ನಿತ್ಯಾ ಪುರಾಣ : ದೋಷಾರೋಪ ಪಟ್ಟಿಗೆ ತಡವೇಕೆ?
ಬೆಂಗಳೂರು,
ಜು. 24 : ರಾಸಲೀಲೆ ಪ್ರಕರಣದ ಆರೋಪಿ ನಿತ್ಯಾನಂದ ಸ್ವಾಮಿ ವಿರುದ್ಧ ನಾಲ್ಕು ವಾರದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದಿದ್ದರೆ ಎಫ್ಐಎಆರ್ ರದ್ದು ಮಾಡುವುದಾಗಿ ಸಿಐಡಿ ಪೊಲೀಸರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. id="toptextpromo">ಕಾರು
ಚಾಲಕ ಲೆನಿನ್ ಕುರುಪ್ಪನ್ ಹಾಗೂ ಮತ್ತೊಬ್ಬ ವ್ಯಕ್ತಿ ನೀಡಿದ ಸುಳ್ಳು ದೂರು ಆಧರಿಸಿ ಬಿಡದಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಮಾಡಿ ಸಿಐಡಿಗೆ ತಡೆ ನೀಡಬೇಕೆಂದು ಕೋರಿ ನಿತ್ಯಾನಂದ ಸ್ವಾಮಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅರಳಿ ನಾಗರಾಜ್, 4 ನಾಲ್ಕು ವಾರಗಳಲ್ಲಿ ತನಿಖಎ ಪೂರ್ಣಗೊಳಿಸಿ ದೋಷಾರೂಪ ಪಟ್ಟಿ ಸಲ್ಲಿಸುವಂತೆ ತಾಕೀತು ಮಾಡಿದರು. id='are-slot-1' class='oiad oi-axt oiadv'> id='top-searched-articles'>ಸಂಶಯದ
ಆಧಾರದ ಮೇಲೆ ವ್ಯಕ್ತಿಯೊಬ್ಬನಿಗೆ ತಿಂಗಳುಗಟ್ಟಲೇ ಹಿಂಸೆ ನೀಡುವುದು ಶೋಭೆ ತರುವುದು ವಿಷಯವಲ್ಲ. ದಾಖಲಾದ ವ್ಯಕ್ತಿಯ ವಿರುದ್ಧ ನಿರ್ದಿಷ್ಟ ಆರೋಪಗಳಿದ್ದು, ಅದಕ್ಕೆ ಪೂರಕ ಸಾಕ್ಷ್ಯಾಗಳು ಇದ್ದರೆ ಶೀಘ್ರ ದೋಷಾರೋಪ ಪಟ್ಟಿ ಸಲ್ಲಿಸಲು ಸಮಸ್ಯೆಯೇನು ? ತನಿಖೆ ನೆಪದಲ್ಲಿ ಹಿಂಸೆ ನೀಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ತರಾಟೆಗೆ ತಗೆದುಕೊಂಡಿದ್ದಾರೆ.











Click it and Unblock the Notifications