ಕುತೂಹಲಕಾರಿ ಕ್ವಾಟರ್ ಫೈನಲ್ ಪಂದ್ಯ
ಜೋಹಾನ್ಸ್ ಬರ್ಗ್, ಜು.2: ಇಂದು ಮಧ್ಯರಾತ್ರಿ 12 ಗಂಟೆಗೆ ಜೊಹಾನ್ಸ್ಬರ್ಗ್ನಲ್ಲಿ ನಡೆಯುವ ಎರಡನೇ ಕ್ವಾರ್ಟರ್ಫೈನಲ್ನಲ್ಲಿ ಉರುಗ್ವೆ ಹಾಗೂ ಘಾನಾ ತಂಡಗಳು ಪರಸ್ಪರ ಎದುರಿಸಲಿವೆ. ನಿರ್ರಿಕ್ಷೆಗೂ ಮೀರಿದ ಪ್ರದರ್ಶನ ನೀಡಿರುವ ಎರಡೂ ತಂಡಗಳು ಮುಂದಿನ ಹಂತ ತಲುಪಿದರೆ ಹೊಸ ಇತಿಹಾಸ ನಿರ್ಮಿಸಿದ್ದಂತೆ.
ಫಲಿತಾಂಶ ನಿರೀಕ್ಷೆ: ಉರುಗ್ವೆ ಹಾಗೂ ಘಾನಾ ತಂಡಗಳ ಆಕ್ರಮಣಕಾರಿ ಆಟದ ಪರಿಚಯವಿದ್ದರೂ, ಮಹತ್ವದ ಪಂದ್ಯದಲ್ಲಿ ರಕ್ಷಣಾ ತಂತ್ರವನ್ನು ಹೆಣೆಯಲಾಗಿದೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಈ ಪಂದ್ಯದಲ್ಲಿ ಉತ್ತಮ ಡಿಫೆಂಡ್ ಮಾಡುವ ತಂಡಕ್ಕೆ ಜಯ ನಿಶ್ಚಿತ.ಮೇಲ್ನೋಟಕ್ಕೆ ಉರುಗ್ವೆ ಡಿಫೆನ್ಸ್ ಉತ್ತಮವಾಗಿದ್ದು, ಪಂದ್ಯವನ್ನು 1-0 ಅಂತರದಿಂದ ಜಯಗಳಿಸಿ ಸುಮಾರು 40 ವರ್ಷಗಳ ನಂತರ ಸೆಮಿಸ್ ಬಾಗಿಲ ಬಳಿಗೆ ಬರುತ್ತದೆ ಎಂದು ಬುಕ್ಕಿಗಳು ಘೋಷಿಸಿದ್ದಾರೆ.
ವಿಶ್ವಕಪ್ ವಿಡಿಯೋಗಳು:
ಕ್ವಾಟರ್ ಫೈನಲ್ಸ್ ಗೆ ಭರ್ಜರಿ ಸಿದ್ಧತೆ
ಇಂಗ್ಲೆಂಡ್ ಗೆ ಗರ್ವಭಂಗ, ಜರ್ಮನಿಗೆ ವಿಜಯೋತ್ಸವ
ಚಿಲಿಯನ್ನು ಹೊಸಕಿದ ಸಾಂಬಾ ಬಾಯ್ಸ್
ಲ್ಯಾಂಪರ್ಡ್ ಕ್ಷಮೆ ಕೋರಿದ ಫೀಫಾ
ಕ್ವಾಟರ್ ಫೈನಲ್ ಗೂ ಮುನ್ನ: ಆಡಿದ ನಾಲ್ಕುಪಂದ್ಯಗಳಲ್ಲಿ ಉರುಗ್ವೆ ಮೂರರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಘಾನಾ ಎರಡು ಪಂದ್ಯಗಳನ್ನು ಗೆದ್ದು, ಒಂದು ಡ್ರಾಸಾಧಿಸಿ, ಮತ್ತೊಂದರಲ್ಲಿ ಸೋಲುಂಡಿದೆ.
ಪ್ರಮುಖ ಆಟಗಾರರು: ಸ್ಟ್ರೈಕರ್ ಲೂಯಿಸ್ ಸೊರೆಜ್ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದು, ಈಗಾಗಲೇ 4ಪಂದ್ಯದಲ್ಲಿ 3 ಗೋಲು ಹೊಡೆದು ಗೋಲು ಗಳಿಕೆಯವರ ಪಟ್ಟಿಯಲ್ಲಿಯೂ ಪೈಪೋಟಿ ನೀಡುತ್ತಿದ್ದಾರೆ. ಉಳಿದಂತೆ ಫೊರ್ಲಾನೊ ಉತ್ತಮ ಲಯದಲ್ಲಿದ್ದಾರೆ.
ಉರುಗ್ವೆ ರಣತಂತ್ರ: (4-4-2) ಮಾದರಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.ಫೊರ್ಲೊನೊ, ಸೊರೆಜ್ ಗೆ ಕವಾನಿ, ಫರ್ನಾಂಡೆಜ್ ಸಾಥ್ ನೀಡಲಿದ್ದು, ಗೊನ್ಜಾಲಿಸ್, ಪೆರೆರಾ ಮಿಡ್ ಫೀಲ್ಡ್ ನೋಡಿಕೊಳ್ಳಲಿದ್ದಾರೆ. ಲೂಗಾನೊ, ಕಾಕೆರೆಸ್, ವಿಕ್ಟೊರಿನೋ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ರಕ್ಷಣೆ ಸಮರ್ಪಕವಾಗಿದ್ದರೆ ಜಯ ಖಂಡಿತ.
ಘಾನಾ ರಣತಂತ್ರ: ಮೆನ್ಸಾ ಪಡೆಯ ಡಿಫೆಂಡರ್ ಗಳೇ ತಂಡದ ನ್ಯೂನತೆ ಎನ್ನಬಹುದು. ಉರುಗ್ವೆಯಂತೆ ಘಾನಾ ಕೂಡಾ (4-4-2) ಮಾದರಿಯಲ್ಲೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಘಾನಾ ಗೆಲ್ಲಬೇಕಾದರೆ ಉತ್ತಮ ರಕ್ಷಣಾ ತಂತ್ರ ಹಾಗೂ ತಾಳ್ಮೆ ಅಗತ್ಯವಿದೆ.
ಕೆವಿನ್ ಪ್ರಿನ್ಸ್, ಎ.ಗ್ಯಾನ್ ಮೇಲೆ ಘಾನಾ ಹೆಚ್ಚು ಅವಲಂಬಿತವಾಗಿದೆ. ಈ ಇಬ್ಬರೂ ಆಟಗಾರರು ಕಷ್ಟದ ಪರಿಸ್ಥಿತಿಯಲ್ಲಿ ತಂಡದ ಕೈ ಹಿಡಿದು ಮುನ್ನೆಡೆಸಿದ್ದಾರೆ ಕೂಡಾ. ಗ್ಯಾನ್ 3 ಗೋಲು ಬಾರಿಸಿದ್ದು ಉತ್ತಮ ಲಯದಲ್ಲಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications