ಭಿನ್ನಮತೀಯ ಶಾಸಕರಿಂದ ಕ್ಷಮೆ ಯಾಚನೆ!

ಇಂಡಿ ಶಾಸಕ ಡಾ. ಸಾರ್ವಭೌಮ ಬಗಲಿ, ಬಸನವ ಬಾಗೇವಾಡಿ ಶಾಸಕ ಎಸ್ ಕೆ ಬೆಳ್ಳುಬ್ಬಿ, ಕಾರವಾರದ ಶಾಸಕ ಆನಂದ ಆಸ್ನೋಟಿಕರ್ ಮತ್ತು ಲಿಂಗಸೂರಿನ ಶಾಸಕ ಮಾನಪ್ಪ ವಜ್ಜಲ ಅವರು ಜನಾರ್ದನ ರೆಡ್ಡಿಯೊಡನೆ ಇಂದು ಬಿಜೆಪಿ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ಭೇಟಿಯಾಗಿ ಕ್ಷಮೆ ಯಾಚಿಸಲಿದ್ದಾರೆ. ಸಂಧಾನದ ಸೂತ್ರಧಾರಿ ಜನಾರ್ದನ ರೆಡ್ಡಿ ಅವರ ಪ್ರಯತ್ನದಿಂದಾಗಿ ಇವರು ಭಿನ್ನಮತೀಯರ ಬಣದಿಂದ ಹೊರಬಂದಿದ್ದಾರೆ.
ಇವರಲ್ಲಿ ಬಗಲಿ, ಆಸ್ನೋಟಿಕರ್ ಮತ್ತು ಬೆಳ್ಳುಬ್ಬಿಯವರು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಂದ ಅನರ್ಹತೆಗೊಳಗಾಗಿದ್ದಾರೆ. ಮಾನಪ್ಪ ವಜ್ಜಲ ಅವರು ಅ.14ರಂದು ನಡೆದ ಎರಡನೇ ವಿಶ್ವಾಸಮತ ಯಾಚನೆಯಲ್ಲಿ ಹೊರಗುಳಿದು ಬಿಜೆಪಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು ಮತ್ತು ಅನರ್ಹರಾಗುವ ಅಪಾಯ ತಂದುಕೊಂಡಿದ್ದರು.
ಶಾಸಕರ ಅನರ್ಹತೆಯ ಪ್ರಕರಣ ಸದ್ಯಕ್ಕೆ ಕರ್ನಾಟಕ ಹೈಕೋರ್ಟಿನ ಮುಂದಿದೆ. ನ್ಯಾಯಮೂರ್ತಿ ಸಭಾಹಿತ್ ಮುಂದೆ ವಿಚಾರಣೆ ಮುಗಿದಿದ್ದು ತೀರ್ಪಿಗೆ ಕಾಯ್ದಿರಿಸಲಾಗಿದೆ. ಈಗ ಅನರ್ಹಗೊಂಡ ಶಾಸಕರು ಕ್ಷಮೆಯಾಚಿಸಿ ಬಿಜೆಪಿ ಕೈಹಿಡಿಯಲು ಮುಂದಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಹೈಕೋರ್ಟ್ ಅನರ್ಹತೆಯನ್ನು ಎತ್ತಿಹಿಡಿದರೆ ಹೇಗೆ? ಸಭಾಧ್ಯಕ್ಷರ ಆದೇಶ ಹೈಕೋರ್ಟ್ ತಳ್ಳಿಹಾಕಿದರೆ ಮುಂದಿನ ಪ್ರಶ್ನೆಯೇನು? ಎಂಬ ಪ್ರಶ್ನೆಗಳು ಈ ಬೆಳವಣಿಗೆಯಿಂದಾಗಿ ಕುತೂಹಲ ಕೆರಳಿಸಿವೆ.
ಒಂದು ವೇಳೆ ಶಾಸಕರ ಅನರ್ಹತೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದರೆ, ಇವರು ಕ್ಷಮೆ ಯಾಚಿಸಿದರೂ ಪ್ರಯೋಜನವಿಲ್ಲ. ಅನರ್ಹಗೊಂಡವರು ಸಾಧಾರಣ ಕಾರ್ಯಕರ್ತರಾಗಿ ಮುಂದುವರಿಯಬೇಕಾಗುತ್ತದೆ. ಶಾಸಕರ ಅನರ್ಹತೆ ಅಸಿಂಧುವಾದರೆ ಮಾತ್ರ ಬಿಜೆಪಿಯ ಸಂಖ್ಯೆ ಹೆಚ್ಚುತ್ತದೆ. ಏನೇ ಆದರೂ ಲಾಭ ಬಿಜೆಪಿಗೇ. ಜನಾರ್ದನ ರೆಡ್ಡಿ ಹಾಕಿರುವ ಈ ದಾಳ ವಿರೋಧ ಪಕ್ಷಗಳಿಗೆ ಮಾತ್ರ ಗೋಳಾಗಲಿದೆ.
ಪಕ್ಷದಲ್ಲಿಯೇ ವಿರೋಧ : ಭಿನ್ನಮತೀಯ ಚಟುವಟಿಕೆ ನಡೆಸಿ ಸರಕಾರವನ್ನೇ ಅಳಿವಿನ ಅಂಚಿಗೆ ತಳ್ಳಿದ್ದ ಈ ಭಿನ್ನಮತೀಯರಿಗೆ ಕ್ಷಮೆ ನೀಡಿ ಪಕ್ಷದೊಳಗೆ ಮತ್ತೆ ಸೇರಿಸಬಾರದೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ವರ್ಚಸ್ಸನ್ನು ಹಾಳು ಮಾಡಿದ ಇವರ ಮೊಸಳೆ ಕಣ್ಣೀರಿಗೆ ಪಕ್ಷದ ವರಿಷ್ಠರು ಮೋಸಹೋಗಬಾರದು ಎಂದು ಕಾರ್ಯಕರ್ತರು ಅಂಗಲಾಚಿದ್ದಾರೆ. ಅಲ್ಲದೆ, ಶಾಸಕರ ಅನರ್ಹತೆ ಕುರಿತ ಪ್ರಕರಣ ಹೈಕೋರ್ಟಿನ ಮುಂದಿದ್ದು, ಅದು ತೀರ್ಮಾನವಾದ ಮೇಲೆಯೇ ಮುಂದಿನ ನಡೆಯನ್ನು ನಿರ್ಧರಿಸಬೇಕೆಂದು ಹೇಳಿದ್ದಾರೆ.
ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಿನ್ನಮತೀಯ ಬಿಜೆಪಿ ಶಾಸಕರ ಕ್ಷಮೆ ಯಾಚನೆಯ ನಾಟಕಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಆದರೂ ಪಟ್ಟನ್ನು ಬಿಡದ ಜನಾರ್ದನ ರೆಡ್ಡಿ, ಕ್ಷಮೆ ಯಾಚಿಸುವ ಶಾಸಕರನ್ನು ಮತ್ತೆ ಪಕ್ಷದೊಳಗೆ ಸೇರಿಸುವ ಕುರಿತು ಕೇಂದ್ರದ ನಾಯಕರೊಂದಿಗೆ ಮಾತಾಡಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications