ಬರಲಿದೆ ಟಾಟಾ ಪೆಪ್ಸಿ ಮಿನರಲ್ ನೀರು

ಮೂಲಗಳ ಪ್ರಕಾರ ಒಂದು ಲೀಟರ್ ನೀರಿನ ಮಾರಾಟ ದರ ರೂ 10ಕ್ಕಿಂತ ಕಡಿಮೆ ಆಗಲಿದ್ದು 5 ರೂಪಾಯಿ ಆಗುವ ಸಾದ್ಯತೆಗಳೂ ಇವೆ ಎನ್ನಲಾಗಿದೆ. ಈ ಸಹಯೋಗ ಕಡಿಮೆ ವೆಚ್ಚದ ಪಾನೀಯಗಳನ್ನು ಬಿಡುಗಡೆ ಮಾಡುವ ಸಾದ್ಯತೆಗಳಿವೆ.
ದೇಶದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಬ್ರಾಂಡ್ ಗಳಾದ ಕಿನ್ಲೆ , ಅಕ್ವ ಫಿನಾ ಮತ್ತು ಬಿಸ್ಲೇರಿ ನೀರಿನ ಬೆಲೆ ಲೀಟರಿಗೆ ರೂ 15ರ ದರದಲ್ಲಿ ಮಾರಾಟವಾಗುತಿದ್ದು ಟಾಟಾದ ಹಿಮಾಲಯನ್ ನೀರಿನ ಬೆಲೆ ಲೀಟರಿಗೆ ರೂ 20 ಆಗಿದೆ. ಈ ಸಹಯೋಗ ಟೀ ಮಾರಾಟಕ್ಕೆ ಮುಂದಾಗುವುದಿಲ್ಲ.
ಏಕೆಂದರೆ ಪೆಪ್ಸಿ ಈಗಾಗಲೇ ಟೀ ಮಾರಾಟಕ್ಕೆ ಹಿಂದುಸ್ಥಾನ್ ಯೂನಿಲೀವರ್ ಜತೆ ಸಹಯೋಗ ಮಾಡಿಕೊಂಡಿದೆ. ಆದರೆ ಸಹಯೋಗ ಭಾರತದಲ್ಲಷ್ಟೇ ಅಲ್ಲದೆ ವಿದೇಶೀ ಮಾರುಕಟ್ಟೆಯಲ್ಲೂ ನೀರಿನ ಮಾರಾಟಕ್ಕೆ ಮುಂದಾಗಲಿದೆ. ಈ ಅಗ್ಗದ ನೀರಿನ ಮಾರಾಟದ ಕುರಿತು ಪ್ರತಿಕ್ರಿಯಿಸಲು ಟಾಟಾ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಎಲ್ ಕೆ ಕೃಷ್ಣ ಕುಮಾರ್ ನಿರಾಕರಿಸಿದ್ದು ಇದಿನ್ನೂ ಪ್ರಾರಂಭಿಕ ಹಂತ ಎಂದು ಹೇಳಿದರು.
ಮಾರುಕಟ್ಟೆ ಮೂಲಗಳ ಪ್ರಕಾರ ದೇಶದ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಮಾರುಕಟ್ಟೆ ಒಟ್ಟು ಪಾನೀಯ ಮಾರುಕಟ್ಟೆಯ ಶೇ15 ರಿಂದ 20 ರಷ್ಟಿದ್ದು 1500 ರಿಂದ 2000 ಕೋಟಿ ರುಪಾಯಿಗಳಾಗಿದೆ. ಎಲ್ಲಾ ಪ್ಯಾಕ್ ಮಾಡಲಾದ ಒಟ್ಟು ಪಾನೀಯಗಳ ಮಾರುಕಟ್ಟೆ 12,000 ಕೋಟಿ ರೂಪಾಯಿಗಳಾಗಿವೆ.
ನೀರಿನ ಮಾರುಕಟ್ಟೆ ವಾರ್ಷಿಕ ಶೇ.20ರಷ್ಟು ಬೆಳವಣಿಗೆ ದಾಖಲಿಸುತ್ತಿದ್ದು, ಲಾಭ ಕಡಿಮೆ ಇದೆ ಕಳೆದ ವರ್ಷ ಟಾಟಾ ಸ್ವಚ್ ಎಂಬ ವಿಶ್ವದ ಅತೀ ಕಡಿಮೆ ದರದ ನೀರಿನ ಶುದ್ದೀಕರಣ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕುಟುಂಬವೊಂದಕ್ಕೆ ತಿಂಗಳಿಗೆ ಕೇವಲ ರೂ 30ರ ವೆಚ್ಚದಲ್ಲಿ ಸ್ವಚ್ಚ ಕುಡಿಯುವ ನೀರಿನ ಪೂರೈಕೆಯ ಗುರಿ ಹೊಂದಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications