ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಸಿಕ್ಕಿ ಬಿದ್ದ ಭ್ರಷ್ಟ ಪೊಲೀಸ್!

By Mrutyunjaya Kalmat
|
Google Oneindia Kannada News

Karnataka Police logo
ಮೈಸೂರು, ಮೇ. 27 : ಖಾಸಗಿ ಕಂಪನಿಯಿಂದ ಲಂಚ ಸ್ವೀಕರಿಸುತ್ತಿದ್ದ ಟ್ರಾಫಿಕ್ ಇನ್ಸ್ ಪೆಕ್ಟರೊಬ್ಬ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮೈಸೂರಿನ ಬುಧವಾರ ನಡೆದಿದೆ.

ದೇವರಾಜ್ ಪೊಲೀಸ್ ಠಾಣೆಯ ಟ್ರಾಫಿಕ್ ಇನ್ಸೆ ಪೆಕ್ಟರ್ ರಾಮಚಂದ್ರ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಪೊಲೀಸ್ ಅಧಿಕಾರಿ. ಪ್ಲಾನೆಟ್ ಎಕ್ಸ್ ಎಂಬ ಖಾಸಗಿ ಕಂಪನಿಯ ಕಾನೂನು ಸಲಹೆಗಾರ ಪ್ರಕಾಶ್ ಶೆಣೈ ಎಂಬುವವರಿಂದ 50 ಸಾವಿರ ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಬಲೆಗೆ ರಾಮಚಂದ್ರ ಸಿಕ್ಕಿಬಿದ್ದಾರೆ.

ಇದಕ್ಕೂ ಮೊದಲು ಇನ್ಸ್ ಪೆಕ್ಟರ್ ರಾಮಚಂದ್ರ, ಪ್ಲಾನೆಟ್ ಎಕ್ಸ್ ಕಂಪನಿ ಮಾಲೀಕ ಪ್ರಶಾಂತ ಎಂಬುವವರಿಗೆ ಫೋನಾಯಿಸಿ ನಿಮ್ಮ ಜೊತೆಗೆ ಖಾಸಗಿಯಾಗಿ ಮಾತನಾಡಿಬೇಕಿದೆ ಎಂದು ಹೇಳಿದ್ದಾರೆ. ಅದಕ್ಕೆ ಸಮ್ಮತಿಸಿದ ಪ್ರಶಾಂತ, ತಮ್ಮ ಕಂಪನಿಯ ಕಾನೂನು ಸಲಹೆಗಾರ ಪ್ರಕಾಶ್ ಶೆಣೈ ಎಂಬುವವರನ್ನು ಇನ್ಸ್ ಪೆಕ್ಟರ್ ಮನೆಗೆ ಕಳುಹಿಸಿದ್ದಾರೆ. ಆಗ ಪೊಲೀಸ್ ಅಧಿಕಾರಿ 1 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದಾನೆ.

ಚೌಕಾಶಿಯ ನಂತರ 50 ಸಾವಿರ ರುಪಾಯಿ ನೀಡಲು ಕಾನೂನು ಸಲಹೆಗಾರ ಪ್ರಕಾಶ್ ಮುಂದಾದಾಗ, ಬೆಂಗಳೂರು ಲೋಕಾಯುಕ್ತ ಎಸ್ಪಿ ಮಧುಕರ್ ಶೆಟ್ಟಿ ದಿಢೀರ್ ದಾಳಿ ನಡೆಸಿ ಟ್ರಾಫಿಕ್ ಪೊಲೀಸ್ ನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿ ರಾಮಚಂದ್ರನನ್ನು ಬಂಧಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X