ಅಲ್ಪಸಂಖ್ಯಾತರ ಮೀಸಲಾತಿ ಏಕೆ ? ತೊಗಾಡಿಯಾ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರದ ಈ ಕ್ರಮವನ್ನು ವಿರೋಧಿಸಿ ದೇಶಾದ್ಯಂತ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು. ಧರ್ಮಾಧಾರಿತ ಮೀಸಲಾತಿ ನೀಡುವುದು ಕಾನೂನು ಬಾಹಿರ. ಹೀಗಿದ್ದರೂ, ಈ ವಿಚಾರದಲ್ಲಿ ಕೇಂದ್ರ ದಾರಿ ತಪ್ಪಿರುವುದು ಅಚ್ಚರಿ ಮೂಡಿಸಿದೆ. ಈ ಕಾರಣದಿಂದಲೇ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಅವರ ಮೂಲಕವೇ ರಾಷ್ಟ್ರಪತಿ ಹಾಗಬ ಪ್ರಧಾನಿಗಳ ಗಮನ ಸೆಳೆಯಲಾಗುವುದು ಎಂದರು.
ಪ್ರಧಾನಿ ಮನಮೋಹನ್ ಸಿಂಗ್ ಅವರು ಮೊಹ್ಮದ್ ಅಲಿ ಜಿನ್ನಾ ಮಾದರಿಯಲ್ಲಿ ಮುಸ್ಲಿಂರಿಗೆ ಉತ್ತೇಜನ ನೀಡುತ್ತಿದ್ದಾರೆ. ಕುಟುಂಬ ಕಲ್ಯಾಣ ಯೋಜನೆ ಕೇವಲ ಹಿಂದೂಗಳಿಗೆ ಸೀಮಿತವಾಗಿದೆ. ತಮ್ಮ ಜನ ಸಂಖ್ಯೆ ಹೆಚ್ಚಿಸಿಕೊಳ್ಳುವುದೇ ಮುಸ್ಲಿಂರ ಮೂಲ ಉದ್ದೇಶ. ಇದು ಭಾರತದ ಆರ್ಥಿಕತೆಗೆ ಧಕ್ಕೆಯುಂಟು ಮಾಡಲಿದೆ ಎಂದು ತೊಗಾಡಿಯಾ ವಿವರಿಸಿದರು.












Click it and Unblock the Notifications