Get Updates
Get notified of breaking news, exclusive insights, and must-see stories!

ಕಸಬ್ ಹಣೆಬರಹ ನಿರ್ಧಾರಕ್ಕೆ ಕ್ಷಣಗಣನೆ

ಮುಂಬೈ,ಮೇ.2: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ವಿಧ್ವಂಸಕದಾಳಿ ಹಾಗೂ ಹತ್ಯಾಕಾಂಡದ ಜರುಗಿ 17 ತಿಂಗಳುಗಳ ಬಳಿಕ ನಾಳೆ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸಲಿದೆ. ಇದರೊಂದಿಗೆ ಉಗ್ರ ಅಜ್ಮಲ್ ಅಮೀರ್ ಕಸಬ್ ನ ಹಣೆಬರಹ ನಿರ್ಧಾರವಾಗಲಿದೆ.

2008ರ 26/11ರ ಭಯೋತ್ಪಾದನಾ ದಾಳಿಯ ನಡೆಸಿದ ತಂಡದಲ್ಲಿ ಈಗ ಉಳಿದಿರುವ ಏಕೈಕ ಉಗ್ರ ಕಸಬ್ ಜೊತೆಗೆ , ಸಂಚು ರೂಪಿಸಲು ಸಹಕರಿಸಿದ ಭಾರತೀಯ ಹಣೆಬರಹವೂ ನಾಳೆ ತಿಳಿಯಲಿದೆ. ಲಷ್ಕರ್ ಇ ತೋಯ್ಬಾ ಸಂಘಟನೆಯ ಆದೇಶದ ಮೇರೆಗೆ ಫರೀದ್ ಕೋಟ್ ನ ನಿವಾಸಿಯಾಅದ ಕಸಬ್, ತನ್ನೊಂದಿಗೆ ಹತ್ತು ಜನ ಭಯೋತ್ಪಾದಕರನ್ನು ಮುಂಬೈಗೆ ಬಂದು, 26/11ದಾಳಿಯ ನೇತೃತ್ವ ವಹಿಸಿದ್ದ. ಈ ದಾಳಿಯಲ್ಲಿ 25 ವಿದೇಶಿಯರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು ಹಾಗೂ 305 ಜನ ಗಾಯಗೊಂಡಿದ್ದರು.

ಭಾರತದ ಫಾಹೀಮ್ ಅನ್ಸಾರಿ ಹಾಗೂ ಸಭಾವುದ್ದೀನ್ ಅಹ್ಮದ್ ಈ ದಾಳಿಯ ಸಂಚು ರೂಪಿಸಿರುವ ಆರೋಪ ಹೊತ್ತಿದ್ದಾರೆ. ಇದಲ್ಲದೆ, ಇತರೆ ಉದ್ದೇಶಿತ ಗುರಿಗಳ ನಕ್ಷೆಯನ್ನು ತಯಾರಿಸಿ ಲಷ್ಕರ್ ಮುಖಂಡರಿಗೆ ರವಾನಿಸಿರುವ ಆರೋಪವು ಇವರ ಮೇಲಿದೆ.ಎಲ್ಲಾ ಆರೋಪಿಗಳ ಆರೋಪ ಸಾಬೀತಾದರೆ ಮರಣದಂಡನೆ ಶಿಕ್ಷೆ ಸಿಗುವ ನಿರೀಕ್ಷೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+