ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಭ್ರಷ್ಟಾಚಾರವೇ ಇಲ್ಲ : ರಾಮಚಂದ್ರೇಗೌಡ!

By Prasad
|
Google Oneindia Kannada News

Ramachandre Gowda
ಬೆಂಗಳೂರು/ಉಡುಪಿ : ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮತ್ತು ಬಿಜೆಪಿ ಸರಕಾರದ ನಡುವಿನ ಗುದ್ದಾಟ ದಿನೇದಿನೇ ತಾರಕಕ್ಕೇರುತ್ತಿದೆ. ಇಬ್ಬರ ನಡುವಿನ ಕಂದಕ ಇನ್ನಷ್ಟು ಜಾಸ್ತಿಯಾಗುತ್ತಾ ಸಾಗುತ್ತಿದೆ.

ಬಿಜೆಪಿ ಸಾಧನಾ ಸಮಾವೇಶಕ್ಕೆ ಎರಡು ದಿನ ಮೊದಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಹೆಗ್ಡೆ ಜೊತೆಗಿನ ಬಾಂಧವ್ಯ ಚೆನ್ನಾಗೇ ಇದೆ, ಅವರ ಎಲ್ಲ ಬೇಡಿಕೆ ಈಡೇರಿಸಿದ್ದೇವೆ ಎಂದು ಮಾಧ್ಯಮ ಸಂವಾದದಲ್ಲಿ ಹೇಳಿದ ನಂತರ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಅವರು ರಾಜ್ಯದಲ್ಲಿ ಭ್ರಷ್ಟಾಚಾರವೇ ಇಲ್ಲ ಎಂದು ಹೇಳಿ ದಂಗುಬಡಿಸಿದ್ದಾರೆ.

"ರಾಜ್ಯದಲ್ಲಿ ಭ್ರಷ್ಟಾಚಾರವೇ ಇಲ್ಲ. ವೇರ್ ಈಸ್ ಕರಪ್ಶನ್? ಭ್ರಷ್ಟಾಚಾರ ಇದೆ ಅಂತ ಕಂಪ್ಲೇಂಟ್ ಬರಲಿ, ವಿ ವಿಲ್ ಟೇಕ್ ಆಕ್ಷನ್. ಪ್ರಜಾಪ್ರಭುತ್ವದಲ್ಲಿ ಸರಕಾರವೇ ಸುಪ್ರೀಂ. ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಹೇಗೆ ಸಾಧ್ಯ? ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲು ಸಾಧ್ಯವೇ ಇಲ್ಲ" ಎಂದು ರಾಮಚಂದ್ರೇಗೌಡ ಅವರು ಎಂದಿನಂತೆ ಕನ್ನಡ, ಇಂಗ್ಲಿಷ್ ಮಿಶ್ರಿತ ತಮ್ಮದೇ ಧಾಟಿಯಲ್ಲಿ ಗುಡುಗಿದ್ದಾರೆ.

ಸಂತೋಷ್ ಹೆಗ್ಡೆ ಪ್ರತಿವಾದ : ಸರಕಾರದ ನಿರ್ಲಕ್ಷ್ಯತನ ಮತ್ತು ಕಾರ್ಯವೈಖರಿಯಿಂದ ಬೇಸತ್ತು ಹದಿನಾಲ್ಕು ತಿಂಗಳು ಮೊದಲೇ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಬಿಸಾಕಿರುವ ಸಂತೋಷ್ ಹೆಗ್ಡೆ ಸರಕಾರದ ಅನಿಸಿಕೆಗಳ ವಿರುದ್ಧ ಪ್ರತಿವಾದ ಮಂಡಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿ ಸರಕಾರಕ್ಕೆ ನಾನಿರುವುದು ಬೇಕಾಗಿರಲಿಲ್ಲ. ನನ್ನ ರಾಜೀನಾಮೆ ಬೇಕಿತ್ತು ಎಂಬುದು ಸ್ಪಷ್ಟ. ಬಿಜೆಪಿ ಸಾಧನಾ ಸಮಾವೇಶ ಕೆಟ್ಟುಹೋಗಲೆಂದೇ ನಾನು ರಾಜೀನಾಮೆ ನೀಡಿದೆ ಅಂತ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ಹೇಳುತ್ತಿದ್ದಾರೆ. ಇದು ಸುಳ್ಳು ಎಂದು ಹೇಳಿದ್ದಾರೆ.

ನನ್ನ ರಾಜೀನಾಮೆಯ ಹಿಂದೆ ಪಿತೂರಿಯಿದೆ, ವಿರೋಧ ಪಕ್ಷಗಳ ಬೆಂಬಲವಿದೆ ಎಂದು ಆರೋಪಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿರುವ ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸರಕಾರ ಮುಂದೆ ಇಟ್ಟಿದ್ದು ಮೂರೇ ಮೂರು ಬೇಡಿಕೆಗಳು. ಸರಕಾರ ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X