ಶಿಕ್ಷೆಯ ಹೊಸ್ತಿಲಲ್ಲಿ ಸುಂದರ ಹಂತಕಿ ಶುಭಾ

2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಗಿರೀಶ್ ಅವರ ಕೊಲೆ ನಡೆದಿತ್ತು. ನಿಶ್ಚಿತಾರ್ಥ ನಡೆದ ನಾಲ್ಕು ದಿನಗಳಲ್ಲೇ ತನ್ನ ಭಾವಿಪತಿಯನ್ನು ಕೊಲ್ಲಲು ಆರೋಪಿ ಶುಭಾ, ತನ್ನ ಪ್ರಿಯಕರನ ಸಹಾಯ ಪಡೆದಿದ್ದಳು. ಇವರಿಬ್ಬರ ನಡುವೆ ನಡೆದಿದ್ದ ಎಸ್ಎಂಎಸ್ ಸಂದೇಶ ವಿನಿಮಯ ಹಾಗೂ ಕೊಲೆ ಮಾಡಲು ಬಳಸಿದ್ದ ರಾಡ್ ಅನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ ಎಂದು ತನಿಖಾಧಿಕಾರಿ ದಾವೂದ್ ಖಾನ್ ಹೇಳಿದರು.
ಸುಂದರ ಹಂತಕಿಯ ಇನ್ನೊಂದು ಮುಖ: ಬನಶಂಕರಿ 2ನೇ ಹಂತದ 23ನೇ ಮುಖ್ಯರಸ್ತೆಯಲ್ಲಿ ಬಾಲ್ಯದಿಂದಲೂ ಗಿರೀಶ್ ಹಾಗೂ ಶುಭಾ ಒಟ್ಟಿಗೆ ಆಡಿ ಬೆಳೆದವರು. ಬ್ರಾಹ್ಮಣ ವಠಾರದ ಸುಂದರ ಯುವಕ ಗಿರೀಶ್ , ದೊಡ್ಡ ಸಾಫ್ಟ್ ವೇರ್ ಕಂಪೆನಿ ಇಂಟೆಲ್ ನಲ್ಲಿ ಉದ್ಯೋಗ. ತಮ್ಮ ಏರಿಯಾದಲ್ಲೇ ಇದ್ದ ವಕೀಲ ಶಂಕರನಾರಾಯಣ ಅವರ ಮಗಳು ಶುಭಾಳನ್ನು ಮೆಚ್ಚಿದ್ದ. ಗಿರೀಶ್ ಅವರ ತಂದೆ ನಿವೃತ್ತ ವಾಯುಸೇನಾಧಿಕಾರಿ ಬಿ ವೆಂಕಟೇಶ್ ಹಾಗೂ ತಾಯಿ ಪುಷ್ಪವಲ್ಲಿ ಮದುವೆ ಮಾತುಕತೆ ನಡೆಸಿದರು. ಆಗಿನ್ನೂ ಬಿಎಂಎಸ್ ಕಾನೂನು ಕಾಲೇಜಿನಲ್ಲಿ ಮೂರನೇ ವರ್ಷಕ್ಕೆ ಕಾಲಿರಿಸಿದ್ದ ಶುಭಾ ಕೂಡಾ ಒಪ್ಪಿಗೆ ಸೂಚಿಸಿದ್ದಳು.
ಸಂಭ್ರಮದಿಂದ ನಿಶ್ಚಿತಾರ್ಥ ನಡೆದು ಹೋಯ್ತು. ಇತ್ತ ಗಿರೀಶ್ ಹೊಸಬಾಳಿನ ಕನಸು ಕಾಣತೊಡಗಿದ. ಅತ್ತ ಶುಭಾ, ತನ್ನ ಕಾಲೇಜಿನ ಸಹಪಾಠಿ ಅರುಣ್ ವರ್ಮಾ ಎಂಬ ಅನ್ಯ ಕೋಮಿನ ಯುವಕನ ಬಗ್ಗೆ ಚಿಂತಿಸತೊಡಗಿದ್ದಳು. ಗಿರೀಶ್ ಅನ್ನು ಕೊಲೆ ಮಾಡದ ಹೊರತು ನಮ್ಮ ಪ್ರೀತಿ ಫಲಿಸಲ್ಲ ಎಂದು ತಿಳಿದ ಪ್ರೇಮಾಂಧರು, ಕೊಲೆಗೆ ಸ್ಕೆಚ್ ರೂಪಿಸಿಯೇ ಬಿಟ್ಟರು.
ಕೋರಮಂಗಲ ಔಟರ್ ರಿಂಗ್ ರಸ್ತೆಗೆ ಗಿರೀಶ್ ಅನ್ನು ಶುಭಾ ಕರೆದುಕೊಂಡು ಬಂದು ವಿಮಾನ ನೋಡಬೇಕು ಎಂದಾಗ, ಸಂತೋಷದಿಂದ ಗಿರೀಶ್ ಬಂದಿದ್ದ. ಆದರೆ, ಭಾವಿ ಪತಿ ಪಕ್ಕದಲ್ಲಿರುವಾಗಲೇ ಶುಭಾಳ ವಿಕೃತ ಮನಸ್ಸು, ಹುಚ್ಚುಪ್ರೇಮಿಗೆ ಸಂದೇಶವನ್ನು ಕಳಿಸುತ್ತಿತ್ತು.
ಸ್ನೇಹಿತರಾದ ದಿನೇಶ್ ಅಲಿಯಾಸ್ ದಿನಕರನ್, ವೆಂಕಟೇಶ್ ಜೊತೆಗೂಡಿದ ಅರುಣ್ ಕೊಲೆಗೆ ಸಿದ್ಧವಾಗಿ ಬಂದೇ ಬಿಟ್ಟ. ಶುಭಾ ಜೊತೆಯಿದ್ದ ಗಿರೀಶ್ ಮೇಲೆ ಏಕಾಏಕಿ ರಾಡ್ ನಿಂದ ದಾಳಿ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಏನೂ ನಡೆದಿಲ್ಲ ಎಂಬಂತೆ ಈ ತಂಡ ಮನೆ ತಲುಪಿಬಿಟ್ಟಿತು. ನಂತರ ಡಿ.23ಕ್ಕೆ ಅಮೆರಿಕಕ್ಕೆ ತೆರಳಲು ಕೂಡಾ ಶುಭಾ ಯತ್ನಿಸಿದ್ದಳು.
ಆದರೆ, ತಡವಾಗಿಯಾದರೂ ಗಿರೀಶ್ ಅವರ ಕುಟುಂಬಕ್ಕೆ ನ್ಯಾಯ ದೊರೆಕಿದೆ. ಆರೋಪ ಸಾಬೀತಾಗಿರುವುದರಿಂದ ಜೀವಾವಧಿ ಶಿಕ್ಷೆ ಸಿಗುವ ಸಾಧ್ಯತೆಯಿದೆ. ಗಿರೀಶ್ ಸಾವಿನ ನಂತರ ಪುತ್ರ ಶೋಕಂ ನಿರಂತರಂ ಎಂಬಂತೆ ಆತನ ವಯೋವೃದ್ಧ ತಂದೆ ಕೂಡಾ ಕೊರಗುತ್ತಾ ಸಾವನ್ನಪ್ಪಿದ್ದರು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications