ಕೊಹಿನೂರು ವಜ್ರ ವಾಪಸ್ ಮಾಡಿ
ಲಂಡನ್, ಜೂ.2: ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ದೇಶದಿಂದ ಹೊರಕ್ಕೊಯ್ಯಲ್ಪಟ್ಟ ಅಪೂರ್ವ ಕೊಹಿನೂರು ವಜ್ರ, ಸುಲ್ತಾನ್ಗಂಜ್ ಬುದ್ಧ ಸೇರಿದಂತೆ ಬೆಲೆ ಕಟ್ಟಲಾಗದಂತಹ ಅಮೂಲ್ಯ ವಸ್ತುಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಭಾರತೀಯ ಪುರಾತತ್ವ ಇಲಾಖೆ(ಎಎಸ್ಐ)ಅಂತಾರಾಷ್ಟ್ರೀಯ ಜಾಲವೊಂದರ ಮೂಲಕ ಪ್ರಯತ್ನ ಆರಂಭಿಸಲಾಗಿದೆ.
ವಿದೇಶಗಳಲ್ಲಿರುವ ಭಾರತೀಯ ಸಂಪತ್ತಿನ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದ್ದು, ಇವುಗಳನ್ನು ಮರಳಿ ಪಡೆಯುವುದಕ್ಕಾಗಿ ರಾಜತಾಂತ್ರಿಕ ಹಾಗೂ ಕಾನೂನು ಅಭಿಯಾನವೊಂದನ್ನು ನಡೆಸಬೇಕಾದ ಅಗತ್ಯವನ್ನು ಎಎಸ್ಐಯ ಮಹಾನಿರ್ದೇಶಕ ಗೌತಮ್ ಸೇನ್ಗುಪ್ತ ಒತ್ತಿ ಹೇಳಿದ್ದಾರೆ.
ವಿಶೇಷವಾಗಿ ಬ್ರಿಟಿಷ್ ಮ್ಯೂಸಿಯಂ, ದ ರಾಯಲ್ ಕಲೆಕ್ಷನ್, ಬರ್ಮಿಂಗ್ಹಾಮ್ ಮ್ಯೂಸಿಯಂ, ಆರ್ಟ್ ಗ್ಯಾಲರಿಗಳಲ್ಲಿ ಭಾರತದ ಅನೇಕ ಅಮೂಲ್ಯ ವಸ್ತುಗಳು ಇವೆ. ಕಳೆದ ಹಲವು ವರ್ಷಗಳಿಂದ ಭಾರತ ನಡೆಸುತ್ತಿರುವ ಪ್ರಯತ್ನ ನಿರೀಕ್ಷಿತ ಫಲ ನೀಡದ ಕಾರಣ ಇದೀಗ ಯುನೆಸ್ಕೋದ ಜೊತೆ ಕೈಜೋಡಿಸಿ ಈ ನಿಟ್ಟಿನಲ್ಲಿ ಶ್ರಮಿಸಲು ಎಎಸ್ಐ ನಿರ್ಧರಿಸಿದೆ.













Click it and Unblock the Notifications