ಗ್ರಾಮ ಗ್ರಾಮಗಳಿಗೂ ಬ್ರಾಡ್ ಬ್ಯಾಂಡ್ ಇಂಟರ್ನೆಟ್
ರಾಜ್ಯ ಸರ್ಕಾರದ 'ಇ-ಪಿಸಿಒ' (ಇಲೆಕ್ಟ್ರಾನಿಕ್ ಸಾರ್ವಜನಿಕ ದೂರವಾಣಿ ಕೇಂದ್ರ) ಯೋಜನೆಗೆ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. 'ಮಾಹಿತಿ ತಂತ್ರಜ್ಞಾನ (ಐಟಿ) ಎಂದರೆ ಶ್ರೀಮಂತರಿಗೆ ಮಾತ್ರ ಸಂಬಂಧಿಸಿದ್ದು ಎಂಬ ಸೀಮಿತ ತಿಳಿವಳಿಕೆಯಿಂದ ನಾವು ಹೊರಬರಬೇಕು, ಐಟಿ ಮೂಲಕ ಜನಸಾಮಾನ್ಯನ ಜೀವನಮಟ್ಟದಲ್ಲಿ ಸುಧಾರಣೆ ತರುವುದು ನಮ್ಮ ಗುರಿಯಾಗಬೇಕು' ಎಂದರು
'ಪ್ರಸ್ತುತ ದೇಶದ 8 ಶೇ. ಜನತೆ ಮಾತ್ರ ಇಂಟರ್ನೆಟ್ನ ಬಳಕೆದಾರರಾಗಿದ್ದಾರೆ. ಹಾಗಾಗಿ ಐಟಿ ಕೇತ್ರದಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ' ಎಂದರು. ದೇಶದ ಐಟಿ ಕ್ಷೇತ್ರದ ಬೆಳವಣಿಗೆಗೆ ಮೂರು ಅಂಶಗಳ ಕಾರ್ಯಯೋಜನೆಯನ್ನು ಅವರು ಮುಂದಿಟ್ಟರು. 'ದೇಶದ ಐಟಿ ರಫ್ತಿನಲ್ಲಿ ಶೇಕಡಾ 63 ಅಮೆರಿಕಾಗೆ ಹೋಗುತ್ತದೆ. ಅಮೆರಿಕ ಮಾತ್ರವಲ್ಲದೆ ಬೇರೆ ಮಾರುಕಟ್ಟೆಗಳನ್ನೂ ನಾವು ತ್ವರಿತವಾಗಿ ಕಂಡುಕೊಳ್ಳಬೇಕು" ಎಂದರು.
'ಐಟಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳು ಆಗಬೇಕು. ಜೊತೆಗೆ ಹಾರ್ಡ್ವೇರ್ ಮಾರುಕಟ್ಟೆಯಲ್ಲಿ ಪ್ರಮುಖ ಪಾಲುದಾರಿಕೆ ವಹಿಸಲು ಈ ಕ್ಷೇತ್ರದ ಬೆಳವಣಿಗೆಯ ಕುರಿತೂ ಗಮನ ಹರಿಸಬೇಕು" ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, 'ದೇಶದ ಐಟಿ ರಫ್ತಿನಲ್ಲಿ ರಾಜ್ಯದ ಪಾಲು ಶೇಕಡಾ 30 ಇದೆ. ರಾಜ್ಯದ ಜಿಡಿಪಿಗೆ ಐಟಿಯ ಕೊಡುಗೆ ಶೇಕಡಾ 20 ಇದೆ' ಎಂದರು.