ನ.1ರಿಂದ ಮೊಬೈಲ್ ನಂಬಲ್ ಪೋರ್ಟಬಿಲಿಟಿ ಜಾರಿಗೆ
ನವದೆಹಲಿ, ಅ.27 : ಗ್ರಾಹಕರು ತಮ್ಮ ಮೊಬೈಲ್ ಸೇವಾದಾರರನ್ನು ಬದಲಿಸಿದರೂ ಹಳೆದ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡುವ ಮೊಬೈಲ್ ಸಂಖ್ಯೆ ವರ್ಗಾವಣೆ (MNP) ಸೇವೆಯು ನವೆಂಬರ್ 1 ಮೊದಲ ಬಾರಿಗೆ ಹರಿಯಾಣದಲ್ಲಿ ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಸಚಿವ ಎ. ರಾಜ ಹೇಳಿದ್ದಾರೆ. ಬಹುನಿರೀಕ್ಷಿತ ಈ ಸೌಲಭ್ಯ ಹಲವಾರು ಬಾರಿ ಜಾರಿಗೆ ಬರದೆ ಮುಂದೂಡಲ್ಪಟ್ಟಿತ್ತು.
ನವೆಂಬರ್ 1 ಬಳಿಕ ಎಂಎನ್ಪಿ ಸೇವೆಯು ಹಂತ ಹಂತವಾಗಿ ಜಾರಿಗೆ ಬರಲಿದೆ. ಹರಿಯಾಣದಲ್ಲಿ ಮೊದಲು ಸೇವೆಯನ್ನು ಉದ್ಘಾಟಿಸಲು ಸರ್ಕಾರ ಬಯಸಿದೆ ಎಂದು ರಾಜ ಅವರು ತಿಳಿಸಿದರು.
ಈ ಸೇವೆಯು ಮುಂಬರುವ ದಿನಗಳಲ್ಲಿ ವಿವಿಧ ಹಂತಗಳಲ್ಲಿ ದೇಶದ ವಿವಿಧ ಭಾಗಕ್ಕೂ ವಿಸ್ತರಣೆಗೊಳ್ಳುವ ನಿರೀಕ್ಷೆಯಿದೆ. ವಿವಿಧ ಕಾರಣಗಳಿಗಾಗಿ ಈ ಸೇವೆಯ ಅನುಷ್ಠಾನವು ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಸೇವೆಯ ಅನುಷ್ಠಾನ ಮುಂದೂಡಿಕೆಗೆ ಅಗತ್ಯ ಮೂಲಸೌಕರ್ಯಗಳ ಕೊರತೆ ಪ್ರಮುಖ ಕಾರಣವಾಗಿತ್ತು.
ಅಮೆರಿಕ ಮೂಲದ ಟೆಲ್ಕಾರ್ಡಿಯ ಹಾಗೂ ದೀಪಕ್ ತಲ್ವಾರ್ ಕನ್ಸಲ್ಟೆಂಟ್ ಪ್ರೈವೆಟ್ ಲಿಮಿಟೆಡ್ಗೆ 74:26 ಜಂಟಿ ಹೂಡಿಕೆ ಅನುಪಾತದನ್ವಯ ಸೇವೆಯ ಅನುಷ್ಠಾನಕ್ಕೆ ಸಿನಿವರ್ಸ್ ಟೆಕ್ನಾಲಜೀಸ್ ಹಾಗೂ ಎಂಎನ್ಪಿ ಇಂಟರ್ ಕನೆಕ್ಷನ್ ಟೆಲಿಕಾಂ ಸಲ್ಯೂಷನ್ಗೆ ದೂರಸಂಪರ್ಕ ಇಲಾಖೆ ಪರವಾನಿಗೆ ನೀಡಿತ್ತು.
ರಾಜ್ಯಕ್ಕೆ ಯಾವಾಗ?: ಮೊದಲಿಗೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೋಲ್ಕತ್ತಾ ನಗರದಲ್ಲಿ ಈ ಸೇವೆ ಕಲ್ಪಿಸಲಾಗುವುದು ಎಂದು ಟ್ರಾಯ್ (TRAI) ಹಾಗೂ ದೂರ ಸಂಪರ್ಕ ಇಲಾಖೆ (DoT) ಒಂದಲ್ಲ, ಎರಡಲ್ಲ, ಮೂರು ಬಾರಿ ಹೇಳಿದ್ದವು. ಆದರೆ ಮೊದಲಿಗೆ ಈ ಸೌಲಭ್ಯ ಹರಿಯಾಣಕ್ಕೆ ಸಿಕ್ಕಿದೆ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications