Get Updates
Get notified of breaking news, exclusive insights, and must-see stories!

ದಾಳಿಕೋರ ಸತ್ಸಂಗಕ್ಕೆ ಸೇರಲಿ: ಶ್ರೀ ಶ್ರೀ

Sri Sri Ravishankar
ಬೆಂಗಳೂರು, ಮೆ. 31: ತಮ್ಮ ಮೇಲೆ ಗುಂಡು ಹಾರಿಸಿದ ದಾಳಿಕೋರನನ್ನು ಸತ್ಸಂಗಕ್ಕೆ ಸೇರುವಂತೆ ಶ್ರೀ ಶ್ರೀ ರವಿಶಂಕರ್ ಅವರು ಆಹ್ವಾನವಿತ್ತಿದ್ದಾರೆ. ಇಂದು ಕನಕಪುರದ ಆಶ್ರಮದಲ್ಲಿ ಸುದ್ದಿಗೋಷ್ಠಿ ನಡೆಸಿ, ದಾಳಿಕೋರ ಆಶ್ರಮದಲ್ಲಿ ಬಂದು ಉಳಿದರೆ, ಆತನ ಮನ ಪರಿವರ್ತನೆಯಾಗುವುದು ಖಂಡಿತ. ನಾನಂತೂ ಆತನನ್ನು ಕ್ಷಮಿಸಿದ್ದೇನೆ. ಎಂದು ಗುರೂಜಿ ಹೇಳಿದರು.

ಆಶ್ರಮದಲ್ಲಿರುವ ವಿದೇಶಿ ಭಕ್ತರಿಗೆ ರಕ್ಷಣೆ ಬೇಕಿದೆ. ಗುಂಡು ಹಾರಿಸಿದಾಗ ನಾನು ಕಾರು ಹತ್ತುತ್ತಿದೆ. ಆದರೆ ಅದು ಗುಂಡು ಹಾರಿಸಿದ ಶಬ್ದ ಎನಿಸಲಿಲ್ಲ. ಯಾವುದೋ ಟೈರ್ ಸ್ಫೋಟ ಎಂದು ಭಾವಿಸಿ ಮುಂದಕ್ಕೆ ಸಾಗಿದೆವು.ಆಶ್ರಮದಲ್ಲಿ ಆಂತರಿಕ ಜಗಳವಿಲ್ಲ. ನನಗೆ ಹೆಚ್ಚಿನ ಭದ್ರತೆ ಅಗತ್ಯವಿಲ್ಲ. ಯಾರ ಮೇಲೂ ಶಂಕೆಯಿಲ್ಲ ಎಂದು ರವಿಶಂಕರ್ ಹೇಳಿದ್ದಾರೆ.

ವಿಡಿಯೋಗಳು:
ಇಂಥ ದಾಳಿಗಳಿಗೆ ಅಂಜುವವನು ನಾನಲ್ಲ:ಶ್ರೀಶ್ರೀ
ಗುಂಡು ಹಾರಿಸಿದವನನ್ನು ನಾನು ಕ್ಷಮಿಸಿದ್ದೇನೆ: ಶ್ರೀಶ್ರೀ

ಗುಂಡೇಟು ಬಿದ್ದಿದ್ದ ಗುರೂಜಿ ಭಕ್ತ ವಿನಯ್ ಅವರು ಮಾತನಾಡಿ, ಗುರೂಜಿ ಅವರ ಮೇಲಿನ ದಾಳಿ ಪ್ರಕರಣವನ್ನು ಜಮೀನು ವಿವಾದಕ್ಕಾಗಿ ನಡೆದ ದಾಳಿ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ ಆ ರೀತಿಯ ಯಾವುದೇ ಭೂ ವಿವಾದದಲ್ಲಿ ನಮ್ಮ ಕುಟುಂಬ ತೊಡಗಿಲ್ಲ. ನಾವು ಬೆಳಗಾವಿಯಿಂದ ಸತ್ಸಂಗಕ್ಕಾಗಿ ಬಂದವರು ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+