ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪತ್ರಕರ್ತೆಗೌರಿ ಲಂಕೇಶ್ ವಿರುದ್ಧ ಪ್ರತಿಭಟನೆ
ಕರವೇ ಹೊರತ್ತಿರುವ ಕರವೇ ನಲ್ನುಡಿ ಪತ್ರಿಕೆ ವಿರುದ್ಧ ಗೌರಿ ಸಂಪಾದಕತ್ವದಲಂಕೇಶ್ ಪತ್ರಿಕೆಯಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಲಾಗಿತ್ತು. ಈ ಸಂಬಂಧ ಗೌರಿ ಲಂಕೇಶ್ ಹಾಗೂ ಪಾರ್ವತೀಶ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಕರವೇ ವಿರುದ್ಧ ಲೇಖನ ಪ್ರಕಟಿಸಬಾರದು ಎಂದು ಹಣದ ಆಮೀಷ ನೀಡಲಾಗಿತ್ತು ಎಂದು ಆರೋಪಿಗಳು ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ನ್ಯಾಯಾಲಯ ಲೇಖನ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದ್ದರೂ ನ್ಯಾಯಾಲಯ ನಿಂದನೆ ಮಾಡಿ ಲೇಖನ ಪ್ರಕಟಿಸಿದ್ದಾರೆ ಎಂದು ಸಮಿತಿ ಕಾರ್ಯಕರ್ತ ಶಿವಕುಮಾರ್ ಆರೋಪಿಸಿದ್ದಾರೆ. ಇಂತಹ ಸಾಂಸ್ಕೃತಿಕ ಭಯೋತ್ಪಾದನೆ ಮತ್ತು ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.
Comments
ಕರವೇ ಗೌರಿ ಲಂಕೇಶ್ ಬೆಂಗಳೂರು ಪ್ರತಿಭಟನೆ ಎಂಜಿ ರಸ್ತೆ karnataka rakshana vedike karave gauri lankesh mg road bengaluru
Story first published: Wednesday, September 8, 2010, 18:10 [IST]