ಗಂಡನ ಕೊಲೆಗೆ ಮಂತ್ರವಾದಿ ಮೊರೆಹೋದ ಹೆಂಡತಿ

ಘಟನೆಯ ವಿವರ : ರಾಜು ಎಂಬಾತನಿಗೆ ಸೇರಿದ ಮನೆಯಲ್ಲಿ ನಿನ್ನೆ ದಿನ ರಾತ್ರಿ ಈತನ ಹೆಂಡತಿ ಪುಷ್ಪ ಎಂಬಾಕೆಯೇ ಈ ಕೃತ್ಯ ನಡೆಸಲು ಮುಂದಾಗಿದ್ದು, ಇದಕ್ಕಾಗಿ ಆಂಧ್ರಪ್ರದೇಶದಿಂದ ಮಂತ್ರವಾದಿಗಳಾದ ನರೇಂದ್ರ ಹಾಗೂ ಮೂರ್ತಿ ಎಂಬಿಬ್ಬರನ್ನು ಕರೆಸಿಕೊಂಡು ನರಬಲಿ ನೀಡುವ ಉದ್ದೇಶದಿಂದಲೇ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಳು.
ಇದಕ್ಕಾಗಿ ಮನೆಯ ಹಿಂಭಾಗದ ಜಾಗದಲ್ಲಿ 7 ಅಡಿ ಆಳ ಹಾಗೂ ಸುಮಾರು 5 ಅಡಿ ಉದ್ದದ ಗುಂಡಿಯನ್ನು ತೋಡಿದ್ದು, ಮನೆಯೊಳಗಡೆ ಇದಕ್ಕಾಗಿ ಸಕಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡು, ಬಲಿಕೊಡುವ ಉದ್ದೇಶಕ್ಕಾಗಿಯೇ ಮಚ್ಚೊಂದಕ್ಕೆ ನಿಂಬೆಹಣ್ಣೊಂದನ್ನು ಮಂತ್ರಿಸಲಾಗಿದೆ.
ಪುಷ್ಪಳ ಗಂಡನಾಗಿರುವ ರಾಜುವಿಗೆ 4 ಲಕ್ಷದಷ್ಟು ಆಸ್ತಿಯಿದ್ದು, ಆಸ್ತಿಯನ್ನು ಕಬಳಿಸುವ ಉದ್ದೇಶದಿಂದಲೇ ಈ ರೀತಿಯ ಸಂಚನ್ನು ಮಾಡಿರುವುದಾಗಿ ಸಂದೇಹ ವ್ಯಕ್ತಪಡಿಸಲಾಗಿದೆ. ಅಮಾವಾಸ್ಯೆ ಭಾನುವಾರ ಇರುವುದರಿಂದ ಶುಕ್ರವಾರ ರಾತ್ರಿಯೇ ಆಕೆಯ ಗಂಡ ರಾಜುನನ್ನು ಬಲಿಕೊಡಲು ಸಂಚು ರೂಪಿಸಲಾಗಿತ್ತು.
ಈ ಬಗ್ಗೆ ರಾಜುವಿನ ತಮ್ಮನಾದ ರವಿ ಎಂಬಾತ ಪ್ರತಿಕ್ರಿಯಿಸಿ, ಹತ್ತು ಜನರ ತಂಡ ಅಣ್ಣನ ಮನೆಯ ಹಿಂಭಾಗದಲ್ಲೇ ಇರುವ ನನ್ನ ಮನೆಯ ಬಾಗಿಲ ಹತ್ತಿರ ಬಂದು, ಹೊರಬರುವಂತೆ ಕರೆದರು. ರಾತ್ರಿಯ ವೇಳೆಯಾದ್ದರಿಂದ ಹೊರಬರಲು ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ಪಕ್ಕದಲ್ಲಿಯೇ ಇದ್ದ ಜಾಗದಲ್ಲಿ ಸೀರೆಯನ್ನು ಕಟ್ಟಿ, ಗುಂಡಿ ತೋಡುತ್ತಿರುವುದು ಗಮನಕ್ಕೆ ಬಂದು ಇದರಲ್ಲಿ ಏನೋ ದುರುದ್ದೇಶ ಅಡಗಿದೆ ಎಂಬ ಸಂಶಯದಿಂದ ಹೆದರಿ ಹೊರಗೆ ಬರಲಿಲ್ಲ ಎಂದಿದ್ದಾನೆ.
ಕೊಲೆ ಮಾಡುವ ಸಂಚು ಅರಿವಿಗೆ ಬಂದು ಗ್ರಾಮಸ್ಥರು ಮಂತ್ರವಾದಿಗಳು ಹಾಗೂ ಘಟನೆಗೆ ಸಹಕರಿಸುತ್ತಿದ್ದ ಎಂಟರಿಂದ ಹತ್ತು ಜನರನ್ನು ಹಿಡಿಯಲು ಯತ್ನಿಸಿದಾಗ ಅದರಲ್ಲಿ ಮಂತ್ರವಾದಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ. ನಂತರ ಘಟನೆಯ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿ ವಿಷಯವನ್ನು ತಿಳಿಸಿದಾಗ ಪೊಲೀಸರು ತಕ್ಷಣಕ್ಕೆ ಬಂದು ಮಂತ್ರವಾದಿಗಳನ್ನು ಹಾಗೂ ಘಟನೆಗೆ ಕಾರಣಕರ್ತೆಯಾದ ರವಿಯ ಅತ್ತಿಗೆಯನ್ನು ಬಂಧಿಸಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications