ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ತೀರ್ಪು : ಶಾಂತಿ ಕಾಪಾಡಲು ಹೆಗ್ಗಡೆ ಮನವಿ

By Staff
|
Google Oneindia Kannada News

Veerendra Heggade
ಬೆಂಗಳೂರು, ಸೆ. 23 : ಶ್ರೀರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಸೆ.24 ರಂದು ತೀರ್ಪು ಘೋಷಿಸುತ್ತಿದ್ದು, ಜನತೆ ವಾತಾವರಣ ಕದಡದಂತೆ ನೋಡಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಕೋರಿದ್ದಾರೆ.

ವಿಚಾರ ಭೇದಗಳು, ಧಾರ್ಮಿಕ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳು ಬಂದಾಗಲೆಲ್ಲ ಸಹಜವಾಗಿ ಉದ್ವಿಗ್ನ ವಾತಾವರಣ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಮೊರೆ ಹೊಕ್ಕು ನ್ಯಾಯ ಪಡೆಯುವ ದಾರಿ ಉತ್ತಮವಾದದ್ದು. ಇದೀಗ ನ್ಯಾಯಾಲಯದಿಂದ ಬರುವ ತೀರ್ಪು ಹೇಗಿರುತ್ತದೆ ಎಂಬುದು ತಿಳಿಯದಿದ್ದರೂ ಸಹಜವಾಗಿ ಸೋಲು-ಗೆಲುವುಗಳ ನಿರೀಕ್ಷೆಯಲ್ಲಿ ದೇಶದಲ್ಲಿ ಶಾಂತಿ ಕದಡಬಹುದೆಂಬ ನಿರೀಕ್ಷೆ ಇದೆ.

ತೀರ್ಪು ಬಂದ ನಂತರ ಸರಿಯಾಗಿ ವಿಚಾರ, ವಿಮರ್ಶೆ ಮಾಡಿ ರಾಷ್ಟ್ರ ನಾಯಕರು, ಧಾರ್ಮಿಕ ಮುಖಂಡರು ಸೂಕ್ತ ತೀರ್ಮಾನ ಕೈಗೊಳ್ಳುವವರೆಗೆ ಶಾಂತಿ ಕಾಪಾಡಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X