ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂತೂ ಇಂತೂ ಆಗಸ್ಟ್ 16ಕ್ಕೆ ಬಿಬಿಎಂಪಿ ಬಜೆಟ್
ಮೂಲಗಳ ಪ್ರಕಾರ, ಆಗಸ್ಟ್ 9ರಂದು ಬಜೆಟ್ ಮಂಡನೆಯಾಗಬೇಕಿತ್ತು.ಆದರೆ ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿರುವ ಕಾರಣ ಬಜೆಟನ್ನು ಮುಂದೂಡಲಾಗಿದೆ. ಆಗಸ್ಟ್ 12ರಂದು ಬಳ್ಳಾರಿಯಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆಗಸ್ಟ್ 13 ಶುಭ ದಿನವಲ್ಲ. ಹಾಗಾಗಿ ಕಡೆಗೆ ಆಗಸ್ಟ್ 16ರಂದು ಬಜೆಟ್ ಮಂಡಿಸಲು ಸಿದ್ಧತೆ ನಡೆದಿದೆ.
ಆಗಸ್ಟ್ ಕೊನೆಯ ವೇಳೆಗೆ ಸ್ಥಾಯಿ ಸಮಿತಿಯ ಸದಸ್ಯರ ಸಂಖ್ಯೆಯನ್ನು 7ರಿಂದ 11ಕ್ಕೆ ವಿಸ್ತರಿಸಲಾಗುತ್ತದೆ. ಬಿಬಿಎಂಪಿ ಪಾಲಿಕೆಯಲ್ಲಿ ಮೇಯರ್ ಎಸ್ ಕೆ ನಟರಾಜ್, ಉಪ ಮೇಯರ್ ಎನ್ ದಯಾನಂದ್ ಸೇರಿದಂತೆ ಒಟ್ಟು ಬಿಜೆಪಿಯ 111 ಮಂದಿ ಕೌನ್ಸಿಲರ್ ಗಳಿದ್ದಾರೆ.
Comments
Story first published: Thursday, August 5, 2010, 10:08 [IST]