ಮೈಸೂರಿನಲ್ಲಿ ಸಿಕ್ಕಿ ಬಿದ್ದ ಭ್ರಷ್ಟ ಪೊಲೀಸ್!
ದೇವರಾಜ್ ಪೊಲೀಸ್ ಠಾಣೆಯ ಟ್ರಾಫಿಕ್ ಇನ್ಸೆ ಪೆಕ್ಟರ್ ರಾಮಚಂದ್ರ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಪೊಲೀಸ್ ಅಧಿಕಾರಿ. ಪ್ಲಾನೆಟ್ ಎಕ್ಸ್ ಎಂಬ ಖಾಸಗಿ ಕಂಪನಿಯ ಕಾನೂನು ಸಲಹೆಗಾರ ಪ್ರಕಾಶ್ ಶೆಣೈ ಎಂಬುವವರಿಂದ 50 ಸಾವಿರ ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಬಲೆಗೆ ರಾಮಚಂದ್ರ ಸಿಕ್ಕಿಬಿದ್ದಾರೆ.
ಇದಕ್ಕೂ ಮೊದಲು ಇನ್ಸ್ ಪೆಕ್ಟರ್ ರಾಮಚಂದ್ರ, ಪ್ಲಾನೆಟ್ ಎಕ್ಸ್ ಕಂಪನಿ ಮಾಲೀಕ ಪ್ರಶಾಂತ ಎಂಬುವವರಿಗೆ ಫೋನಾಯಿಸಿ ನಿಮ್ಮ ಜೊತೆಗೆ ಖಾಸಗಿಯಾಗಿ ಮಾತನಾಡಿಬೇಕಿದೆ ಎಂದು ಹೇಳಿದ್ದಾರೆ. ಅದಕ್ಕೆ ಸಮ್ಮತಿಸಿದ ಪ್ರಶಾಂತ, ತಮ್ಮ ಕಂಪನಿಯ ಕಾನೂನು ಸಲಹೆಗಾರ ಪ್ರಕಾಶ್ ಶೆಣೈ ಎಂಬುವವರನ್ನು ಇನ್ಸ್ ಪೆಕ್ಟರ್ ಮನೆಗೆ ಕಳುಹಿಸಿದ್ದಾರೆ. ಆಗ ಪೊಲೀಸ್ ಅಧಿಕಾರಿ 1 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದಾನೆ.
ಚೌಕಾಶಿಯ ನಂತರ 50 ಸಾವಿರ ರುಪಾಯಿ ನೀಡಲು ಕಾನೂನು ಸಲಹೆಗಾರ ಪ್ರಕಾಶ್ ಮುಂದಾದಾಗ, ಬೆಂಗಳೂರು ಲೋಕಾಯುಕ್ತ ಎಸ್ಪಿ ಮಧುಕರ್ ಶೆಟ್ಟಿ ದಿಢೀರ್ ದಾಳಿ ನಡೆಸಿ ಟ್ರಾಫಿಕ್ ಪೊಲೀಸ್ ನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿ ರಾಮಚಂದ್ರನನ್ನು ಬಂಧಿಸಲಾಗಿದೆ.