ಕುಂದಾಪುರ, ಕಾರ್ಕಳದಲ್ಲಿ ಲಘು ಭೂಕಂಪನ
ಉಡುಪಿ,
ಜೂ.4: ಕುಂದಾಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ ಭೂಮಿ ಲಘುವಾಗಿ ಕಂಪಿಸಿದ ಅನುಭವವಾಗಿದೆ. ಆದರೆ ಈ ಕಂಪನದಿಂದ ಯಾವುದೇ ಪ್ರಾಣ ಹಾಗೂ ಆಸ್ತಿ ಹಾನಿ ಸಂಭವಿಸಿಲ್ಲ. ಭೂಮಿ ಕಂಪಿಸಿದ ಗ್ರಾಮಗಳಲ್ಲಿನ ಕೆಲವು ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. id="toptextpromo">ಕೆಲವು
ಕಡೆ ದ್ವಿಚಕ್ರ ವಾಹನಗಳು ನೆಲಕ್ಕೆ ಉರುವಷ್ಟು ಕಂಪನದ ತೀವ್ರತೆ ಇತ್ತು. ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ನೀಲಿಕಾಟ್, ಸಿದ್ಧಾಪುರ, ಹಳ್ಳಿಹೊಳೆ, ಹಲಸಂದು, ಮುದ್ರಾಡಿ, ಮಡಾಮಕ್ಕಿ,ಅಜೆಕಾರು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಸೀತಾನದಿ ಪ್ರದೇಶದಲ್ಲಿ ರಸ್ತೆಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ನೆಲಕ್ಕೆ ಉರುಳಿ ಬದ್ದಿವೆ. id='are-slot-1' class='oiad oi-axt oiadv'> id='top-searched-articles'>ಸುಮಾರು
ಮಧ್ಯಾಹ್ನ 12 ಗಂಟೆ ಸಮಯದಲ್ಲಿಶಾಲೆಯಲ್ಲಿನ ಪೀಠೋಪಕರಣಗಳು ಕ್ಷಣಕಾಲ ಕಂಪಿಸಿದ್ದಾಗಿ ಗುಡಿಬೆಟ್ಟು ಪ್ರಾಥಮಿಕ ಶಾಲೆಯ ಶಿಕ್ಷಕರಾದ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ. ಕಂಪನದ ಅನುಭವ ಆಗುತ್ತಿದ್ದಂತೆ ಮನೆ, ಅಂಗಡಿ, ಹೋಟೆಲ್ ಗಳಲ್ಲಿ ಇದ್ದವರು ಬೆಚ್ಚಿ ಹೊರಗೆ ಓಡಿ ಬಂದಿದ್ದರು.











Click it and Unblock the Notifications