ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್
ಬೆಂಗಳೂರು, ಜು.25: ಮದ್ಯದ ದೊರೆ ವಿಜಯ್ ಮಲ್ಯ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ತನ್ನ ವಾರ್ಷಿಕ ಶೇ.12ರ ಬೆಳವಣಿಗೆಯ ಮೂಲಕ ಈ ಹಣಕಾಸು ವರ್ಷದಲ್ಲಿ ವಿಶ್ವದ ನಂಬರ್ 1 ಮದ್ಯ ತಯಾರಿಕಾ ಕಂಪೆನಿಯಾಗಿ ಹೊರಹೊಮ್ಮಲಿದೆ ಎಂದು ತನ್ನ ಶೇರುದಾರರಿಗೆ ತಿಳಿಸಿದೆ.
ತನ್ನ ಮುಂದಿನ ಯೋಜನೆಗಳನ್ನು ಶೇರುದಾರರೊಂದಿಗೆ ಹಂಚಿಕೊಂಡ ಕಂಪೆನಿ, ಮುಂದಿನ ಮೂರು ವರ್ಷಗಳಲ್ಲಿ ಕಂಪೆನಿಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು 1100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿರುವದಾಗಿ ತಿಳಿಸಿದೆ.
ಕಂಪೆನಿ 2009-10ರಲ್ಲಿ ವಾರ್ಷಿಕ ನೂರು ಮಿಲಿಯನ್ ಕೇಸ್ ಗಳಷ್ಟು ಮದ್ಯ ಮಾರಾಟ ಮಾಡಿದ್ದು ವಿಶ್ವದ ಎರಡನೇ ಅತೀ ದೊಡ್ಡ ಮದ್ಯ ಮಾರಾಟ ಕಂಪೆನಿಯಾಗಿ ಹೊರಹೊಮ್ಮಿದೆ. ಎರಡಂಕಿಗಳ ಬೆಳವಣಿಗೆಯನ್ನು ಕಾಯ್ದುಕೊಂಡರೆ ಕಂಪೆನಿ ಈ ವರ್ಷ ಮೊದಲ ಸ್ಥಾನಕ್ಕೇರಲಿದೆ.

1100 ಕೋಟಿ ರುಪಯಿ ಹೂಡಿಕೆಯ ಮೂಲಕ ಕಂಪೆನಿ ಬಾಟ್ಲಿಂಗ್ ಸಾಮರ್ಥ್ಯ ಹಾಗೂ ಮಾಲ್ಟ್ ಸ್ಪಿರಿಟ್ ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದು ಕಂಪೆನಿ ಹೇಳಿದೆ. ಕಂಪೆನಿ ಹೊಸ ಬ್ರಾಂಡ್ ಗಳನ್ನು ಬಿಡುಗಡೆ ಮಾಡಲಿದ್ದು, ವೈಟ್ ಮತ್ತು ಮೆಕೆ ಬ್ರಾಂಡ್ ನ್ನೂ ಬಿಡುಗಡೆ ಮಾಡಲಿದೆ.
ಕಂಪೆನಿಯ ಪ್ರೀಮಿಯಂ ಬ್ರಾಂಡ್ ಗಳಲ್ಲಿ ಹೆಚ್ಚಿನ ಬದಲಾವಣೆ ತರಲೂ ಕಂಪೆನಿ ನಿರ್ಧರಿಸಿದೆ . ಕಂಪೆನಿಯ ಬ್ರಾಂಡೆಡ್ ವ್ಯಾಪಾರ ಇಂಗ್ಲೆಂಡ್ ನಲ್ಲಿ ಶೇ.45 ರಿಂದ ಶೇ.30ಕ್ಕೆ ಕುಸಿದಿದೆ. ಮುಂದಿನ ಎರಡು ವರ್ಷಗಳಲ್ಲಿ ವೈಟ್ ಅಂಡ್ ಮೆಕೆ ಸ್ಕಾಚ್ ವ್ಹಿಸ್ಕಿಯ ಮಾರಾಟವನ್ನು ವಾರ್ಷಿಕ 2,75,000 ಕೇಸ್ ಗಳಿಗೆ ಏರಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಶೇ20 ಪಾಲನ್ನು ಪಡೆಯಲು ಕಂಪೆನಿ ಯೋಚಿಸಿದೆ.
ಕಂಪೆನಿ ಕಳೆದ ಹಣಕಾಸು ವರ್ಷದಲ್ಲಿ ವೈಟ್ ಅಂಡ್ ಮಕೆಯ 1.5 ಲಕ್ಷ ಕೇಸ್ ವಿಸ್ಕಿಯನ್ನು ಮಾರಾಟ ಮಾಡಿದೆ. ಕಂಪೆನಿಯ ಮಾರಾಟ ಮಳಿಗೆಗಳನ್ನು ಈಗಿನ 15,000 ದಿಂದ 25,000ಕ್ಕೇರಿಸಲೂ ಕಂಪೆನಿ ನಿರ್ಧರಿಸಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications