ಕುತೂಹಲಕಾರಿ ಕ್ವಾಟರ್ ಫೈನಲ್ ಪಂದ್ಯ
ಜೋಹಾನ್ಸ್ ಬರ್ಗ್, ಜು.2: ಇಂದು ಮಧ್ಯರಾತ್ರಿ 12 ಗಂಟೆಗೆ ಜೊಹಾನ್ಸ್ಬರ್ಗ್ನಲ್ಲಿ ನಡೆಯುವ ಎರಡನೇ ಕ್ವಾರ್ಟರ್ಫೈನಲ್ನಲ್ಲಿ ಉರುಗ್ವೆ ಹಾಗೂ ಘಾನಾ ತಂಡಗಳು ಪರಸ್ಪರ ಎದುರಿಸಲಿವೆ. ನಿರ್ರಿಕ್ಷೆಗೂ ಮೀರಿದ ಪ್ರದರ್ಶನ ನೀಡಿರುವ ಎರಡೂ ತಂಡಗಳು ಮುಂದಿನ ಹಂತ ತಲುಪಿದರೆ ಹೊಸ ಇತಿಹಾಸ ನಿರ್ಮಿಸಿದ್ದಂತೆ.
ಫಲಿತಾಂಶ ನಿರೀಕ್ಷೆ: ಉರುಗ್ವೆ ಹಾಗೂ ಘಾನಾ ತಂಡಗಳ ಆಕ್ರಮಣಕಾರಿ ಆಟದ ಪರಿಚಯವಿದ್ದರೂ, ಮಹತ್ವದ ಪಂದ್ಯದಲ್ಲಿ ರಕ್ಷಣಾ ತಂತ್ರವನ್ನು ಹೆಣೆಯಲಾಗಿದೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಈ ಪಂದ್ಯದಲ್ಲಿ ಉತ್ತಮ ಡಿಫೆಂಡ್ ಮಾಡುವ ತಂಡಕ್ಕೆ ಜಯ ನಿಶ್ಚಿತ.ಮೇಲ್ನೋಟಕ್ಕೆ ಉರುಗ್ವೆ ಡಿಫೆನ್ಸ್ ಉತ್ತಮವಾಗಿದ್ದು, ಪಂದ್ಯವನ್ನು 1-0 ಅಂತರದಿಂದ ಜಯಗಳಿಸಿ ಸುಮಾರು 40 ವರ್ಷಗಳ ನಂತರ ಸೆಮಿಸ್ ಬಾಗಿಲ ಬಳಿಗೆ ಬರುತ್ತದೆ ಎಂದು ಬುಕ್ಕಿಗಳು ಘೋಷಿಸಿದ್ದಾರೆ.
ವಿಶ್ವಕಪ್ ವಿಡಿಯೋಗಳು:
ಕ್ವಾಟರ್ ಫೈನಲ್ಸ್ ಗೆ ಭರ್ಜರಿ ಸಿದ್ಧತೆ
ಇಂಗ್ಲೆಂಡ್ ಗೆ ಗರ್ವಭಂಗ, ಜರ್ಮನಿಗೆ ವಿಜಯೋತ್ಸವ
ಚಿಲಿಯನ್ನು ಹೊಸಕಿದ ಸಾಂಬಾ ಬಾಯ್ಸ್
ಲ್ಯಾಂಪರ್ಡ್ ಕ್ಷಮೆ ಕೋರಿದ ಫೀಫಾ
ಕ್ವಾಟರ್ ಫೈನಲ್ ಗೂ ಮುನ್ನ: ಆಡಿದ ನಾಲ್ಕುಪಂದ್ಯಗಳಲ್ಲಿ ಉರುಗ್ವೆ ಮೂರರಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಘಾನಾ ಎರಡು ಪಂದ್ಯಗಳನ್ನು ಗೆದ್ದು, ಒಂದು ಡ್ರಾಸಾಧಿಸಿ, ಮತ್ತೊಂದರಲ್ಲಿ ಸೋಲುಂಡಿದೆ.
ಪ್ರಮುಖ ಆಟಗಾರರು: ಸ್ಟ್ರೈಕರ್ ಲೂಯಿಸ್ ಸೊರೆಜ್ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದು, ಈಗಾಗಲೇ 4ಪಂದ್ಯದಲ್ಲಿ 3 ಗೋಲು ಹೊಡೆದು ಗೋಲು ಗಳಿಕೆಯವರ ಪಟ್ಟಿಯಲ್ಲಿಯೂ ಪೈಪೋಟಿ ನೀಡುತ್ತಿದ್ದಾರೆ. ಉಳಿದಂತೆ ಫೊರ್ಲಾನೊ ಉತ್ತಮ ಲಯದಲ್ಲಿದ್ದಾರೆ.
ಉರುಗ್ವೆ ರಣತಂತ್ರ: (4-4-2) ಮಾದರಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.ಫೊರ್ಲೊನೊ, ಸೊರೆಜ್ ಗೆ ಕವಾನಿ, ಫರ್ನಾಂಡೆಜ್ ಸಾಥ್ ನೀಡಲಿದ್ದು, ಗೊನ್ಜಾಲಿಸ್, ಪೆರೆರಾ ಮಿಡ್ ಫೀಲ್ಡ್ ನೋಡಿಕೊಳ್ಳಲಿದ್ದಾರೆ. ಲೂಗಾನೊ, ಕಾಕೆರೆಸ್, ವಿಕ್ಟೊರಿನೋ ಮೇಲೆ ಹೆಚ್ಚಿನ ಹೊರೆ ಬೀಳಲಿದ್ದು, ರಕ್ಷಣೆ ಸಮರ್ಪಕವಾಗಿದ್ದರೆ ಜಯ ಖಂಡಿತ.
ಘಾನಾ ರಣತಂತ್ರ: ಮೆನ್ಸಾ ಪಡೆಯ ಡಿಫೆಂಡರ್ ಗಳೇ ತಂಡದ ನ್ಯೂನತೆ ಎನ್ನಬಹುದು. ಉರುಗ್ವೆಯಂತೆ ಘಾನಾ ಕೂಡಾ (4-4-2) ಮಾದರಿಯಲ್ಲೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಘಾನಾ ಗೆಲ್ಲಬೇಕಾದರೆ ಉತ್ತಮ ರಕ್ಷಣಾ ತಂತ್ರ ಹಾಗೂ ತಾಳ್ಮೆ ಅಗತ್ಯವಿದೆ.
ಕೆವಿನ್ ಪ್ರಿನ್ಸ್, ಎ.ಗ್ಯಾನ್ ಮೇಲೆ ಘಾನಾ ಹೆಚ್ಚು ಅವಲಂಬಿತವಾಗಿದೆ. ಈ ಇಬ್ಬರೂ ಆಟಗಾರರು ಕಷ್ಟದ ಪರಿಸ್ಥಿತಿಯಲ್ಲಿ ತಂಡದ ಕೈ ಹಿಡಿದು ಮುನ್ನೆಡೆಸಿದ್ದಾರೆ ಕೂಡಾ. ಗ್ಯಾನ್ 3 ಗೋಲು ಬಾರಿಸಿದ್ದು ಉತ್ತಮ ಲಯದಲ್ಲಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications