ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀಶ್ರೀ ರವಿಶಂಕರ ಭೂಗಳ್ಳ :ಎನ್ಆರ್ಐ
ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಅನಾಮೆಧೇಯ ವ್ಯಕ್ತಿಗಳು ಕರೆ ಮಾಡಿ ಬೆದರಿಕೆ ಒಡ್ಡುತ್ತಿರುವುದರಿಂದ ರವಿಶಂಕರ ಅವರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ವಿರುದ್ಧ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪಿ ಪಾಲ್ ಎನ್ನುವವರು ಶ್ರೀಗಳ ವಿರುದ್ಧ ಅಕ್ರಮ ಜಮೀನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಶ್ರಮದ ಪಕ್ಕದಲ್ಲಿರುವ ಮೋಹನ್ ಎಂಬುವವರ ಮಾಲೀಕತ್ವದ 15 ಎಕರೆ ಜಮೀನನ್ನು 12 ವರ್ಷಗಳ ಹಿಂದೆಯೇ ಆಶ್ರಮ ಅಂದಿನ ಮಾರುಕಟ್ಟೆ ಬೆಲೆಗೆ(1.2 ಕೋಟಿ ರುಪಾಯಿ) ಖರೀದಿಸಿದೆ. ಸಂಬಂಧಿಸಿದ ವ್ಯಕ್ತಿ ಖರೀದ ಪತ್ರವನ್ನು ನಮಗೆ ನೀಡಿದ್ದಾರೆ. ಆ ಎಲ್ಲ ದಾಖಲೆಗಳು ನಮ್ಮ ಬಳಿ ಇವೆ. ಕಳೆದ ಎರಡು ವರ್ಷಗಳ ಹಿಂದೆ ಈ ವಿಷಯವನ್ನು ರವಿಶಂಕರ ಅವರ ಗಮನಕ್ಕೆ ತಂದಿದ್ದೆ. ಅವರು, ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮಾತನಾಡಿದ್ದರು. ಆದರೆ, ಇದೀಗ ಅವರು ಜಮೀನಿನ ವಿಷಯವನ್ನು ಮರೆತುಬಿಡು ಎಂದು ಹೇಳುತ್ತಿದ್ದಾರೆ ಎಂದು ಪಿ ಪಾಲ್ ಆರೋಪಿಸಿದ್ದಾರೆ.
Comments
ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಅಗ್ನಿ ಶ್ರೀಧರ್ ಕನಕಪುರ ರಸ್ತೆ art of living sri ravishankar land mafia nri
Story first published: Thursday, July 1, 2010, 16:07 [IST]