ಪ್ರಜಾವಾಣಿ ಕನ್ನಡಪ್ರಭ ಓದುಗರ ಸಂಖ್ಯೆ ವೃದ್ಧಿ

ಕನ್ನಡ ದಿನಪತ್ರಿಕೆಗಳಾದ ಪ್ರಜಾವಾಣಿ ಮತ್ತು ಇತ್ತೀಚಿನ ದಿನಗಳಲ್ಲಿ ಅನೇಕಾನೇಕ ಕಾರಣಗಳಿಂದ ಸಾಕಷ್ಟು ಸುದ್ದಿಯಲ್ಲಿರುವ ಕನ್ನಡಪ್ರಭ ಪತ್ರಿಕೆಗಳನ್ನು ಹೊರತುಪಡಿಸಿದರೆ ಉಳಿದ ಎಂಟು ಪತ್ರಿಕೆಗಳ ಓದುಗರ ಸಂಖ್ಯೆಯಲ್ಲಿ ಇಳಿಮುಖ ದಾಖಲಾಗಿದೆ. ಈ ಮೊದಲ ಹತ್ತು ದಿನಪತ್ರಿಕೆಗಳಲ್ಲಿ ಕನ್ನಡ, ಇಂಗ್ಲಿಷ್, ಮರಾಠಿ ಮತ್ತು ತಮಿಳು ದಿನಪತ್ರಿಕೆಗಳು ಸೇರಿವೆ.
ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಪ್ರಸಾರದಲ್ಲಿ ಎರಡನೇ ಸ್ಥಾನದಲ್ಲಿರುವ ಪ್ರಜಾವಾಣಿ ಪ್ರಸಕ್ತ ತ್ರೈಮಾಸಿಕದಲ್ಲಿ 3.26 ಲಕ್ಷ ಓದುಗರನ್ನು ತನ್ನತ್ತ ಸೆಳೆದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ 1.41 ಲಕ್ಷ ಓದುಗರನ್ನು ಕಳೆದುಕೊಂಡಿದ್ದ ಪ್ರಜಾವಾಣಿ ಈ ಬಾರಿ ಕೊರತೆಯನ್ನು ತುಂಬಿಕೊಳ್ಳುವಲ್ಲಿ ಸಫಲವಾಗಿದೆ. ಪ್ರಜಾವಾಣಿ ಓಟ್ಟಾರೆ 57.73 ಲಕ್ಷ ಓದುಗರ ಸಂಖ್ಯೆಯನ್ನು ಪಡೆದಿದೆ.
ಕರ್ನಾಟಕದಲ್ಲಿ 4ನೇ ಸ್ಥಾನ ಮತ್ತು ಬೆಂಗಳೂರಿನಲ್ಲಿ 7ನೇ ಸ್ಥಾನ ಆಕ್ರಮಿಸಿರುವ ಕನ್ನಡಪ್ರಭ ದಿನಪತ್ರಿಕೆ 35 ಸಾವಿರ ಓದುಗರನ್ನು ಸೆಳೆದುಕೊಂಡು, ಕಳೆದ ತ್ರೈಮಾಸಿಕದಲ್ಲಿ ಕಳೆದುಕೊಂಡಿದ್ದ ಓದುಗರ ಅರ್ಧದಷ್ಟನ್ನು ಕ್ರಮಿಸಿ ಸಮಾಧಾನಕರ ಪ್ರಗತಿ ಸಾಧಿಸಿದೆ. ಈ ಪತ್ರಿಕೆಯ ಓಟ್ಟಾರೆ ಓದುಗರು 20.74 ಲಕ್ಷ.
ಕೆಲವರ್ಷಗಳಿಂದ ಕರ್ನಾಟಕದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿರುವ ಕರ್ನಾಟಕದ ನಂ.1 ಟೈಮ್ಸ್ ಗ್ರೂಪ್ ನ ಕನ್ನಡ ದಿನಪತ್ರಿಕೆ ವಿಜಯ ಕರ್ನಾಟಕ ಕಳೆದೆರಡು ತ್ರೈಮಾಸಿಕಗಳಿಂದ ಓದುಗರಿಂದ ಕೊಂಚ ದೂರ ಸರಿದಿದೆ. ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಆರಂಭದಿಂದಲೂ ಮುಂದಾಳತ್ವ ಕಾಯ್ದುಕೊಂಡು ಬಂದಿರುವ ದಿ ಟೈಮ್ಸ್ ಆಫ್ ಇಂಡಿಯಾ ಕೂಡ ಎಷ್ಟೇ ಹರಸಾಹಸ ಮಾಡುತ್ತಿದ್ದರೂ ಅಧಿಕ ಓದುಗರನ್ನು ಸೆಳೆಯಲು ಆಗುತ್ತಿಲ್ಲ.
ಈ ತ್ರೈಮಾಸಿಕದಲ್ಲಿ 3.3 ಲಕ್ಷದಷ್ಟು ಓದುಗರಿಂದ ದೂರಸರಿದಿರುವ ನಂ.1 ಕನ್ನಡ ದಿನಪತ್ರಿಕೆ ಕಳೆದ ತ್ರೈಮಾಸಿಕವೂ ಸೇರಿದಂತೆ ಒಟ್ಟು 8 ಲಕ್ಷ ಓದುಗರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕರ್ನಾಟಕದಲ್ಲಿ ಆರನೇ ಸ್ಥಾನದಲ್ಲಿರುವ ದಿ ಟೈಮ್ಸ್ ಆಫ್ ಇಂಡಿಯಾ ಇಳಿಮುಖದ ಹಾದಿಯಲ್ಲಿದ್ದು ಈ ಸುತ್ತಿನಲ್ಲಿ 98 ಸಾವಿರ ಓದುಗರನ್ನು ಆಕರ್ಷಿಸಲು ವಿಫಲವಾಗಿದೆ. ದೇಶದ ಅಗ್ರಮಾನ್ಯ ಆಂಗ್ಲ ದಿನಪತ್ರಿಕೆ ಬೆಂಗಳೂರಿನ 'ಬುದ್ಧಿವಂತ' ಓದುಗರನ್ನು ಸೆಳೆಯುವಲ್ಲಿ ಕುಂಟುತ್ತಿದೆ.
ಇನ್ನುಳಿದಂತೆ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿರುವ ಮತ್ತು ಬೆಂಗಳೂರಿನಲ್ಲಿ ಲಿಸ್ಟಿನಲ್ಲಿಯೇ ಇಲ್ಲದ ಸಂಯುಕ್ತ ಕರ್ನಾಟಕ, ಐದನೇ ಸ್ಥಾನ ಆಕ್ರಮಿಸಿರುವ ಕರಾವಳಿ ಜನರ 'ಡಾರ್ಲಿಂಗ್' ಉದಯವಾಣಿ, ಏಳನೇ ಸ್ಥಾನದಲ್ಲಿರುವ ಸಂಜೆ ಓದುಗರ ನೆಚ್ಚಿನ ಸಂಜೆವಾಣಿ, ಹತ್ತರಲ್ಲಿ ಕೆಳಗಿನಿಂದ ಮೂರನೇ ಸ್ಥಾನದಲ್ಲಿರುವ ಆಂಗ್ಲ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್, ಹಾಗೂ ಮೊದಲ ಹತ್ತು ಪಟ್ಟಿಯಲ್ಲಿ ಕಾಣಿಸಿಕೊಳ್ಳದ ದಿ ಹಿಂದೂ ಆಂಗ್ಲ ದಿನಪತ್ರಿಕೆಗಳು ಓದುಗರನ್ನು ಕಳೆದುಕೊಳ್ಳುತ್ತಲೇ ಸಾಗಿವೆ.
ಹತ್ತರಲ್ಲಿ ಕೊನೆ ಎರಡು ಸ್ಥಾನ ಗಿಟ್ಟಿಸಿರುವ ಬೆಳಗಾವಿಗರ ಬೆಳಗಿನ ಬಾತ್ಮಿದಾರ ಮಾರಾಠಿ ದಿನಪತ್ರಿಕೆ ತರುಣ್ ಭಾರತ್ ಮತ್ತು ಬೆಂಗಳೂರಿನ ತಮಿಳು ದಿನಪತ್ರಿಕೆ ಡೈಲಿ ತಂತಿ ಕೂಡ ಓದುಗರನ್ನು ಗಣನೀಯ ಪ್ರಮಾಣದಲ್ಲಿ ಕಳೆದುಕೊಂಡಿವೆ ಎಂದು ಐಆರ್ಎಸ್(IRS) ಸಮೀಕ್ಷೆ ಹೇಳಿದೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications