ನಾನು ಮಾವೋವಾದಿಗಳ ಪರ; ಬೇಕಿದ್ದರೆ ಜೈಲಿಗೆ ಹಾಕಿ

ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆ ಸಮಿತಿ ಆಯೋಜಿಸಿದ್ದ 'ಜನರ ಮೇಲೆ ಯುದ್ಧ' ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಗಾಂಧಿ ಮಾರ್ಗ ಸೂಕ್ತವಲ್ಲ. ಆದರೆ ದಂತೆವಾಡದಲ್ಲಿ 76 ಮಂದಿ ಸಿಆರ್ ಪಿಎಫ್ ಯೋಧರನ್ನು ಕೊಂದು ಹಾಕಿದ್ದನ್ನು ನಾನು ಸಮರ್ಥಿಸುವುದಿಲ್ಲ. ಹಿಂಸಾಚಾರಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಪ್ರಾಕೃತಿಕ ಸಂಪನ್ಮೂಲಗಳಾದ ನೀರು, ಖನಿಜ, ಅರಣ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಆದಿವಾಸಿಗಳು ಮತ್ತು ಹಣಬಲವುಳ್ಳವರ ನಡುವಿನ ಸಂಘರ್ಷವೆ ನಕ್ಸಲ್ ಹಿಂಸಾಚಾರ ಎಂದು ಅರುಂಧತಿ ರಾಯ್ ಬಣ್ಣಿಸಿದ್ದಾರೆ. ಶೇ.99 ಮಂದಿ ಆದಿವಾಸಿಗಳು ಮಾವೋವಾದಿಗಳಲ್ಲ. ಶೇ.99 ಮಾವೋವಾದಿಗಳು ಆದಿವಾಸಿಗಳಲ್ಲ ಎಂದಿದ್ದಾರೆ.











Click it and Unblock the Notifications