ಮೇ,24ರ ವರಗೆ ಕಂಬಿ ಹಿಂದೆ ಹಾಲಪ್ಪ
ಬಿಜೆಪಿಯಿಂದ ಹಾಲಪ್ಪ ಅಮಾನತು ?
ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿರುವ ಮಾಜಿ ಸಚಿವ ಹರತಾಳು ಅವರ ಕತೆಯನ್ನು ಮುಗಿಸಲು ಬಿಜೆಪಿ ನಿರ್ಧರಿಸಿದೆ. ಗ್ರಾಮ ಪಂಚಾಯತಿ ಚುನಾವಣೆ ಬಳಿಕ ಅವರನ್ನು ಪಕ್ಷದಿಂದ ಅಮಾನತು ಮಾಡಲು ವರಿಷ್ಠರು ತೀರ್ಮಾನಿಸಿದ್ದಾರೆ.
ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಹಾಲಪ್ಪ ಅವರನ್ನು ಪಕ್ಷದಲ್ಲಿಟ್ಟುಕೊಂಡರೆ ನಷ್ಟವೇ ಹೊರತು ಲಾಭವಂತೂ ಖಂಡಿತಾ ಆಗುವುದಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿ ಚುನಾವಣೆಗಳು ಮುಗಿದ ಬಳಿಕ ಪಕ್ಷದಿಂದ ಅಮಾನತು ಮಾಡಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಮುಂದಾಗಲು ವರಿಷ್ಠರು ಚಿಂತನೆ ನಡೆಸಿದ್ದಾರೆ.
ಈಗಾಗಲೇ
ಸಿಐಡಿ
ವಶದಲ್ಲಿರುವ
ಹಾಲಪ್ಪ
ಅವರನ್ನು
ಪಕ್ಷದಲ್ಲಿರಿಸಿಕೊಂಡರೆ
ಸರಕಾರಕ್ಕೆ
ಕಪ್ಪು
ಚುಕ್ಕೆ
ಕಟ್ಟಿಟ್ಟ
ಬುತ್ತಿ.
ಸಿಎಂ
ಆಪ್ತ
ಎನ್ನಲಾದ
ಹಾಲಪ್ಪ
ಅವರನ್ನು
ಕೆಲ
ತಿಂಗಳು
ಮಟ್ಟಿಗೆ
ಪಕ್ಷದಿಂದ
ಹೊರಗಿಡಲು
ಸ್ವತಃ
ಮುಖ್ಯಮಂತ್ರಿ
ಯಡಿಯೂರಪ್ಪ
ಮತ್ತು
ರಾಜ್ಯಾಧ್ಯಕ್ಷ
ಕೆಎಸ್
ಈಶ್ವರಪ್ಪ
ತೀರ್ಮಾನಿಸಿದ್ದಾರೆ.
ಬೀಸೋ
ದೊಣ್ಣೆಯಿಂದ
ತಪ್ಪಿಸಿಕೊಂಡರೆ
ಸಾವಿರ
ಆಯುಸ್ಸು
ಎನ್ನುವಂತೆ
ಹಾಲಪ್ಪ
ಅವರನ್ನು
ಒಲ್ಲದ
ಮನಸ್ಸಿನಿಂದ
ಅಮಾನತು
ಮಾಡಲು
ಈ
ಇಬ್ಬರೂ
ನಾಯಕರು
ಗ್ರೀನ್
ಸಿಗ್ನಲ್
ನೀಡಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ವಿಡಿಯೋ:
ಹಾಲಪ್ಪ
ಆಸ್ಪತ್ರೆಗೆ
ಹೋದ
ನೋಡ್ರಪ್ಪ
ನ್ಯಾಯಾಲಯದ ಆದೇಶದ ಮೇರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣದಿಂದ ಹಾಲಪ್ಪ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲಪ್ಪ ಅವರು ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳುತ್ತಿದ್ದು ಅವರು ಇನ್ನೆರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ.