ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯ ಕೊಲೆಗೈದು, ಊರಿಗೆ ಊರೇ ಪರಾರಿ

By Mahesh
|
Google Oneindia Kannada News

Crime beat , Tumkur
ಹುಳಿಯಾರು, ಜೂ.29: ಇಲ್ಲಿಗೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ಡಾಬಾ ಹೊನ್ನಮ್ಮ(45) ಎಂಬ ಮಹಿಳೆಯನ್ನು ನಡುರಸ್ತೆಯಲ್ಲಿ ಕಲ್ಲು ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಗೈದ ನಂತರ ಊರಿಗೇ ಊರೇ ಖಾಲಿಯಾಗಿದೆ.

ಕೊಲೆಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಕಲ್ಲಿನಿಂದ ಹೊಡೆದ ಊರಿನ ಅಷ್ಟೂ ಜನ ನಾಪತ್ತೆಯಾಗಿದ್ದು, ಪ್ರಕರಣಕ್ಕೆ ರಾಜಕೀಯ ಲೇಪ ಅಂಟಿಕೊಂಡಿದೆ. ಮೃತ ಹೊನ್ನಮ್ಮ ಬಿಜೆಪಿ ಕಾರ್ಯಕರ್ತೆ ಆಗಿದ್ದು, ವೈಯಕ್ತಿಕ ದ್ವೇಷದ ಕಾರಣ ಇದು ವ್ಯವಸ್ಥಿತವಾಗಿ ನಡೆದ ಕೊಲೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಊರಿನ ಚರಂಡಿ ರಿಪೇರಿ, ಡೈನೇಜ್ ಸ್ವಚ್ಛಗೊಳಿಸಲು ಬಂದವರ ಮೇಲೆ ಹೊನ್ನಮ್ಮ ಎಗರಾಡಿ, ರಂಪ ರಾಮಾಯಣ ಮಾಡಿದ್ದಳು. ಇದರಿಂದ ಬೇಸತ್ತ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೊನ್ನಮ್ಮನ ವಿರುದ್ಧ ದೂರು ನೀಡಿದ್ದರು.

ಆ ಘಟನೆ ನಂತರ ಐದಾರು ದಿನಗಳ ಕಲ ನಾಪತ್ತೆಯಾಗಿದ್ದ ಹೊನ್ನಮ್ಮ ಜಾಮೀನು ಪಡೆದು ಊರಿಗೆ ಬಂದಿದ್ದರು. ಹೊನ್ನಮ್ಮನನ್ನು ನೋಡಿದ ಗ್ರಾಮಸ್ಥರು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎಸ್ ಐ ರವಿಪ್ರಸಾದ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X