ಭಿನ್ನಮತೀಯ ಶಾಸಕರಿಂದ ಕ್ಷಮೆ ಯಾಚನೆ!

ಇಂಡಿ ಶಾಸಕ ಡಾ. ಸಾರ್ವಭೌಮ ಬಗಲಿ, ಬಸನವ ಬಾಗೇವಾಡಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಕಾರವಾರದ ಶಾಸಕ ಆನಂದ ಆಸ್ನೋಟಿಕರ್ ಮತ್ತು ಲಿಂಗಸೂರಿನ ಶಾಸಕ ಮಾನಪ್ಪ ವಜ್ಜಲ ಅವರು ಜನಾರ್ದನ ರೆಡ್ಡಿಯೊಡನೆ ಇಂದು ಬಿಜೆಪಿ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಕ್ಷಮೆ ಯಾಚಿಸಲಿದ್ದಾರೆ. ಸಂಧಾನದ ಸೂತ್ರಧಾರಿ ಜನಾರ್ದನ ರೆಡ್ಡಿ ಅವರ ಪ್ರಯತ್ನದಿಂದಾಗಿ ಇವರು ಭಿನ್ನಮತೀಯರ ಬಣದಿಂದ ಹೊರಬಂದಿದ್ದಾರೆ.
ಇವರಲ್ಲಿ ಬಗಲಿ, ಆಸ್ನೋಟಿಕರ್ ಮತ್ತು ಬೆಳ್ಳುಬ್ಬಿಯವರು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಂದ ಅನರ್ಹತೆಗೊಳಗಾಗಿದ್ದಾರೆ. ಮಾನಪ್ಪ ವಜ್ಜಲ ಅವರು ಅ.14ರಂದು ನಡೆದ ಎರಡನೇ ವಿಶ್ವಾಸಮತ ಯಾಚನೆಯಲ್ಲಿ ಹೊರಗುಳಿದು ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು ಮತ್ತು ಅನರ್ಹರಾಗುವ ಅಪಾಯ ತಂದುಕೊಂಡಿದ್ದರು.
ಶಾಸಕರ ಅನರ್ಹತೆಯ ಪ್ರಕರಣ ಸದ್ಯಕ್ಕೆ ಕರ್ನಾಟಕ ಹೈಕೋರ್ಟಿನ ಮುಂದಿದೆ. ನ್ಯಾಯಮೂರ್ತಿ ಸಭಾಹಿತ್ ಮುಂದೆ ವಿಚಾರಣೆ ಮುಗಿದಿದ್ದು ತೀರ್ಪಿಗೆ ಕಾಯ್ದಿರಿಸಲಾಗಿದೆ. ಈಗ ಅನರ್ಹಗೊಂಡ ಶಾಸಕರು ಕ್ಷಮೆಯಾಚಿಸಿ ಬಿಜೆಪಿ ಕೈಹಿಡಿಯಲು ಮುಂದಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಹೈಕೋರ್ಟ್ ಅನರ್ಹತೆಯನ್ನು ಎತ್ತಿಹಿಡಿದರೆ ಹೇಗೆ? ಸಭಾಧ್ಯಕ್ಷರ ಆದೇಶ ಹೈಕೋರ್ಟ್ ತಳ್ಳಿಹಾಕಿದರೆ ಮುಂದಿನ ಪ್ರಶ್ನೆಯೇನು? ಎಂಬ ಪ್ರಶ್ನೆಗಳು ಈ ಬೆಳವಣಿಗೆಯಿಂದಾಗಿ ಕುತೂಹಲ ಕೆರಳಿಸಿವೆ.
ಒಂದು ವೇಳೆ ಶಾಸಕರ ಅನರ್ಹತೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದರೆ, ಇವರು ಕ್ಷಮೆ ಯಾಚಿಸಿದರೂ ಪ್ರಯೋಜನವಿಲ್ಲ. ಅನರ್ಹಗೊಂಡವರು ಸಾಧಾರಣ ಕಾರ್ಯಕರ್ತರಾಗಿ ಮುಂದುವರಿಯಬೇಕಾಗುತ್ತದೆ. ಶಾಸಕರ ಅನರ್ಹತೆ ಅಸಿಂಧುವಾದರೆ ಮಾತ್ರ ಬಿಜೆಪಿಯ ಸಂಖ್ಯೆ ಹೆಚ್ಚುತ್ತದೆ. ಏನೇ ಆದರೂ ಲಾಭ ಬಿಜೆಪಿಗೇ. ಜನಾರ್ದನ ರೆಡ್ಡಿ ಹಾಕಿರುವ ಈ ದಾಳ ವಿರೋಧ ಪಕ್ಷಗಳಿಗೆ ಮಾತ್ರ ಗೋಳಾಗಲಿದೆ.
ಪಕ್ಷದಲ್ಲಿಯೇ ವಿರೋಧ : ಭಿನ್ನಮತೀಯ ಚಟುವಟಿಕೆ ನಡೆಸಿ ಸರಕಾರವನ್ನೇ ಅಳಿವಿನ ಅಂಚಿಗೆ ತಳ್ಳಿದ್ದ ಈ ಭಿನ್ನಮತೀಯರಿಗೆ ಕ್ಷಮೆ ನೀಡಿ ಪಕ್ಷದೊಳಗೆ ಮತ್ತೆ ಸೇರಿಸಬಾರದೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ವರ್ಚಸ್ಸನ್ನು ಹಾಳು ಮಾಡಿದ ಇವರ ಮೊಸಳೆ ಕಣ್ಣೀರಿಗೆ ಪಕ್ಷದ ವರಿಷ್ಠರು ಮೋಸಹೋಗಬಾರದು ಎಂದು ಕಾರ್ಯಕರ್ತರು ಅಂಗಲಾಚಿದ್ದಾರೆ. ಅಲ್ಲದೆ, ಶಾಸಕರ ಅನರ್ಹತೆ ಕುರಿತ ಪ್ರಕರಣ ಹೈಕೋರ್ಟಿನ ಮುಂದಿದ್ದು, ಅದು ತೀರ್ಮಾನವಾದ ಮೇಲೆಯೇ ಮುಂದಿನ ನಡೆಯನ್ನು ನಿರ್ಧರಿಸಬೇಕೆಂದು ಹೇಳಿದ್ದಾರೆ.
ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಿನ್ನಮತೀಯ ಬಿಜೆಪಿ ಶಾಸಕರ ಕ್ಷಮೆ ಯಾಚನೆಯ ನಾಟಕಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಆದರೂ ಪಟ್ಟನ್ನು ಬಿಡದ ಜನಾರ್ದನ ರೆಡ್ಡಿ, ಕ್ಷಮೆ ಯಾಚಿಸುವ ಶಾಸಕರನ್ನು ಮತ್ತೆ ಪಕ್ಷದೊಳಗೆ ಸೇರಿಸುವ ಕುರಿತು ಕೇಂದ್ರದ ನಾಯಕರೊಂದಿಗೆ ಮಾತಾಡಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications