ರಾಮಜನ್ಮಭೂಮಿ ಹಿಂದೂಗಳ ಸ್ವತ್ತು : ಚಿದಾನಂದಮೂರ್ತಿ

ಅಯೋಧ್ಯೆ ಹಿಂದುಗಳ ಪವಿತ್ರ ಕ್ಷೇತ್ರ. 10-11ನೇ ಶತಮಾನದ ಕನೋಜ್ ಚಕ್ರವರ್ತಿಗಳ ಕಾಲದಿಂದ ಅಲ್ಲಿ ಹಲವು ದೇವಾಲಯಗಳು ನಿರ್ಮಾಣವಾದವು. ಅದಕ್ಕೂ ಮೊದಲೇ ರಾಮದೇವಾಲಯವಿತ್ತು ಎಂದು ಅವರು ಹೇಳಿದರು. ಕ್ರಿ.ಶ. 1528ರಲ್ಲಿ ದೆಹಲಿಯ ಮೊಘಲ್ ಸಾಮ್ರಾಟ ಬಾಬರನು ಅದನ್ನು ಭಗ್ನಗೊಳಿಸಿ ಮಸೀದಿ ಕಟ್ಟಿಸಿದ.
ಆ ಮಸೀದಿಯು ರಾಮಜನ್ಮಭೂಮಿಯಲ್ಲಿ ನಿರ್ಮಾಣವಾದದ್ದು ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ತೀರ್ಪು ಹಿಂದುಗಳ ಪರ ಆಗುವವರೆಗೂ ಹೋರಾಟ ಮಾಡೋಣ. ಆದರೆ, ಸಹನೆ ಕಳೆದುಕೊಂಡು ಹಿಂಸಾಚಾರಕ್ಕೆ ಕೈಹಾಕಬಾರದು ಎಂದರು. ಆತ್ಮಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಆಂದೋಲನ ಹಾಗೂ ಗಲಭೆ ಕುರಿತ ಕೆಲವು ಘಟನೆಗಳನ್ನು ವಿವರಿಸಿದರು. ಹಿಂದು ಮಹಾಸಭಾ ಅಧ್ಯಕ್ಷ ಎಂ.ವಾಸುದೇವರಾವ್ ಕಶ್ಯಪ್, ಅಯೋಧ್ಯೆ ಹಿಂದುಗಳ ಪರವಾಗುವವರೆಗೆ ಹೋರಾಡುವುದಾಗಿ ತಿಳಿಸಿದರು.












Click it and Unblock the Notifications