ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ಉಪಲೋಕಾಯುಕ್ತರ ನೇಮಕಕ್ಕೆ ಸಿದ್ಧತೆ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಜೂ. 30 : ಲೋಕಾಯುಕ್ತರ ರಾಜೀನಾಮೆಯಿಂದ ತೀವ್ರ ಮುಖಭಂಗ ಅನುಭವಿಸಿರುವ ರಾಜ್ಯ ಸರಕಾರ ತುರ್ತಾಗಿ ಉಪಲೋಕಾಯುಕ್ತರನ್ನು ನೇಮಕ ಮಾಡಲು ತೀರ್ಮಾನಿಸಿದೆ.

ಉಪಲೋಕಾಯಕ್ತರಾಗಿದ್ದ ಪತ್ರಿ ಬಸವನಗೌಡ ಅವರು ನಿವೃತ್ತರಾಗಿ ಆರು ತಿಂಗಳು ಕಳೆದಿವೆ. ಲೋಕಾಯುಕ್ತ ಸಂತೋಷ ಹೆಗ್ಡೆ ರಾಜೀನಾಮೆ ನೀಡುತ್ತಿದ್ದಂತೆಯೇ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಉಪಲೋಕಾಯುಕ್ತರಾಗಿ ವೆಂಕಟೇಶಮೂರ್ತಿ, ಬನ್ನೂರುಮಠ ಸೇರಿದಂತೆ 5 ನಿವೃತ್ತ ನ್ಯಾಯಾಧೀಶರ ಹೆಸರು ಸರಕಾರದ ಪರಿಶೀಲನೆಯಲ್ಲಿದೆ.

ಈ ಮೊದಲು ಉಪಲೋಕಾಯುಕ್ತರಾಗಿ ಬನ್ನೂರುಮಠ ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿತ್ತಾದರೂ, ಇದೀಗ ಅವರ ಹೆಸರು ಲೋಕಾಯುಕ್ತರ ಹುದ್ದೆಗೆ ಕೇಳಿ ಬರುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X