ದೇವೇಗೌಡರನ್ನು ನಂಬಬೇಡಿ: ದಿಲ್ಲಿ ಕಾಂಗ್ರೆಸ್

ಯಡಿಯೂರಪ್ಪ ಸರಕಾರವನ್ನು ಉರುಳಿಸಿದರೆ ಬಹು ಸಂಖ್ಯಾತ ಲಿಂಗಾಯತರು ಮತ್ತು ಮಧ್ಯಮವರ್ಗದ ಸಮುದಾಯದ ಅಸಮಾಧಾನವನ್ನು ಕಾಂಗ್ರೆಸ್ ಪಕ್ಷ ಎದುರಿಸಬೇಕಾಗಿ ಬರಬಹುದು. ಅದು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣಾ ಮೇಲೆ ಪರಿಣಾಮ ಬೀರಬಹುದು ಅನ್ನುವುದು ಪಕ್ಷದ ಇನ್ನೊಂದು ಚಿಂತನೆ. ರಾಜ್ಯ ಬಿಜೆಪಿ ಸರಕಾರವನ್ನು ಉರುಳಿಸುವ ಯಾವುದೇ ಕೆಲಸಕ್ಕೆ ಕೈ ಹಾಕಬಾರದೆಂದು ಹೈಕಮಾಂಡ್ ಕಟ್ಟಪ್ಪಣೆ ನೀಡಿದೆ ಎನ್ನಲಾಗಿದೆ.
ಇದರಿಂದ ಒಂದು ವೇಳೆ ಬಿಜೆಪಿ ಸರಕಾರ ಉರುಳಿದರೆ ಅದರ ಲಾಭ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ. ಹಾಗೆಯೇ ಪಕ್ಷ ಬಹಳ ನಷ್ಟ ಅನುಭವಿಸ ಬೇಕಾಗಿ ಬರುತ್ತದೆ. ಪಕ್ಷದ ಉನ್ನತ ಮೂಲದ ಪ್ರಕಾರ ಒಂದು ಸಾರಿ ದೇವೇಗೌಡರ ಜೊತೆ ಹೊಂದಾಣಿಕೆ ಮಾಡಿ ಸಾಕಾಗಿದೆ. ಮತ್ತೆ ಅವರ ಜೊತೆ ಮೈತ್ರಿ ಮಾಡಿಕೊಂಡರೆ ಅದರ ನೇರ ಲಾಭ ಜೆಡಿಎಸ್ ಪಡೆಯುತ್ತದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಲೆಕ್ಕಾಚಾರ.












Click it and Unblock the Notifications