ಎರಡೇ ಕಾಲಿನ ಜಾಣ ಕುರಿಮರಿ ಕಥೆ

* ರಾಜೇಶ್ ಕೊಂಡಾಪುರ
ಮನುಷ್ಯ ತನ್ನ ದೇಹದ ಒಂದು ಅಂಗ ಊನವಾದರೆ ಆತ ಸಾಕಷ್ಟು ಜರ್ಜರಿತನಾಗುತ್ತಾನೆ. ಇನ್ನು ಕೆಲವರು ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗುವ ಮೂಲಕ ಪರಾವಲಂಬಿ ಬದುಕಿಗೆ ಅಂಟಿಕೊಂಳ್ಳುತ್ತಾರೆ. ಇವರ ನಡುವೆ ಕೆಲವು ಮಂದಿ ವಿಕಲಚೇತನರು ತನ್ನಲ್ಲಿರುವ ಊನವನ್ನು ಮೆಟ್ಟಿ ಸಾಮಾನ್ಯರು ಸಾಧಿಸಲಾಗದ್ದನ್ನ ಸಾಧಿಸಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ.
ಇಂಥ ಮನುಷ್ಯ ಜೀವಿಗಳ ಮಧ್ಯೆ ತಾಯಿಗರ್ಭದಿಂದ ಹುಟ್ಟುತ್ತಲೇ ಎರಡು ಕಾಲುಗಳನ್ನ ಕಳೆದುಕೊಂಡು ಜನಿಸಿದ್ದ ಮೇಕೆ ಮರಿ ಎರಡೇ ಕಾಲಲ್ಲಿ ಮನುಷ್ಯರಂತೆ ನಡೆದು ತನ್ನ ಹೊಟ್ಟೆಪಾಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದು ವಿಸ್ಮಯ ಮೂಡಿಸಿದೆ. ಪರಾವಲಂಬಿಯಾಗದೆ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರದ ಜಯಮ್ಮ ಬೈರೇಗೌಡರ ಮನೆಯಲ್ಲಿ 6 ತಿಂಗಳ ಹಿಂದೆ ಜನಿಸಿದ ಮೇಕೆ ಮರಿಯೊಂದು ಹುಟ್ಟುತ್ತಲೇ ಎರಡು ಕಾಲುಗಳನ್ನ ಮಾತ್ರ ಹೊಂದಿತ್ತು. ಎರಡು ಕಾಲಿನ ಮೇಕೆ ಮರಿಯನ್ನು ನೋಡಿದ ಜಯಮ್ಮನವರ ಕುಟುಂಬ ಆರಂಭದಲ್ಲಿ ಅದು ಬದುಕುವುದಿಲ್ಲವೆಂದು ತಿಳಿದಿದ್ದರು.
ಹೆಮ್ಮೆಯ ಮೇಕೆ : ದಿನಕಳೆದಂತೆ ಎರಡು ಕಾಲಿನ ಮೇಕೆ ಮರಿ(ಕರಿಯ) ಆರೋಗ್ಯದಿಂದ ಇರುವುದನ್ನು ಕಂಡು ಮುತುವರ್ಜಿಯಿಂದ ಜಯಮ್ಮ ಶುಶ್ರೂಷೆ ಮಾಡಿದರು. ಆರಂಭದಲ್ಲಿ ಹಾಲಿನ ಬಾಟಲಿ ಮೂಲಕ ಹಾಲುಣಿಸುತ್ತಿದ್ದರು. ಬೆಳೆದಂತೆ ಬೇರೆ ಮೇಕೆಗಳಂತೆ ಈ ಎರಡು ಕಾಲಿನ ಮೇಕೆಯೂ ಆಹಾರವನ್ನು ಸೇವಿಸಲು ಪ್ರಾರಂಭಿಸಿತು. ಎರಡೇ ಕಾಲಿದ್ದರೂ ಬೇರೆ ಮೇಕೆಗಳಂತೆಯೇ ಗಿಡಗಳನ್ನು ಬಾಗಿಸಿ ಸೊಪ್ಪು ತಿನ್ನುವುದು ಇತರೆ ಮೇಕೆಗಳಂತೆ ನಡೆದುಹೋಗುವುದು ಸಾಮಾನ್ಯವಾಯಿತು. 2 ಕಾಲಿನ ಮೇಕೆಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಜಯಮ್ಮ ಹೇಳುತ್ತಾರೆ.
ಪ್ರತಿ ದಿನ ಚಿಕ್ಕ ಮಗುವೊಂದು ನಡೆದುಹೋಗುವ ರೀತಿಯಲ್ಲಿ ಈ ಮೇಕೆ ಮರಿ ರಸ್ತೆಯಲ್ಲಿ ನಡೆದುಹೋಗುತ್ತದೆ. ಈ ಎರಡು ಕಾಲಿನ ಮೇಕೆಯ ದಿನನಿತ್ಯದ ಚಟುವಟಿಕೆಯ ಬಗ್ಗೆ ಗ್ರಾಮಸ್ಥರಲ್ಲಿ ಕುತೂಹಲ ಹುಟ್ಟುಹಾಕಿದ್ದರ ಜತೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಂಡು ನಾವೇಕೆ ಪರಾವಾಲಂಬಿಗಳಾಗಿದ್ದೇವೆ ಎಂದು ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಿದೆ.
ಈ ವಿಚಿತ್ರ ವಿಶಿಷ್ಟ ಮೇಕೆಯ ಅಸಾಮಾನ್ಯ ಗುಣವನ್ನು ಕಂಡ ಹಲವಾರು ಮಂದಿ ಹೆಚ್ಚು ಬೆಲೆ ನೀಡಿ ಕೊಳ್ಳಲು ಮುಂದೆ ಬಂದಿದ್ದರು. ಆದರೆ ಜಯಮ್ಮನವರ ಕುಟುಂಬದ ಪ್ರೀತಿಪಾತ್ರ ಸದಸ್ಯನಾಗಿರುವ ಈ ಕರಿಯನನ್ನು ಮಾರಾಟ ಮಾಡಲು ಮನಸು ಒಪ್ಪಲೇ ಇಲ್ಲ. ಈ ಎರಡು ಕಾಲಿನ ಕರಿಯ ಬ್ರಹ್ಮಣೀಪುರದಲ್ಲಿ ಸಖತ್ ಪ್ರಸಿದ್ಧಿ ಪಡೆದಿದೆ. ಕರಿಯ ಕೂಡ ಅಂಗವೈಕಲ್ಯವಿದ್ದರೂ ಪ್ರೀತಿಯಿಂದ ಬೆಳೆಸಿದ ತನ್ನ ಮಾಲೀಕನ ಮನೆಯಲ್ಲಿ ಕುಟುಂಬದ ಸದಸ್ಯನ ಸ್ಥಾನವನ್ನು ಪಡೆದಿದೆ. ಸೋಮಾರಿತನ ಮಾಡುತ್ತಾ ಪರಾವಲಂಬಿಗಳಾಗಿರುವ ಹಲವರಿಗೆ ಈ ಎರಡು ಕಾಲಿನ ಕರಿಯ ಮೇಕೆ ಮಾದರಿಯಾಗಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications