3ಜಿ ಅಂದ್ರೆ ಕ್ಯಾಜಿ ಎನ್ನುವ ಸಂಸದರಿಗೂ ಫೋನ್!

ಆದರೆ, ದುರಂತವೆಂದರೆ ಹೆಚ್ಚಿನ ನಮ್ಮ ನೇತಾರರಿಗೆ 3ಜಿ ಎಂದರೇನು ಎಂದು ತಿಳಿದಿಲ್ಲ. ಇನ್ನೂ ಗ್ರಾಮೀಣ ಭಾಗದ ಪ್ರತಿನಿಧಿ ಎಂದು ಗುರುತಿಸಿಕೊಳ್ಳಲು ಹೆಚ್ಚು ಸಂಸದರು ಇಷ್ಟಪಡುತ್ತಾರೆ. ಅದು ಅವರಿಗೆ ಲಾಭದಾಯಕ ಕೂಡಾ. ತಂತ್ರಜ್ಞಾನದ ಬಗ್ಗೆ ಅರಿವಿಲ್ಲದಿದ್ದರೂ ಅಧುನಿಕ ಸೌಲಭ್ಯ ಬೇಕಂತೆ. ಅದನ್ನು ಸಮಾಜ ಹಾಗೂ ದೇಶದ ಉದ್ಧಾರಕ್ಕೆ ಬಳಸುತ್ತೇವೆ ಎನ್ನುತ್ತಾರೆ ಕಾಂಗ್ರೆಸ್ ಸಂಸದರೊಬ್ಬರು.
ಸಂಸದರಿಗೆ 3ಜಿ ಸೌಲಭ್ಯ ಒದಗಿಸುವ ವಿಚಾರವನ್ನುಸಂಸದರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿ ಪರಿಶೀಲಿಸುತ್ತಿದೆ ಎಂದು ಲೋಕಸಭಾ ಕಾರ್ಯಾಲಯ ಹೇಳಿದೆ. 3ಜಿ ಪ್ಯಾಕೇಜ್ಗೆ ಮತ್ತು ಆ ಸೌಲಭ್ಯದ ಹೆಚ್ಚುವರಿ ಬಳಕೆಗೆ ತಗಲುವ ವೆಚ್ಚಗಳನ್ನು ಪ್ರಸಕ್ತ ಸಂಸದರಿಗೆ ಪ್ರತಿವರ್ಷ ಲಭ್ಯವಾಗುವ 1,50,000 ಉಚಿತ ಕರೆಗಳಿಗೆ ತಗಲುವ ವೆಚ್ಚದ ಮಿತಿಯಲ್ಲಿ ಹೊಂದಾಣಿಕೆ ಮಾಡಬಹುದಾಗಿದೆ.
ಎಂಟಿಎನ್ಎಲ್/ಬಿಎಸ್ಎನ್ಎಲ್ ಒದಗಿಸಿರುವ ಈ ಹೊಸ ಸೌಲಭ್ಯ ಸಂಸದರಿಗೆ ಐಚ್ಛಿಕವಾಗಿರುತ್ತದೆ. ಆದರೆ 3ಜಿ ಸೌಲಭ್ಯ ಲಭಿಸುವ 3ಜಿ ಹ್ಯಾಂಡ್ಸೆಟ್ಗೆ ತಗಲುವ ವೆಚ್ಚವನ್ನು ಸದಸ್ಯರೇ ಭರಿಸಬೇಕಾಗುತ್ತದೆ. ಸಂಸದರ ಮಾಸಿಕ ವೇತನವನ್ನು 16,000 ರೂ. ಗಳಿಂದ 80,000 ರೂ.ಗಳಿಗೆ ಏರಿಸಬೇಕೆಂದು ಸಮಿತಿಯು ಇತ್ತೀಚೆಗಷ್ಟೇ ಶಿಫಾರಸು ಮಾಡಿತ್ತು.
ಸಂಸದರ ವೇತನ ಮತ್ತು ಭತ್ಯೆಗಳಲ್ಲಿ ಮಾಡಬೇಕಾದ ಹೆಚ್ಚಳದ ಪ್ರಮಾಣವನ್ನು ನಿರ್ಧರಿಸಲಾಗಿಲ್ಲ. ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಸರಕಾರ ಈ ಸಂಬಂಧ ಮಸೂದೆಯೊಂದನ್ನು ಮಂಡಿಸುವ ನಿರೀಕ್ಷೆ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಾಲ್ ಹೇಳಿದ್ದಾರೆ
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications