ರಾಕ್ಷಸ ರಕ್ಷಕರಿಂದ ಸೋದರಿಯರ ಸಾಮೂಹಿಕ ಅತ್ಯಾಚಾರ

ಬಿಹಾರದ ಕೈಮುರ್ ಜಿಲ್ಲೆಯ ಮೊಹಾನಿಯಾ ಪೊಲೀಸ್ ಠಾಣೆ ವ್ಯಕ್ತಿಯ ವಿಭಾಗೀಯ ಅಭಿವೃದ್ಧಿ ಕಚೇರಿ ಆವರಣದಲ್ಲಿ ಈ ಘಟನೆ ನಡೆದಿದೆ. ಅ.17 ರಂದು ರಾತ್ರಿ ದಸರಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳಲು ಮೊಹಾನಿಯಾ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಸೋದರಿಯರು ಕಾದು ನಿಂತಿದ್ದರು. ಆಗ, ಜಾರ್ಖಂಡ್ ನ ಎಸ್ ಟಿಎಫ್ ಪೊಲೀಸ್ ರಂಜೀತ್ ಸಿಂಗ್, ಉಳಿದ ಆರೋಪಿಗಳೊಂದಿಗೆ ಸೋದರಿಯರನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸೆಗಿದ್ದಾನೆ ಎಂದುಡಿಎಸ್ಪಿ ಪಂಕಜ್ ಸಿನ್ಹಾ ತಿಳಿಸಿದ್ದಾರೆ.
ಮೂವರು ಆರೋಪಿಗಳನ್ನು ಧರ್ಮೇಂದ್ರ ರಾಮ್, ರಾಕೇಶ್ ಸಾಹು, ಬರು ಗುಪ್ತಾ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಅತ್ಯಾಚಾರಕ್ಕೊಳಗಾದ ಸೋದರಿಯರು ಪೊಲೀಸರಿಗೆ ದೂರು ನೀಡಿ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಖಂಡಿತಾ ಎಂದು ಸಿನ್ಹಾ ಹೇಳಿದರು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications