ಪತ್ರಕರ್ತ, ಗಾಂಧಿವಾದಿ ಮಾಧವ ಕೌಜಲಗಿ ವಿಧಿವಶ

ತಮ್ಮ ಸುತ್ತಲಿನವರಿಗೆ ಕೌಜಲಗಿ ಅವರು ಸ್ಫೂರ್ತಿಯ ಸೆಲೆಯಾಗಿದ್ದರು. ಆಜನ್ಮ ಖಾದಿಧಾರಿಯಾಗಿ ಮಹಾತ್ಮಾ ಗಾಂಧಿಯವರ ನಿಷ್ಠ ಅನುಯಾಯಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಂಥ ಧುರೀಣರ ನಿಕಟ ಮೈತ್ರಿ ಹೊಂದಿದ್ದರೂ ಸಕ್ರಿಯರಾಗಿ ರಾಜಕೀಯದಿಂದ ದೂರವೇ ಉಳಿದಿದ್ದರು. ತೆರೆಮರೆಯ ಸಮಾಜ ಸೇವೆಯೇ ಕೌಜಲಗಿಯವರಿಗೆ ಅತ್ಯಂತ ಪ್ರಿಯವಾದ ಕಾಯಕವಾಗಿತ್ತು.
ಸ್ವಾತಂತ್ರ್ಯಯೋಧ, ಗಾಂಧಿವಾದಿ ಮತ್ತು ಕರ್ನಾಟಕದ ಖಾದಿ ಗ್ರಾಮೋದ್ಯೋಗದ ಜನಕ ಮತ್ತು ಪ್ರವರ್ತಕರಾಗಿದ್ದ ಹನುಮಂತರಾವ್ ಕೌಜಲಗಿಯವರ ಏಕಮಾತ್ರ ಪುತ್ರರಾಗಿ ಮಾಧವ ಕೌಜಲಗಿಯವರು ಜನಿಸಿದ್ದು ಜೂನ್ 6, 1922ರಲ್ಲಿ. ಅಹ್ಮದಾಬಾದಿನಲ್ಲಿ ಬಿಕಾಂ ಪದವಿ ಪಡೆದು ಠಕ್ಕರ್ ಬಾಪಾ ಅವರೊಂದಿಗೆ 2 ವರ್ಷ ಕೆಲಸ ಮಾಡಿದರು.
ಮುಂದೆ ಅವರನ್ನು ಕೈಬೀಸಿ ಕರೆದದ್ದು ಪತ್ರಿಕಾಪ್ರಪಂಚ. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ರಂಗನಾಥ ದಿವಾಕರ ಮತ್ತು ಮೊಹರೆ ಹನುಮಂತರಾಯರ ಮುಂತಾದವರ ಮಾರ್ಗದರ್ಶನದಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮತ್ತು ಕರ್ಮವೀರ ವಾರಪತ್ರಿಕೆಗಳಲ್ಲಿ ಅಕ್ಷರಕೃಷಿ ಮಾಡಿದರು. 1964ರಲ್ಲಿ ಬೆಂಗಳೂರಿನಲ್ಲಿ 'ಬೃಂದಾವನ ಪ್ರಿಂಟರ್ ಅಂಡ್ ಪಬ್ಲಿಷರ್ಸ್' ಮುದ್ರಣಾಲಯವನ್ನು ಸ್ಥಾಪಿಸಿ ಅದನ್ನು ಉತ್ತುಂಗಕ್ಕೆ ಏರಿಸಿದರು.
ಘಟಪ್ರಭಾದ ಕರ್ನಾಟಕ ಆರೋಗ್ಯಧಾಮ, ಕಸ್ತೂರಬಾ ಟ್ರಸ್ಟ್, ಗಾಂಧಿ ಸ್ಮಾರಕನಿಧಿ, ಲೋಕಸೇವಾ ಟ್ರಸ್ಟ್, ಖಾದಿ ಗ್ರಾಮೋದ್ಯೋಗ ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ದುಡಿದಿದ್ದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications