ಉದ್ಯೋಗಾರ್ಥಿಗಳ ಮುಖಕ್ಕೆ ಹಿಮ್ಸ್ ಮಂಕುಬೂದಿ
ಬೆಂಗಳೂರಿನಿಂದ ನರ್ಸ್ ಹುದ್ದೆಗೆ ಸಂದರ್ಶನಕ್ಕೆ ಬಂದ ಮಹಿಳೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೂ ಉತ್ತರ ಸರಿಯಿಲ್ಲವೆಂದು ಸತಾಯಿಸಿದ್ದಾರೆ. ಕೇಳಿದ ಐದು ಪ್ರಶ್ನೆಗಳಿಗೆ ಸರಿಯುತ್ತರ ನೀಡಿದರೂ ಉತ್ತರ ಸರಿಯಾಗಿಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಅರಸಿಕೆರೆಯಿಂದ ಬಂದ ಯುವತಿಗೂ ಇದೇ ಅನುಭವವಾಗಿದೆ. ಹುದ್ದೆಯನ್ನು ಬೇಕಾದವರಿಗೆ ಮೊದಲೇ ನೀಡಿ ಕಾಟಾಚಾರಕ್ಕೆ ಸಂದರ್ಶನ ಕರೆದು ಉದ್ಯೋಗಾರ್ಥಿಗಳಿಗೆ ಮಂಕುಬೂದಿ ಎರಚುತ್ತಿದ್ದಾರೆ ಎಂದು ನರ್ಸ್ ಹುದ್ದೆಗೆ ಬಂದ ಮಹಿಳೆಯ ಗಂಡ ದಟ್ಸ್ ಕನ್ನಡದೊಡನೆ ಗೋಳು ತೋಡಿಕೊಂಡಿದ್ದಾರೆ.
ಮೇ 11ರಂದು ಕರೆಯಲಾಗಿದ್ದ ಸಂದರ್ಶನದಲ್ಲಿಯೂ ಇದೇ ರೀತಿ ಸಂಸ್ಥೆ ನಡೆದುಕೊಂಡಿತ್ತು. ನೆಪ ಮಾತ್ರಕ್ಕೆ ಸಂದರ್ಶನ ನಡೆಸಿ ಬೇಕಾಬಿಟ್ಟಿ ಪ್ರಶ್ನೆ ಕೇಳಿ ಕಾಟಾಚಾರಕ್ಕೆ ಪರೀಕ್ಷೆ ನಡೆಸಿದ್ದರು. ಈ ಕುರಿತಾಗಿ ನೊಂದ ಓದುಗರೊಬ್ಬರು ಪತ್ರ ಬರೆದಿದ್ದರು. ಇದರಲ್ಲಿ ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿಯ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಅನೇಕರು ಆರೋಪಿಸಿದ್ದರು. ಈಗ ಮತ್ತೆ ಅದೇ ರೀತಿ ನಡೆದುಕೊಂಡು ವೈದ್ಯಕೀಯ ಸಂಸ್ಥೆ ಉದ್ಯೋಗಾಕಾಂಕ್ಷಿಗಳ ಸಹನೆಯನ್ನು ಪರೀಕ್ಷಿಸುತ್ತಿದೆ.