ಕೆಎಸ್ಆರ್ ಟಿಸಿ ಚಾಲಕರಿಗೆ ಬೆಳ್ಳಿ ಪದಕ ಸನ್ಮಾನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 49ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ (ಆಗಸ್ಟ್ 2) ಹಾಸನ ವಿಭಾಗದ ವತಿಯಿಂದ ಅಪಘಾತ ರಹಿತ ಚಾಲಕರಿಗೆ ಕೆ.ಎಸ್.ಆರ್.ಟಿ.ಸಿ. ಹಾಸನ ಘಟಕದ ಆವರಣದಲ್ಲಿ ಏರ್ಪಡಿಸಿದ್ದ ಬೆಳ್ಳಿ ಪದಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮತ್ತು ಚಾಲಕರಿಗೆ ಬೆಳ್ಳಿ ಪದಕ ಪ್ರಧಾನದೊಂದಿಗೆ ಸನ್ಮಾನಿಸಿ ಮಾತನಾಡಿದರು.
ಕೆ.ಎಸ್.ಆರ್.ಟಿ.ಸಿ.ಯ ಚಾಲಕ-ನಿರ್ವಾಹಕರ ಪ್ರಾಮಾಣಿಕ ಸೇವೆಯಿಂದ ಆದಾಯ ತರುವುದು ಸಹ ಪ್ರಮುಖವಾಗಿದೆ. ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ನೀಡಿ ಗೌರವಿಸುವುದರೊಂದಿಗೆ ಸರ್ಕಾರದ ವತಿಯಿಂದ ಒಂದು ನಿವೇಶನ ನೀಡುವುದು ಸೂಕ್ತವಾಗಿರುತ್ತದೆ ಎಂದು ಆಶಯ ವ್ಯಕ್ತಪಡಿಸಿ, ಮುಂದಿನ ವರ್ಷದಿಂದ ಪದಕ ವಿಜೇತ ಚಾಲಕರ ಪತ್ನಿಗೆ ಹಾರ ಹಾಕಿ ಗೌರವಿಸಿ ಅವರನ್ನು ಪ್ರೋತ್ಸಾಹಿಸುವಂತಾಗಬೇಕೆಂದರು.
ಮುಂದಿನ ವರ್ಷ ನಿಗಮ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲು ನಿಗಮದ ಅಧಿಕಾರಿಗಳಿಗೆ ಸಲಹೆ ಮಾಡಿದರು. ಹಾಸನದಲ್ಲಿ ರೂ 50 ಕೋಟಿ ವೆಚ್ಚದಲ್ಲಿ ವಿನೂತನ ಮತ್ತು ಸುಸಜ್ಜಿತವಾಗಿ ನಿರ್ಮಾಣ ಗೊಂಡಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವು ರಾಜ್ಯದ ಇತರೆ ವಿಭಾಗಗಳಿಗಿಂತ ಮಾದರಿಯಾಗಿದೆ. ಇದಲ್ಲದೆ ರೂ 5 ಕೋಟಿ ವೆಚ್ಚದಲ್ಲಿ ಹಾಸನದಲ್ಲಿ ನಿರ್ಮಾಣಗೊಂಡು ಕಾರ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ತರಬೇತಿ ಅಕಾಡೆಮಿಯೂ ಉನ್ನತವಾದುದಾಗಿದೆ ಎಂದು ಅವರು ತಿಳಿಸಿದರು.
ಹೊಳೆನರಸೀಪುರ ಘಟಕದ ಬಸವರಾಜು, ಶ್ರೀನಿವಾಸಗೌಡ, ರಂಗಸ್ವಾಮಿ, ಪ್ರಕಾಶ್, ಜಮ್ರದ್ದೀನ್, ಹಾಸನ ಘಟಕದ ಅಬ್ದುಲ್ ಮನ್ನನ್, ರಂಗಶೆಟ್ಟಿ, ಬಿ.ಎನ್.ಸುರೇಶ, ಕೆ.ಆರ್. ವೆಂಕಟೇಶ, ಚನ್ನೇಗೌಡ, ಹೆಚ್.ಎಂ. ನಂಜುಂಡೇಶ್ವರ, ಚಂದ್ರೇಗೌಡ, ಬೊಮ್ಮೇಗೌಡ, ರುದ್ರಪ್ಪ, ಗಣೇಶಗೌಡ, ಅರಕಲಗೂಡು ಘಟಕದ ಮಂಜುನಾಥ, ಚನ್ನರಾಯಪಟ್ಟಣ ಘಟಕದ ಎಲ್. ಮಂಜುನಾಥ್, ಇವರುಗಳನ್ನು ಬೆಳ್ಳಿ ಪದಕದೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರಾದ ಚನ್ನರಾಯಪಟ್ಟಣ ಘಟಕದ ಸಂಚಾರ ನಿಯಂತ್ರಕ ಎನ್.ಜಿ. ನಾಗರಾಜ್, ಮತ್ತು ಹಾಸನ ಘಟಕದ ನಿರ್ವಾಹಕ ಡಿ.ಎಸ್.ಗಂಗಾಧರಪ್ಪ, ಇವರುಗಳನ್ನು ಸನ್ಮಾನಿಸಲಾಯಿತು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ, ನಗರಸಭಾ ಅಧ್ಯಕ್ಷೆ ಅಂಬಿಕಾ ರವಿಶಂಕರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಾಸಕರಾದ ಹೆಚ್.ಎಸ್.ಪ್ರಕಾಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕಾಮಾಕ್ಷಿ ರಾಜು, ಉಪಾಧ್ಯಕ್ಷ ಎಸ್.ದ್ಯಾವೇಗೌಡ, ಪ್ರಾದೇಶಿಕ ತರಬೇತಿ ಅಕಾಡೆಮಿ ಪ್ರಾಂಶುಪಾಲ ಆಲೂರು ಗೋಪಿನಾಥ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.