ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೆಡ್ಡಿಗಳನ್ನು ಹೊಗಳಿ ಅಟ್ಟಕ್ಕೇರಿಸಿದ ಸಿಎಂ
ಶಾಂತಿನಗರದ ಬಸ್ ನಿಲ್ದಾಣದಲ್ಲಿ ನರ್ಮ್ ಯೋಜನೆಯಡಿ ನಿರ್ಮಿಸಲಾಗಿರುವ ಸಂಚಾರ ಮತ್ತು ಸಾಗಣೆ ನಿರ್ವಹಣೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ರೆಡ್ಡಿಗಳನ್ನು ಯದ್ವಾತದ್ವಾ ಹೊಗಳುವ ಮೂಲಕ ಸರಕಾರದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸಾರಿದರು. ರೆಡ್ಡಿ ಸಹೋದರರ ಸಹಕಾರ ಇಲ್ಲದಿದ್ದರೆ ಸರಕಾರ ರಚನೆಯಾಗುತ್ತಿರಲಿಲ್ಲ. ಬುಧವಾರದ ಸಂಪುಟ ವಿಸ್ತರಣೆ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ರೆಡ್ಡಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ರೆಡ್ಡಿಗಳು ಸಹಕಾರ ನೀಡದಿದ್ದರೆ ಸರಕಾರ ರಚನೆಯಾಗುತ್ತಿರಲಿಲ್ಲ. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಅನೇಕ ವರದಿಗಳು ಬಂದಿವೆ. ಮುಖ್ಯಮಂತ್ರಿಯ ಗೆಲುವು, ರೆಡ್ಡಿಗಳಿಗೆ ಹಿನ್ನೆಡೆ ಎಂದು ವ್ಯಾಖ್ಯಾನಿಸಲಾಗಿದೆ. ವಾಸ್ತವವಾಗಿ ಇದು ಜನತೆಯ ಗೆಲುವು. ನನ್ನ ಗೆಲುವಲ್ಲ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
Comments
ಯಡಿಯೂರಪ್ಪ ಜನಾರ್ದನ ರೆಡ್ಡಿ ಸಂಪುಟ ವಿಸ್ತರಣೆ ರೆಡ್ಡಿ ಬ್ರದರ್ಸ್ yediyurappa janardhana reddy cabinet expansion reddy brothers
Story first published: Thursday, September 23, 2010, 17:46 [IST]