ಶಾಂತಿನಿಕೇತನದಲ್ಲಿ ರಾಹುಲ್ ಶಾಂತಿ ಮಂತ್ರ

Becoming PM not the only job: Rahul Gandhi
ಶಾಂತಿನಿಕೇತನ(ಪ.ಬಂಗಾಳ), ಸೆ.15 : ಪ್ರಧಾನ ಮಂತ್ರಿಯಾಗುವುದೊಂದೇ ಏಕೈಕ ಕೆಲಸವಲ್ಲ. ಒಬ್ಬ ವ್ಯಕ್ತಿಗೆ ಮಾಡಲು ಇಲ್ಲಿ ಸಾಕಷ್ಟು ಕೆಲಸಗಳಿವೆ ಎಂದು ಭಾವಿ ಪ್ರಧಾನಿ ಎಂದೇ ಬಿಂಬಿತರಾಗಿರುವ ನೆಹರೂ-ಗಾಂಧಿ ಮನೆತನದ ಕುಡಿ ಕಾಂಗ್ರೆಸ್‌ನ ಪ್ರಧಾನ ಕಾರ್ಯ ದರ್ಶಿ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ರವೀಂದ್ರನಾಥ ಠಾಗೂರ್ ಸ್ಥಾಪಿಸಿದ ವಿಶ್ವಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿ ಪ್ರಧಾನಿಯಾಗಿ ವಿವಿಯ ಕುಲಾಧಿಪತಿಗಳಾಗುತ್ತೀರಾ?ಎಂಬ ಪ್ರಶ್ನೆಯೊಂದಕ್ಕೆ ರಾಹುಲ್ ಮೇಲಿನಂತೆ ಉತ್ತರಿಸಿದರು.

ಮೂರು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ರಾಹುಲ್ ತಮ್ಮ ಮೊದಲ ದಿನದ ಪ್ರವಾಸದಲ್ಲಿ ವಿವಿಗೆ ಭೇಟಿ ನೀಡಿ ಒಂದೂವರೆ ಗಂಟೆ ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಲಲಿತ ಕಲೆಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಲಲಿತ ಕಲೆಗಳನ್ನು ಮತ್ತಷ್ಟು ಶಕ್ತಗೊಳಿಸಲು ನೀವು ನನಗೆ ಅಥವಾ ಪ್ರಧಾನಿ ಕಾರ್ಯಾಲಯಕ್ಕೆ ಪತ್ರದ ಮೂಲಕ ಸಲಹೆ ನೀಡಬಹುದು ಎಂದರು. ನೀವು ಅಪೇಕ್ಷಿಸಿದರೆ ನಿಮಗೆ ನಾನು ಸಾಕಷ್ಟು ಕೆಲಸಗಳನ್ನು ವಹಿಸುತ್ತೇನೆ. ನಿಮಗೆ ಕೆಲಸ ಮಾಡುವ ಇಚ್ಛೆ ಇದ್ದಲ್ಲಿ ಅದನ್ನು ಯಾವಾಗ ಮತ್ತು ಹೇಗೆ ಮಾಡಬೇಕೆಂದು ಹೇಳುತ್ತೇನೆ. ಆದರೆ, ಜನನಾಯಕರಿಗೆ ಪತ್ರಗಳನ್ನು ಬರೆಯುವುದೊಂದೇ ಕೆಲಸವಾಗಬಾರದು ಎಂದು ರಾಹುಲ್ ಗಾಂಧಿ ವಿದ್ಯಾರ್ಥಿಗಳಿಗೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+