ಕಸಬ್ ಹಣೆಬರಹ ನಿರ್ಧಾರಕ್ಕೆ ಕ್ಷಣಗಣನೆ

2008ರ 26/11ರ ಭಯೋತ್ಪಾದನಾ ದಾಳಿಯ ನಡೆಸಿದ ತಂಡದಲ್ಲಿ ಈಗ ಉಳಿದಿರುವ ಏಕೈಕ ಉಗ್ರ ಕಸಬ್ ಜೊತೆಗೆ , ಸಂಚು ರೂಪಿಸಲು ಸಹಕರಿಸಿದ ಭಾರತೀಯ ಹಣೆಬರಹವೂ ನಾಳೆ ತಿಳಿಯಲಿದೆ. ಲಷ್ಕರ್ ಇ ತೋಯ್ಬಾ ಸಂಘಟನೆಯ ಆದೇಶದ ಮೇರೆಗೆ ಫರೀದ್ ಕೋಟ್ ನ ನಿವಾಸಿಯಾಅದ ಕಸಬ್, ತನ್ನೊಂದಿಗೆ ಹತ್ತು ಜನ ಭಯೋತ್ಪಾದಕರನ್ನು ಮುಂಬೈಗೆ ಬಂದು, 26/11ದಾಳಿಯ ನೇತೃತ್ವ ವಹಿಸಿದ್ದ. ಈ ದಾಳಿಯಲ್ಲಿ 25 ವಿದೇಶಿಯರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು ಹಾಗೂ 305 ಜನ ಗಾಯಗೊಂಡಿದ್ದರು.
ಭಾರತದ ಫಾಹೀಮ್ ಅನ್ಸಾರಿ ಹಾಗೂ ಸಭಾವುದ್ದೀನ್ ಅಹ್ಮದ್ ಈ ದಾಳಿಯ ಸಂಚು ರೂಪಿಸಿರುವ ಆರೋಪ ಹೊತ್ತಿದ್ದಾರೆ. ಇದಲ್ಲದೆ, ಇತರೆ ಉದ್ದೇಶಿತ ಗುರಿಗಳ ನಕ್ಷೆಯನ್ನು ತಯಾರಿಸಿ ಲಷ್ಕರ್ ಮುಖಂಡರಿಗೆ ರವಾನಿಸಿರುವ ಆರೋಪವು ಇವರ ಮೇಲಿದೆ.ಎಲ್ಲಾ ಆರೋಪಿಗಳ ಆರೋಪ ಸಾಬೀತಾದರೆ ಮರಣದಂಡನೆ ಶಿಕ್ಷೆ ಸಿಗುವ ನಿರೀಕ್ಷೆಯಿದೆ.












Click it and Unblock the Notifications