ಸ್ವಾಮಿ: ಕರ್ನಾಟಕ ರಾಜ್ಯ ಉಗ್ರಾಣ ನಿಗಮ
* ಎಂ.ಸಿ.ಅಶ್ವತ್ಥ್: ಕರ್ನಾಟಕ ವಿದ್ಯುತ್ ಕಾರ್ಖಾನೆ
* ಎಸ್.ವಿ. ರಾಮಚಂದ್ರ: ಹಟ್ಟಿ ಚಿನ್ನದ ಗಣಿ.

ಬಿಜೆಪಿ ಶಾಸಕರು:
* ಚಿಕ್ಕಣ್ಣಗೌಡ- ಕರ್ನಾಟಕ ಭೂಸೇನಾ ನಿಗಮ
* ಜಗದೀಶ್ ಮೆಟ್ಟಗೂಡ್- ಮೈಸೂರು ಮಿನರಲ್ಸ್ ಲಿಮಿಟೆಡ್
* ಬಸವರಾಜ ನಾಯಕ್- ಬಂಜಾರ ಅಭಿವೃದ್ಧಿ ನಿಗಮ
* ಕಳಕಪ್ಪ ಬಂಡಿ- ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
* ಎಸ್.ರಘು- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
* ಎಸ್.ಅಂಗಾರ- ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ನಿಗಮ
* ಸಿದ್ದು ಸವದಿ- ಕರ್ನಾಟಕ ರಾಜ್ಯ ವಿದ್ಯುತ್ ಮಗ್ಗಗಳ ಅಭಿವೃದ್ಧಿ ನಿಗಮ.

ಪಕ್ಷದ ಮುಖಂಡರು/ಕಾರ್ಯಕರ್ತರು:
* ಸುಲೋಚನಾ ಭಟ್: ಬಾಲಭವನ ಸೊಸೈಟಿ, ಬೆಂಗಳೂರು
* ವಿನೋದ್ ಪ್ರಭು: ಕರ್ನಾಟಕ ಗೇರು ಅಭಿವೃದ್ಧಿ ನಿಗಮ
* ಉಮೇಶ ಬಂಟೋಡ್ಕರ್: ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ
* ರೇಖಾ ಹುಲಿಯಪ್ಪಗೌಡ: ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮ
* ನಿತಿನ್ ಕುಮಾರ್: ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ
* ರಾಮಲಿಂಗಪ್ಪ ಬಳ್ಳಾರಿ: ಕೇಂದ್ರ ಪರಿಹಾರ ಸಮಿತಿ, ಬೆಂಗಳೂರು
* ಡಾ.ಮಂಗಳಾ ಶ್ರೀಧರ್: ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
* ರಘುನಾಥ ಮಲ್ಕಾಪುರ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
* ಎಂ.ಕೆ.ಪ್ರಾಣೇಶ್: ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆ.

* ಗಿರೀಶ್ ಪಟೇಲ್: ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ
* ಕೆ.ಎಂ.ಹನುಮಂತರಾಯಪ್ಪ: ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ
* ಭೋಜರಾಜ ಕರೂದಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
* ಲಿಂಬಣ್ಣನವರ್: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
* ಬಿ.ಎನ್.ಶಂಕರ ಪೂಜಾರಿ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
* ಡಿ. ರಾಮಲಿಂಗಯ್ಯ: ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ, ಮೈಸೂರು
* ಮಹೇಶ್ ತೆಂಗಿನಕಾಯಿ: ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ.
* ಷಣ್ಮುಗಪ್ಪ ಗುರಿಕಾರ: ಎನ್‌ಜಿಇಎಫ್, ಹುಬ್ಬಳ್ಳಿ
* ವೆಂಕಟಮುನಿಯಪ್ಪ: ಕರ್ನಾಟಕ ಮಾಂಸ ಮತ್ತು ಕೋಳಿ ಮಾರಾಟ ನಿಗಮ
* ಡಾ.ವೆಂಕಟೇಶ ಗದ್ದಿಮನಿ: ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ, ಗುಲ್ಬರ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+