ಎರಡೇ ಕಾಲಿನ ಜಾಣ ಕುರಿಮರಿ ಕಥೆ

* ರಾಜೇಶ್ ಕೊಂಡಾಪುರ
ಮನುಷ್ಯ ತನ್ನ ದೇಹದ ಒಂದು ಅಂಗ ಊನವಾದರೆ ಆತ ಸಾಕಷ್ಟು ಜರ್ಜರಿತನಾಗುತ್ತಾನೆ. ಇನ್ನು ಕೆಲವರು ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗುವ ಮೂಲಕ ಪರಾವಲಂಬಿ ಬದುಕಿಗೆ ಅಂಟಿಕೊಂಳ್ಳುತ್ತಾರೆ. ಇವರ ನಡುವೆ ಕೆಲವು ಮಂದಿ ವಿಕಲಚೇತನರು ತನ್ನಲ್ಲಿರುವ ಊನವನ್ನು ಮೆಟ್ಟಿ ಸಾಮಾನ್ಯರು ಸಾಧಿಸಲಾಗದ್ದನ್ನ ಸಾಧಿಸಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ.
ಇಂಥ ಮನುಷ್ಯ ಜೀವಿಗಳ ಮಧ್ಯೆ ತಾಯಿಗರ್ಭದಿಂದ ಹುಟ್ಟುತ್ತಲೇ ಎರಡು ಕಾಲುಗಳನ್ನ ಕಳೆದುಕೊಂಡು ಜನಿಸಿದ್ದ ಮೇಕೆ ಮರಿ ಎರಡೇ ಕಾಲಲ್ಲಿ ಮನುಷ್ಯರಂತೆ ನಡೆದು ತನ್ನ ಹೊಟ್ಟೆಪಾಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದು ವಿಸ್ಮಯ ಮೂಡಿಸಿದೆ. ಪರಾವಲಂಬಿಯಾಗದೆ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರದ ಜಯಮ್ಮ ಬೈರೇಗೌಡರ ಮನೆಯಲ್ಲಿ 6 ತಿಂಗಳ ಹಿಂದೆ ಜನಿಸಿದ ಮೇಕೆ ಮರಿಯೊಂದು ಹುಟ್ಟುತ್ತಲೇ ಎರಡು ಕಾಲುಗಳನ್ನ ಮಾತ್ರ ಹೊಂದಿತ್ತು. ಎರಡು ಕಾಲಿನ ಮೇಕೆ ಮರಿಯನ್ನು ನೋಡಿದ ಜಯಮ್ಮನವರ ಕುಟುಂಬ ಆರಂಭದಲ್ಲಿ ಅದು ಬದುಕುವುದಿಲ್ಲವೆಂದು ತಿಳಿದಿದ್ದರು.
ಹೆಮ್ಮೆಯ ಮೇಕೆ : ದಿನಕಳೆದಂತೆ ಎರಡು ಕಾಲಿನ ಮೇಕೆ ಮರಿ(ಕರಿಯ) ಆರೋಗ್ಯದಿಂದ ಇರುವುದನ್ನು ಕಂಡು ಮುತುವರ್ಜಿಯಿಂದ ಜಯಮ್ಮ ಶುಶ್ರೂಷೆ ಮಾಡಿದರು. ಆರಂಭದಲ್ಲಿ ಹಾಲಿನ ಬಾಟಲಿ ಮೂಲಕ ಹಾಲುಣಿಸುತ್ತಿದ್ದರು. ಬೆಳೆದಂತೆ ಬೇರೆ ಮೇಕೆಗಳಂತೆ ಈ ಎರಡು ಕಾಲಿನ ಮೇಕೆಯೂ ಆಹಾರವನ್ನು ಸೇವಿಸಲು ಪ್ರಾರಂಭಿಸಿತು. ಎರಡೇ ಕಾಲಿದ್ದರೂ ಬೇರೆ ಮೇಕೆಗಳಂತೆಯೇ ಗಿಡಗಳನ್ನು ಬಾಗಿಸಿ ಸೊಪ್ಪು ತಿನ್ನುವುದು ಇತರೆ ಮೇಕೆಗಳಂತೆ ನಡೆದುಹೋಗುವುದು ಸಾಮಾನ್ಯವಾಯಿತು. 2 ಕಾಲಿನ ಮೇಕೆಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಜಯಮ್ಮ ಹೇಳುತ್ತಾರೆ.
ಪ್ರತಿ ದಿನ ಚಿಕ್ಕ ಮಗುವೊಂದು ನಡೆದುಹೋಗುವ ರೀತಿಯಲ್ಲಿ ಈ ಮೇಕೆ ಮರಿ ರಸ್ತೆಯಲ್ಲಿ ನಡೆದುಹೋಗುತ್ತದೆ. ಈ ಎರಡು ಕಾಲಿನ ಮೇಕೆಯ ದಿನನಿತ್ಯದ ಚಟುವಟಿಕೆಯ ಬಗ್ಗೆ ಗ್ರಾಮಸ್ಥರಲ್ಲಿ ಕುತೂಹಲ ಹುಟ್ಟುಹಾಕಿದ್ದರ ಜತೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಂಡು ನಾವೇಕೆ ಪರಾವಾಲಂಬಿಗಳಾಗಿದ್ದೇವೆ ಎಂದು ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಿದೆ.
ಈ ವಿಚಿತ್ರ ವಿಶಿಷ್ಟ ಮೇಕೆಯ ಅಸಾಮಾನ್ಯ ಗುಣವನ್ನು ಕಂಡ ಹಲವಾರು ಮಂದಿ ಹೆಚ್ಚು ಬೆಲೆ ನೀಡಿ ಕೊಳ್ಳಲು ಮುಂದೆ ಬಂದಿದ್ದರು. ಆದರೆ ಜಯಮ್ಮನವರ ಕುಟುಂಬದ ಪ್ರೀತಿಪಾತ್ರ ಸದಸ್ಯನಾಗಿರುವ ಈ ಕರಿಯನನ್ನು ಮಾರಾಟ ಮಾಡಲು ಮನಸು ಒಪ್ಪಲೇ ಇಲ್ಲ. ಈ ಎರಡು ಕಾಲಿನ ಕರಿಯ ಬ್ರಹ್ಮಣೀಪುರದಲ್ಲಿ ಸಖತ್ ಪ್ರಸಿದ್ಧಿ ಪಡೆದಿದೆ. ಕರಿಯ ಕೂಡ ಅಂಗವೈಕಲ್ಯವಿದ್ದರೂ ಪ್ರೀತಿಯಿಂದ ಬೆಳೆಸಿದ ತನ್ನ ಮಾಲೀಕನ ಮನೆಯಲ್ಲಿ ಕುಟುಂಬದ ಸದಸ್ಯನ ಸ್ಥಾನವನ್ನು ಪಡೆದಿದೆ. ಸೋಮಾರಿತನ ಮಾಡುತ್ತಾ ಪರಾವಲಂಬಿಗಳಾಗಿರುವ ಹಲವರಿಗೆ ಈ ಎರಡು ಕಾಲಿನ ಕರಿಯ ಮೇಕೆ ಮಾದರಿಯಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications