ಶ್ರೀಶ್ರೀ ರವಿಶಂಕರ ಭೂಗಳ್ಳ :ಎನ್ಆರ್ಐ
ಬೆಂಗಳೂರು,
ಜು. 1 : ನಗರದ ಕನಕಪುರ ರಸ್ತೆಯಲ್ಲಿದ್ದ ತಮಗೆ ಸೇರಿರುವ 15 ಎಕರೆ ಜಮೀನನ್ನು ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥ ಶ್ರೀಶ್ರೀ ರವಿಶಂಕರ ಗುರೂಜಿ ಅವರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಪಿ ಪಾಲ್ ಎನ್ನುವವರು ಆರೋಪಿಸಿದ್ದಾರೆ. id="toptextpromo">ಆರ್ಟ್
ಆಫ್ ಲಿವಿಂಗ್ ಆಶ್ರಮಕ್ಕೆ ಅನಾಮೆಧೇಯ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಒಡ್ಡುತ್ತಿರುವುದರಿಂದ ರವಿಶಂಕರ ಅವರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪಿ ಪಾಲ್ ಎನ್ನುವವರು ಶ್ರೀಗಳ ವಿರುದ್ಧ ಅಕ್ರಮ ಜಮೀನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆಶ್ರಮದ
ಪಕ್ಕದಲ್ಲಿರುವ ಮೋಹನ್ ಎಂಬುವವರ ಮಾಲೀಕತ್ವದ 15 ಎಕರೆ ಜಮೀನನ್ನು 12 ವರ್ಷಗಳ ಹಿಂದೆಯೇ ಆಶ್ರಮ ಅಂದಿನ ಮಾರುಕಟ್ಟೆ ಬೆಲೆಗೆ(1.2 ಕೋಟಿ ರುಪಾಯಿ) ಖರೀದಿಸಿದೆ. ಸಂಬಂಧಿಸಿದ ವ್ಯಕ್ತಿ ಖರೀದ ಪತ್ರವನ್ನು ನಮಗೆ ನೀಡಿದ್ದಾರೆ. ಆ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಕಳೆದ ಎರಡು ವರ್ಷಗಳ ಹಿಂದೆ ಈ ವಿಷಯವನ್ನು ರವಿಶಂಕರ ಅವರ ಗಮನಕ್ಕೆ ತಂದಿದ್ದೆ. ಅವರು, ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮಾತನಾಡಿದ್ದರು. ಆದರೆ, ಇದೀಗ ಅವರು ಜಮೀನಿನ ವಿಷಯವನ್ನು ಮರೆತುಬಿಡು ಎಂದು ಹೇಳುತ್ತಿದ್ದಾರೆ ಎಂದು ಪಿ ಪಾಲ್ ಆರೋಪಿಸಿದ್ದಾರೆ.











Click it and Unblock the Notifications