ಬರಲಿದೆ ಟಾಟಾ ಪೆಪ್ಸಿ ಮಿನರಲ್ ನೀರು

ಮೂಲಗಳ ಪ್ರಕಾರ ಒಂದು ಲೀಟರ್ ನೀರಿನ ಮಾರಾಟ ದರ ರೂ 10ಕ್ಕಿಂತ ಕಡಿಮೆ ಆಗಲಿದ್ದು 5 ರೂಪಾಯಿ ಆಗುವ ಸಾದ್ಯತೆಗಳೂ ಇವೆ ಎನ್ನಲಾಗಿದೆ. ಈ ಸಹಯೋಗ ಕಡಿಮೆ ವೆಚ್ಚದ ಪಾನೀಯಗಳನ್ನು ಬಿಡುಗಡೆ ಮಾಡುವ ಸಾದ್ಯತೆಗಳಿವೆ.
ದೇಶದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಬ್ರಾಂಡ್ ಗಳಾದ ಕಿನ್ಲೆ , ಅಕ್ವ ಫಿನಾ ಮತ್ತು ಬಿಸ್ಲೇರಿ ನೀರಿನ ಬೆಲೆ ಲೀಟರಿಗೆ ರೂ 15ರ ದರದಲ್ಲಿ ಮಾರಾಟವಾಗುತಿದ್ದು ಟಾಟಾದ ಹಿಮಾಲಯನ್ ನೀರಿನ ಬೆಲೆ ಲೀಟರಿಗೆ ರೂ 20 ಆಗಿದೆ. ಈ ಸಹಯೋಗ ಟೀ ಮಾರಾಟಕ್ಕೆ ಮುಂದಾಗುವುದಿಲ್ಲ.
ಏಕೆಂದರೆ ಪೆಪ್ಸಿ ಈಗಾಗಲೇ ಟೀ ಮಾರಾಟಕ್ಕೆ ಹಿಂದುಸ್ಥಾನ್ ಯೂನಿಲೀವರ್ ಜತೆ ಸಹಯೋಗ ಮಾಡಿಕೊಂಡಿದೆ. ಆದರೆ ಸಹಯೋಗ ಭಾರತದಲ್ಲಷ್ಟೇ ಅಲ್ಲದೆ ವಿದೇಶೀ ಮಾರುಕಟ್ಟೆಯಲ್ಲೂ ನೀರಿನ ಮಾರಾಟಕ್ಕೆ ಮುಂದಾಗಲಿದೆ. ಈ ಅಗ್ಗದ ನೀರಿನ ಮಾರಾಟದ ಕುರಿತು ಪ್ರತಿಕ್ರಿಯಿಸಲು ಟಾಟಾ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಎಲ್ ಕೆ ಕೃಷ್ಣ ಕುಮಾರ್ ನಿರಾಕರಿಸಿದ್ದು ಇದಿನ್ನೂ ಪ್ರಾರಂಭಿಕ ಹಂತ ಎಂದು ಹೇಳಿದರು.
ಮಾರುಕಟ್ಟೆ ಮೂಲಗಳ ಪ್ರಕಾರ ದೇಶದ ಪ್ಯಾಕ್ ಮಾಡಲಾದ ಕುಡಿಯುವ ನೀರಿನ ಮಾರುಕಟ್ಟೆ ಒಟ್ಟು ಪಾನೀಯ ಮಾರುಕಟ್ಟೆಯ ಶೇ15 ರಿಂದ 20 ರಷ್ಟಿದ್ದು 1500 ರಿಂದ 2000 ಕೋಟಿ ರುಪಾಯಿಗಳಾಗಿದೆ. ಎಲ್ಲಾ ಪ್ಯಾಕ್ ಮಾಡಲಾದ ಒಟ್ಟು ಪಾನೀಯಗಳ ಮಾರುಕಟ್ಟೆ 12,000 ಕೋಟಿ ರೂಪಾಯಿಗಳಾಗಿವೆ.
ನೀರಿನ ಮಾರುಕಟ್ಟೆ ವಾರ್ಷಿಕ ಶೇ.20ರಷ್ಟು ಬೆಳವಣಿಗೆ ದಾಖಲಿಸುತ್ತಿದ್ದು, ಲಾಭ ಕಡಿಮೆ ಇದೆ ಕಳೆದ ವರ್ಷ ಟಾಟಾ ಸ್ವಚ್ ಎಂಬ ವಿಶ್ವದ ಅತೀ ಕಡಿಮೆ ದರದ ನೀರಿನ ಶುದ್ದೀಕರಣ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕುಟುಂಬವೊಂದಕ್ಕೆ ತಿಂಗಳಿಗೆ ಕೇವಲ ರೂ 30ರ ವೆಚ್ಚದಲ್ಲಿ ಸ್ವಚ್ಚ ಕುಡಿಯುವ ನೀರಿನ ಪೂರೈಕೆಯ ಗುರಿ ಹೊಂದಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications