ಬಿಎಸ್ಸೆನ್ನೆಲ್ ನಲ್ಲಿ10 ಸಾವಿರ ನೌಕರರ ನೇಮಕ

ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಇದರಿಂದ ಕಂಪೆನಿಯ ಮಾರಾಟ ಹಾಗೂ ಮಾರುಕಟ್ಟೆ ವಿಭಾಗದ ನೌಕರರ ಒಟ್ಟು ಸಂಖ್ಯೆ 25,000 ತಲುಪಲಿದೆ ಎಂದು ಹೇಳಿದರು.
ನಷ್ಟದಲ್ಲಿರುವ ನಿಗಮದ ಪುನರುಜ್ಜೀವನಕ್ಕೆ ತಜ್ಞ ಸ್ಯಾಮ್ ಪಿತ್ರೋಡ ನೇತೃತ್ವದ ಸಮಿತಿಯು ನಿಗಮದ 1 ಲಕ್ಷ ನೌಕರರನ್ನು ನಿವೃತ್ತಿ ನೀಡಿ ಮನೆಗೆ ಕಳಿಸುವಂತೆ ಶಿಫಾರಸು ಮಾಡಿತ್ತು. ಆದರೆ ಕೆಲಸಗಾರರ ಸಂಖಯನ್ನು ಕಡಿತಗೊಳಿಸಿದರೆ ವಿವಿದ ನೌಕರರ ಸಂಘಟನೆಗಳು ಮುಷ್ಕರದ ಬೆದರಿಕೆಯನ್ನು ಹಾಕಿದ್ದವು.
ನಿಗಮ ಪ್ರಸ್ತುತ 3.5 ಲಕ್ಷ ನೌಕರರನ್ನು ಹೊಂದಿದೆ. ನಿಗಮ 400 ಕೋಟಿ ರೂ ಹೂಡಿಕೆಯ ಮೂಲಕ ತನ್ನ ಹಣಕಾಸು, ಸಿಬ್ಬಂದಿ, ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ಇತರ ವಿಭಾಗಗಳನ್ನು ಪುನರುಜ್ಜೀವಗೊಳಿಸುತ್ತಿದೆ ಎಂದು ಗೋಯೆಲ್ ತಿಳಿಸಿದರು.
ಇದೇ ಮೊದಲ ಬಾರಿಗೆ ನಿಗಮ ತನ್ನ ಮಾರಾಟ ವಿಭಾಗವನ್ನು ಸ್ಥಾಪಿಸಿದ್ದು, ಉತ್ತಮ ಬೆಳವಣಿಗೆ ದಾಖಲಿಸಿದ ಸಿಬ್ಬಂದಿಗಳಿಗೆ ಭತ್ಯೆಯನ್ನೂ ನೀಡುತ್ತಿದೆ. ಖಾಸಗಿ ಕಂಪೆನಿಗಳು 3ಜಿ ಮಾರುಕಟ್ಟೆ ಪ್ರವೇಶಿಸುವದಕ್ಕೂ ಮುನ್ನವೇ ದೇಶದ 3ಜಿ ಮಾರುಕಟ್ಟೆ ಹಾಗೂ ಬ್ರಾಡ್ ಬ್ಯಾಂಡ್ ನಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಭದ್ರಗೊಳಿಸಲು ನಿಗಮ ಯೋಜನೆ ಹಾಕಿಕೊಂಡಿದೆ.
ನಿಗಮ 3ಜಿ ಸೇವೆಯನ್ನು ಈಗಾಗಲೇ ೪೫೦ ನಗರಗಳಲ್ಲಿ ನೀಡಿದ್ದು ಇದನ್ನು ಶೀಘ್ರ 750 ನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಅಲ್ಲದೆ ಈಗಿನ 3ಜಿ ಗ್ರಾಹಕರ ಸಂಖೆಯನ್ನು 1.3 ಮಿಲಿಯ ದಿಂದ 4 ಮಿಲಿಯನ್ ಗಳಿಗೇರಿಸಲೂ ಯೋಜನೆ ಹಾಕಿಕೊಂಡಿದೆ.
ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಹೆಚ್ಚಿದ ಪೈಪೋಟಿಯಿಂದಾಗಿ ನಿಗಮದ ಮಾರುಕಟ್ಟೆ ಪಾಲು ಶೇ12 ಕ್ಕೆ ಕುಸಿದಿದ್ದು, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಿಗಮ ತಾನು 3ಜಿ ಹಾಗೂ ನಿಸ್ತಂತು ಬ್ರಾಡ್ ಬ್ಯಾಂಡ್ ತರಂಗಾಂತರ ಪರವಾನಗಿ ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಿರುವ ರೂ 18,500 ಕೋಟಿ ರೂಪಾಯಿಗಳನ್ನು ವಾಪಸ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications