ಬಿಎಸ್ಸೆನ್ನೆಲ್ ನಲ್ಲಿ10 ಸಾವಿರ ನೌಕರರ ನೇಮಕ

ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಇದರಿಂದ ಕಂಪೆನಿಯ ಮಾರಾಟ ಹಾಗೂ ಮಾರುಕಟ್ಟೆ ವಿಭಾಗದ ನೌಕರರ ಒಟ್ಟು ಸಂಖ್ಯೆ 25,000 ತಲುಪಲಿದೆ ಎಂದು ಹೇಳಿದರು.
ನಷ್ಟದಲ್ಲಿರುವ ನಿಗಮದ ಪುನರುಜ್ಜೀವನಕ್ಕೆ ತಜ್ಞ ಸ್ಯಾಮ್ ಪಿತ್ರೋಡ ನೇತೃತ್ವದ ಸಮಿತಿಯು ನಿಗಮದ 1 ಲಕ್ಷ ನೌಕರರನ್ನು ನಿವೃತ್ತಿ ನೀಡಿ ಮನೆಗೆ ಕಳಿಸುವಂತೆ ಶಿಫಾರಸು ಮಾಡಿತ್ತು. ಆದರೆ ಕೆಲಸಗಾರರ ಸಂಖಯನ್ನು ಕಡಿತಗೊಳಿಸಿದರೆ ವಿವಿದ ನೌಕರರ ಸಂಘಟನೆಗಳು ಮುಷ್ಕರದ ಬೆದರಿಕೆಯನ್ನು ಹಾಕಿದ್ದವು.
ನಿಗಮ ಪ್ರಸ್ತುತ 3.5 ಲಕ್ಷ ನೌಕರರನ್ನು ಹೊಂದಿದೆ. ನಿಗಮ 400 ಕೋಟಿ ರೂ ಹೂಡಿಕೆಯ ಮೂಲಕ ತನ್ನ ಹಣಕಾಸು, ಸಿಬ್ಬಂದಿ, ಮಾರುಕಟ್ಟೆ, ರಿಯಲ್ ಎಸ್ಟೇಟ್ ಮತ್ತು ಇತರ ವಿಭಾಗಗಳನ್ನು ಪುನರುಜ್ಜೀವಗೊಳಿಸುತ್ತಿದೆ ಎಂದು ಗೋಯೆಲ್ ತಿಳಿಸಿದರು.
ಇದೇ ಮೊದಲ ಬಾರಿಗೆ ನಿಗಮ ತನ್ನ ಮಾರಾಟ ವಿಭಾಗವನ್ನು ಸ್ಥಾಪಿಸಿದ್ದು, ಉತ್ತಮ ಬೆಳವಣಿಗೆ ದಾಖಲಿಸಿದ ಸಿಬ್ಬಂದಿಗಳಿಗೆ ಭತ್ಯೆಯನ್ನೂ ನೀಡುತ್ತಿದೆ. ಖಾಸಗಿ ಕಂಪೆನಿಗಳು 3ಜಿ ಮಾರುಕಟ್ಟೆ ಪ್ರವೇಶಿಸುವದಕ್ಕೂ ಮುನ್ನವೇ ದೇಶದ 3ಜಿ ಮಾರುಕಟ್ಟೆ ಹಾಗೂ ಬ್ರಾಡ್ ಬ್ಯಾಂಡ್ ನಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಭದ್ರಗೊಳಿಸಲು ನಿಗಮ ಯೋಜನೆ ಹಾಕಿಕೊಂಡಿದೆ.
ನಿಗಮ 3ಜಿ ಸೇವೆಯನ್ನು ಈಗಾಗಲೇ ೪೫೦ ನಗರಗಳಲ್ಲಿ ನೀಡಿದ್ದು ಇದನ್ನು ಶೀಘ್ರ 750 ನಗರಗಳಿಗೆ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ. ಅಲ್ಲದೆ ಈಗಿನ 3ಜಿ ಗ್ರಾಹಕರ ಸಂಖೆಯನ್ನು 1.3 ಮಿಲಿಯ ದಿಂದ 4 ಮಿಲಿಯನ್ ಗಳಿಗೇರಿಸಲೂ ಯೋಜನೆ ಹಾಕಿಕೊಂಡಿದೆ.
ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಹೆಚ್ಚಿದ ಪೈಪೋಟಿಯಿಂದಾಗಿ ನಿಗಮದ ಮಾರುಕಟ್ಟೆ ಪಾಲು ಶೇ12 ಕ್ಕೆ ಕುಸಿದಿದ್ದು, ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಿಗಮ ತಾನು 3ಜಿ ಹಾಗೂ ನಿಸ್ತಂತು ಬ್ರಾಡ್ ಬ್ಯಾಂಡ್ ತರಂಗಾಂತರ ಪರವಾನಗಿ ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸಿರುವ ರೂ 18,500 ಕೋಟಿ ರೂಪಾಯಿಗಳನ್ನು ವಾಪಸ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications